ಅಸೆಂಬ್ಲಿಯಲ್ಲಿ ಮಾತನಾಡದವರು ಪಾರ್ಲಿಮೆಂಟ್‍ನಲ್ಲಿ ಮಾತಾಡಿರ್ತಾರಾ- ಶ್ರೀರಾಮುಲುಗೆ ಸಿದ್ದರಾಮಯ್ಯ ತಿರುಗೇಟು

Public TV
2 Min Read
SRIRAMULU Siddaramaiah

– ಅದೇನೇನು ಮಾತಾಡಿದ್ದಾರೆ ಪಾರ್ಲಿಮೆಂಟ್‍ನಲ್ಲಿ ದಾಖಲೆ ಕೊಡ್ರಪ್ಪ, ನೋಡೋಣ: ಮಾಜಿ ಸಿಂಎ ವ್ಯಂಗ್ಯ

ಬಳ್ಳಾರಿ: ವಿಧಾನಸಭೆಯಲ್ಲಿಯೇ ಮಾತನಾಡದಿದ್ದವರು, ಸಂಸತ್‍ನಲ್ಲಿ ಮಾತಾಡಿರ್ತಾರಾ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕ ಶ್ರೀರಾಮುಲು ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

ಜಿಲ್ಲೆಯ ಸಂಡೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ, ನಾನು ನಿನ್ನೆ ಹೂವಿನ ಹಡಗಲಿಯಲ್ಲಿ ಮಾತನಾಡುವಾಗ ಶ್ರೀರಾಮುಲು ಅವರು ಪಾರ್ಲಿಮೆಂಟ್‍ನಲ್ಲಿ ಬಾಯಿ ಬಿಟ್ಟಿಲ್ಲ ಎಂದಿದ್ದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಶಾಸಕರು ದಾಖಲೆ ನೀಡಿದ್ದಾರೆ. ಆದರೆ ಈಗಲು ಹೇಳುತ್ತೇನೆ ಶ್ರೀರಾಮುಲು ಅವರಿಗೆ 371 ಜೆ ಅಂದರೆ ಗೊತ್ತಿಲ್ಲ. ಜನಾರ್ದನ ರೆಡ್ಡಿ ಹಾಗೂ ಶಾಸಕರಿಗೆ ಗೊತ್ತಿರುವುದು ಐಪಿಸಿ ಸೆಕ್ಷನ್ ಮಾತ್ರ, ಮಾತ್ರ ಎಂದು ಮತ್ತೊಮ್ಮೆ ಲೇವಡಿ ಮಾಡಿದ್ದಾರೆ. ಇದನ್ನು ಓದಿ: ರಾಹುಲ್‍ಗಿಂತ ನಾನೇ ಆಕ್ಟೀವ್- ದಾಖಲೆ ರಿಲೀಸ್ ಮಾಡಿ ಸಿದ್ದರಾಮಯ್ಯಗೆ ಶ್ರೀರಾಮುಲು ತಿರುಗೇಟು

MYS Siddaramaiah

ನಾನು ಮುಖ್ಯಮಂತ್ರಿ ಆಗಿದ್ದಾಗ ಅವರು ಶಾಸಕರಾಗಿದ್ದರು, ಆಗ ಒಂದು ದಿನವು ಅಸೆಂಬ್ಲಿಯಲ್ಲಿ ಮಾತನಾಡಲಿಲ್ಲ. ಅವರು ಅಸೆಂಬ್ಲಿಗೆ ಬರುತ್ತಿರುವುದೇ ವಿರಳವಾಗಿತ್ತು. ವಿಧಾನಸಭೆಯಲ್ಲಿ ಮಾತನಾಡದವರು ಸಂಸತ್‍ನಲ್ಲಿ ಮಾಡನಾಡಿದ್ದಾರೆ ಎನ್ನುವುದೇ ಸಂದೇಹ ಎಂದ ಮಾಜಿ ಸಿಎಂ, ಪಾರ್ಲಿಮೆಂಟ್‍ನಲ್ಲಿ ಅದೇನೇನು ಮಾತನಾಡಿದ್ದಾರೆ ದಾಖಲೆ ಕೊಡ್ರಪ್ಪ ನೋಡೋಣ. ವಿದೇಶಾಂಗ ನೀತಿ ಬಗ್ಗೆ ಮಾತನಾಡಿದ್ದಾ? ರಾಜ್ಯದ ಬಗ್ಗೆ ಮಾತನಾಡಿದ್ದಾ? ರಾಜ್ಯದ ಬಗ್ಗೆ ಚರ್ಚೆ ಮಾಡಿದ್ದಾರಾ ದಾಖಲೆ ತನ್ನಿ ಎಂದು ಕಾಲೆಳೆದರು.

ಶ್ರೀರಾಮುಲು ಅವರಿಗೆ 371 ಜೆ ಬಗ್ಗೆ ಗೊತ್ತಿಲ್ಲ ಅಂದಿದ್ದು ಅವಮಾನವೇ? ಹಾಗಿದ್ದರೆ ಅವರು ಬಹಿರಂಗ ಚರ್ಚೆಗೆ ಬಂದರೆ ನಾನು ಸಿದ್ಧ. ವಕೀಲರೊಬ್ಬರು ಮಧ್ಯಸ್ಥಿಕೆಯಲ್ಲಿ ಚರ್ಚೆ ಮಾಡೋಣ. ರಿಪಬ್ಲಿಕ್ ಆಫ್ ಬಳ್ಳಾರಿ ಅಂತ ಸಂತೋಷ್ ಹೆಗ್ಡೆ ಅವರೇ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಇದನ್ನು ಹೇಳಿದರೆ ನಿನಗೆ ಯಾಕಪ್ಪ ಕೋಪ? ಜಾತಿ ಎತ್ತಿಕಟ್ಟೋಕೆ ನೋಡ್ತಿಯಾ? ನನಗೆ ಬೈದರೆ ಕುರುಬರಿಗೆ ಬೈಯ್ದ ಹಾಗಾ? ನಾನು ತಪ್ಪು ಮಾಡಿದರೆ ಕುರುಬರು ತಪ್ಪು ಮಾಡಿದ ಹಾಗಾ ಎಂದು ಪ್ರಶ್ನಿಸಿ ಶ್ರೀರಾಮುಲು ಅವರನ್ನು ತರಾಟೆಗೆ ತೆಗೆದುಕೊಂಡರು.

SRIRAMULU

ರಾಮಾಯಣ ಬರೆದ ವಾಲ್ಮೀಕಿ ಬಗ್ಗೆ ಅಪಾರ ಗೌರವ ಇಟ್ಟಕೊಂಡವರಲ್ಲಿ ನಾನು ಒಬ್ಬ. ವಾಲ್ಮಿಕೆ ಪ್ರತಿಮೆ ವಿಧಾನಸೌಧದ ಬಳಿ ಸ್ಥಾಪಿಸಿದ್ದು ನಮ್ಮ ಸರ್ಕಾರ. ವಾಲ್ಮೀಕಿ ಜನಾಂಗಕ್ಕೆ ನಿಮ್ಮ ಕೊಡುಗೆ ಏನು ಮಿಸ್ಟರ್ ರಾಮುಲು? ನಾ ಕಾವೋಂಗಾ ನಾ ಕಾನೇದೂಂಗಾ ಮೇ ಚೌಕಿ ದಾರ್ (ನಾನು ಭ್ರಷ್ಟಾಚಾರ ಮಾಡಲ್ಲ, ಭ್ರಷ್ಟಾಚಾರಕ್ಕೆ ಅವಕಾಶ ನೀಡಲ್ಲ, ನಾನೊಬ್ಬ ಭಾರತದ ಕಾವಲುಗಾರ) ಅಂತಾರೆ. ಮಿಸ್ಟರ್ ಚೌಕಿದಾರ್ ರಫೆಲ್ ಹಗರಣ ಎಷ್ಟು ದೊಡ್ಡ ಹಗರಣ ಗೊತ್ತಾ? 40 ಸಾವಿರ ಕೋಟಿ ರೂ. ಹಗರಣ. ಮಿಸ್ಟರ್ ಚೌಕಿದಾರ್ ವೈ ಯುರ್ ಕಿಪ್ ಇನ್ ಕೊಯ್ಟ್ (ಏಕೆ ನೀವು ಸುಮ್ಮನಿರುವಿರಿ). ಪ್ರಧಾನಿ ನರೇಂದ್ರ ಮೋದಿ ಅವರಷ್ಟು ಸುಳ್ಳು ಹೇಳುವ ಪ್ರಧಾನಿ ಇನ್ನೊಬ್ಬರನ್ನು ನಾನು ನೋಡಿಲ್ಲ ಎಂದು ಕಿಡಿಕಾರಿದರು.

sriramulu Rahul gandhi

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *