ಬೆಳಗಾವಿ: ಪೇದೆಗೆ ಚಾಕು ಇರಿದು ಪರಾರಿಯಾಗಲು ಯತ್ನಿಸಿದ ಗ್ಯಾಂಗ್ ರೇಪ್ ಆರೋಪಿಯ ಕಾಲಿಗೆ ಕಿತ್ತೂರು ಪೊಲೀಸರು (Kitturu Police) ಗುಂಡೇಟು ನೀಡಿದ್ದಾರೆ.
ಮುಂಜಾನೆ 6ಗಂಟೆಗೆ ಆರೋಪಿ ರಮೇಶ್ ಕಿಲ್ಲಾರ್ ಬಂಧನಕ್ಕೆ ಕಿತ್ತೂರು ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿ, ಪೊಲೀಸ್ ಪೇದೆ ಷರೀಫ್ ದಫೇದಾರ್ಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಪಿಎಸ್ಐ ಪ್ರವೀಣ್ ಗೊಂಗೊಳ್ಳಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ಮರ್ಯಾದಾ ಹತ್ಯೆ | ಅನ್ಯಜಾತಿ ಯುವಕನೊಂದಿಗೆ ಲವ್ – ಮಗಳನ್ನು ಕೊಂದು ಸುಟ್ಟುಹಾಕಿದ ತಂದೆ
ಪೊಲೀಸರ ಎಚ್ಚರಿಕೆಯನ್ನು ಕಡೆಗಣಿಸಿ, ಪರಾರಿಯಾಗಲು ಯತ್ನಿಸಿದಾಗ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿದೆ. ಗಾಯಗೊಂಡ ಆರೋಪಿಯನ್ನು ಹಾಗೂ ಪೊಲೀಸ್ ಸಿಬ್ಬಂದಿಯನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿ ರಮೇಶ್ ವಿರುದ್ಧ ಡಕಾಯಿತಿ, ದರೋಡೆ, ಸಾಮೂಹಿಕ ಅತ್ಯಾಚಾರ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಸೇರಿ ಹಲವು ಪ್ರಕರಣಗಳು ದಾಖಲಾಗಿದ್ದವು. ಇದನ್ನೂ ಓದಿ: ವ್ಯಕ್ತಿಯೊಬ್ಬನ ಜೊತೆ ತಂಗಿಗೆ ಸಂಬಂಧ – ಬ್ಲ್ಯಾಕ್ಮೇಲ್ ಮಾಡಿ ಅಣ್ಣನಿಂದಲೇ ಅತ್ಯಾಚಾರ