ಕರ್ನಾಟಕದ ರಣಜಿ ಕನಸು ಭಗ್ನ- 13 ವರ್ಷದ ಬಳಿಕ ಫೈನಲ್ ಪ್ರವೇಶಿಸಿದ ಬಂಗಾಳ

Public TV
2 Min Read
Bengal

ಕೋಲ್ಕತ್ತಾ: ರಣಜಿ ಕ್ರಿಕೆಟ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಟೂರ್ನಿ ಆರಂಭಿಸಿದ ಕರ್ನಾಟಕ ತಂಡದ ಕಪ್ ಗೆಲ್ಲುವ ಕನಸು ಭಗ್ನಗೊಂಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಬಂಗಾಳ 174 ರನ್ ಅಂತರದಿಂದ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿದೆ.

Bengal b

ಕರ್ನಾಟಕದ ತಂಡದ ವಿರುದ್ಧ ಜಯದೊಂದಿಗೆ ಬಂಗಾಳ 2006-07ರ ಟೂರ್ನಿಯ ಬಳಿಕ ಇದೇ ಮೊದಲ ಬಾರಿಗೆ ರಣಜಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶ ಮಾಡಿದೆ. ಇತ್ತ ಲೀಗ್ ಹಾಗೂ ಕ್ವಾರ್ಟರ್ ಫೈನಲಿನಲ್ಲಿ ಉತ್ತಮ ಪ್ರದರ್ಶನ ತೋರಿದರೂ ಸತತ ಮೂರನೇ ಬಾರಿಗೆ ಸೆಮಿಫೈನಲ್ ಹಂತದಲ್ಲಿ ಕರ್ನಾಟಕ ಟೂರ್ನಿಯಿಂದ ಹೊರಬಿದ್ದಿದೆ.

3 ವಿಕೆಟ್ ನಷ್ಟಕ್ಕೆ 98 ರನ್ ಗಳಿಂದ 4ನೇ ದಿನದಾಟ ಆರಂಭ ಮಾಡಿದ ಕರ್ನಾಟಕ ತಂಡ ಬಂಗಾಳ ವೇಗದ ಬೌಲರ್, ಮಜುಂದರ್ ದಾಳಿಗೆ ಸಿಲುಕಿದ ತಂಡ 55.3 ಓವರ್ ಗಳಲ್ಲಿ 177 ರನ್‍ಗಳಿಗೆ ಆಲೌಟ್ ಆಗುವ ಮೂಲಕ ಟೂರ್ನಿಯಿಂದ ಹೊರ ನಡೆಯಿತು. ತಂಡಕ್ಕೆ ಆಸೆಯಾಗುವ ನಿರೀಕ್ಷೆಯೊಂದಿಗೆ ಆಗಮಿಸಿದ ಕೆಎಲ್ ರಾಹುಲ್ ಶೂನ್ಯ ಸಾಧನೆಯೊಂದಿಗೆ ನಿರಾಸೆ ಮೂಡಿಸಿದರೆ, ದೇವ್‍ದತ್ತ್ ಪಡಿಕ್ಕಲ್ ಪಾತ್ರ 129 ಎಸೆತಗಳಲ್ಲಿ 62 ಸಿಡಿಸಿ ಹೋರಾಟ ತೋರಿದರು. ಉಳಿದಂತೆ ಅಂತಿಮ ಹಂತದಲ್ಲಿ ಅಭಿಮನ್ಯು ಮಿಥುನ್ 30 ಎಸೆತಗಳಲ್ಲಿ 38 ರನ್ ಗಳಿಸಿದ್ದು ತಂಡದ 2ನೇ ಇನ್ನಿಂಗ್ಸ್‍ನಲ್ಲಿ ಗಳಿಸಿದ 2ನೇ ಅತ್ಯಧಿಕ ಮೊತ್ತವಾಗಿದೆ.

ಪಂದ್ಯದ ಆರಂಭದಲ್ಲಿ ಗೆಲುವಿನ ನಿರೀಕ್ಷೆ ಮೂಡಿಸಿದ್ದ ಕರ್ನಾಟಕ ತಂಡದ ಆಟಗಾರರು ಟಾಸ್ ಗೆದ್ದ ಬಂಗಾಳ ತಂಡದವನ್ನು ಮೊದಲ ದಿನದಾಟದಲ್ಲೇ 67 ರನ್‍ಗಳಿಗೆ 6 ವಿಕೆಟ್ ಗಳಿಸಿ ಮಿಂಚಿದ್ದರು. ಆದರೆ ಅನುಸ್ತೂಪ್ ಮುಜುಮ್ದಾರ್ ಅಜೇಯ ಶತಕ (149 ರನ್) ಬಂಗಾಳ ತಂಡವನ್ನು ಸೋಲಿನಿಂದ ದೂರ ಮಾಡಿತ್ತು. ಪರಿಣಾಮ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

Bengal a

ಟೂರ್ನಿಯಲ್ಲಿ ತಮಿಳುನಾಡು ತಂಡದ ವಿರುದ್ಧ 26 ರನ್ ಅಂತರದ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದ ಕರ್ನಾಟಕ ತಂಡ ಆ ಬಳಿಕ ಉತ್ತರ ಪ್ರದೇಶ, ಹಿಮಾಚಲ ಪ್ರದೇಶದ ಪಂದ್ಯಗಳಲ್ಲಿ ಡ್ರಾ ಫಲಿತಾಂಶ ಪಡೆದಿತ್ತು. ಆದರೆ ಕ್ವಾಟರ್ ಫೈನಲಿನಲ್ಲಿ ಜಮ್ಮು ಕಾಶ್ಮೀರದ ವಿರುದ್ಧ 167 ರನ್ ಗಳಿಂದ ಗೆಲು ಸಾಧಿಸಿ ಸೆಮಿ ಪ್ರವೇಶಿಸಿತ್ತು.

ಸಂಕ್ಷಿಪ್ತ ಸ್ಕೋರ್: ಬಂಗಾಳ ಮೊದಲ ಇನ್ನಿಂಗ್ಸ್- 321/10
ಕರ್ನಾಟಕ ಮೊದಲ ಇನ್ನಿಂಗ್ಸ್- 122/10
ಬಂಗಾಳ 2ನೇ ಇನ್ನಿಂಗ್ಸ್- 161/10
ಕರ್ನಾಟಕ 2ನೇ ಇನ್ನಿಂಗ್- 177/10
ಫಲಿತಾಂಶ: ಬಂಗಾಳಕ್ಕೆ 174 ರನ್ ಗೆಲುವು
ಪಂದ್ಯ ಶ್ರೇಷ್ಠ ಪ್ರಶಸ್ತಿ: ಅನುಸ್ತೂಪ್ ಮಜುಂದಾರ್

Share This Article
Leave a Comment

Leave a Reply

Your email address will not be published. Required fields are marked *