ಬೆಂಗ್ಳೂರು ನಿವಾಸಿಗಳೇ ಎಚ್ಚರ- ಮನೆ ಮುಂದೇ ವಾಹನಗಳನ್ನು ನಿಲ್ಲಿಸೋ ಮುನ್ನ ಈ ಸುದ್ದಿ ಓದಿ

Public TV
1 Min Read
car bng

ಬೆಂಗಳೂರು: ಬೆಂಗಳೂರು ನಿವಾಸಿಗಳೇ ನಿಮ್ಮ ಮನೆ ಮುಂದೇ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವ ಮುನ್ನ ಒಮ್ಮೆ ಯೋಚಿಸಿ ಯಾಕೆ? ಅಂತೀರಾ ಈ ಸುದ್ದಿ ಓದಿ.

ಹೌದು. ನಗರದಲ್ಲಿ ವಾಹನ ಚಾಲಕನೊಬ್ಬ ಉದ್ದೇಶ ಪೂರಕವಾಗಿ ತನ್ನ ಕಾರನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿ ಚಾಲನೆ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ಗಿರಿನಗರದ ನಾಗೇಂದ್ರ ಬ್ಲಾಕ್‍ನಲ್ಲಿ ಈ ಘಟನೆ ನಡೆದಿದ್ದು, ಚಾಲಕನ ಈ ಹುಚ್ಚುತನಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಕಳೆದ ಶನಿವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಾಲಕನ ಹುಚ್ಚುತನದಿಂದ ಮನೆ ಮುಂದೆ ನಿಂತಿದ್ದ ದ್ವಿಚಕ್ರ ವಾಹನಗಳು ಜಖಂಗೊಂಡಿದ್ದು, ಸ್ಥಳೀಯ ನಿವಾಸಿ ತಿಮ್ಮಪ್ಪ ಎಂಬವರ ಹೋಂಡಾ ಆಕ್ಟೀವಾ ಬೈಕನ್ನು ಸುಮಾರು 500 ಮೀಟರ್ ದೂರವರೆಗೆ ಎಳೆದುಕೊಂಡು ಹೋಗಲಾಗಿದೆ. ಕಾರ್ ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ನೋಡಿದ ಬಳಿಕ ಸ್ಥಳೀಯರಲ್ಲಿ ಆತಂಕ ಮೂಡಿದೆ.

ದುಷ್ಕರ್ಮಿಯು ಉದ್ದೇಶ ಪೂರ್ವಕವಾಗಿಯೇ ಈ ಕೃತ್ಯವನ್ನು ನಡೆಸಿದ್ದು, ಸ್ಥಳೀಯರು ಅಪಘಾತದ ಶಬ್ಧ ಕೇಳಿ ಮನೆಯಿಂದ ಹೊರಬರುತ್ತಿದಂತೆ ಕಾರು ಸಮೇತ ವ್ಯಕ್ತಿ ಪರಾರಿಯಾಗಿದ್ದಾನೆ. ಘಟನೆಯ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

https://www.youtube.com/watch?v=N5I4ZAt_v5g

car bng6

 

car bng4

car bng3

car bng 2

car bng1

Share This Article
Leave a Comment

Leave a Reply

Your email address will not be published. Required fields are marked *