ಬೆಳಗಾವಿ: ಬಿಜೆಪಿಯವರು ನಾಲ್ಕು ಜನ ಶಾಸಕರನ್ನು ಇಟ್ಟುಕೊಂಡು ಮೀಟಿಂಗ್ ಮಾಡಿದ್ದೆ ಮಾಡಿದ್ದು, ಆದರೆ ಆ ನಾಲ್ಕು ಜನರು ನಮ್ಮ ಕಡೆಯೆ ಇದ್ದಾರೆ. ಸುಮ್ಮನೆ ಬಿಜೆಪಿಯವರನ್ನು ಆಟ ಆಡಿಸುತ್ತಿದ್ದು, ಅದು ಬಿಜೆಪಿಯವರಿಗೆ ಅರ್ಥ ಆಗುತ್ತಿಲ್ಲ ಎಂದು ಸಚಿವ ಆರ್.ಬಿ ತಿಮ್ಮಾಪುರ್ ವ್ಯಂಗ್ಯವಾಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಬೀಳುತ್ತೆ ಅನ್ನುವ ಭವಿಷ್ಯಗಳನ್ನು ಬಹಳಷ್ಟು ಕೇಳಿದ್ದೇವೆ. ಈ ರೀತಿಯ ಭವಿಷ್ಯದ ಮೇಲೆ ನಮಗೆ ನಂಬಿಕೆ ಹೋಗಿದೆ. ನಮ್ಮ ಶಾಸಕರು ನಮ್ಮ ಜೊತೆಯಲ್ಲೇ ಇದ್ದಾರೆ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕಾಂಗದ ನಾಯಕತ್ವದಲ್ಲಿ ಇರುವಾಗ ಅಮಿತ್ ಶಾ ಅಂತವರು ನೂರು ಜನ ಬಂದರು ಸರ್ಕಾರಕ್ಕೆ ಏನೂ ಮಾಡಲು ಆಗಲ್ಲ. ನೂರಕ್ಕೆ ನೂರಾ ಒಂದರಷ್ಟು ಸರ್ಕಾರ ಸುಭದ್ರವಾಗಿದೆ. ಡಿಸೆಂಬರ್ ನಲ್ಲಿ ನಮಗೆಲ್ಲಾ ರಾಜೀನಾಮೆ ಕೊಡು ಅಂದಿದ್ದಾರೆ. ನಾವು ರಾಜೀನಾಮೆ ಕೊಡಲು ಸಿದ್ಧರಿದ್ದೇವೆ. ನಮ್ಮ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸಿ ಸರ್ಕಾರ ಒಯ್ಯುತ್ತಿದ್ದಾರೆ. ರಾಹುಲ್ ಗಾಂಧಿ, ದೇವೇಗೌಡರ ನೇತೃತ್ವದಲ್ಲಿ ಮೈತ್ರಿ ಸರ್ಕಾರ ಸುಭದ್ರವಾಗಿ ನಡೆಸಿಕೊಂಡು ಹೋಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಸಿದ್ದರಾಮ್ಯರನ್ನು ಬೈದು ಈಶ್ವರಪ್ಪ ಲೀಡರ್ ಆಗುತ್ತೇನೆ ಎಂದು ಹೊರಟಿರುವುದು ದುರದೃಷ್ಟಕರ. ಈ ರೀತಿಯ ಭಾವನೆ ಅವರು ಬಿಡಬೇಕು ಮತ್ತು ವಿರೋಧ ಪಕ್ಷದಲ್ಲಿದ್ದು ಸರ್ಕಾರಕ್ಕೆ ಸಲಹೆ ಕೊಡುವ ಕೆಲಸ ಮಾಡಬೇಕು. ಈಶ್ವರಪ್ಪ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡುತ್ತಿದ್ದಾರೋ ಸಿದ್ದರಾಮಯ್ಯ ವಿರೋಧಿಯಾಗಿ ಕೆಲಸ ಮಾಡುತ್ತಿದ್ದರೋ ತಿಳಿಯುತ್ತಿಲ್ಲ ಎಂದು ಹೇಳಿದರು.
ಇಷ್ಟು ದಿನ ಸರ್ಕಾರ ಬಿದ್ದೆ ಹೋಯ್ತು ಇಂದು ಪ್ರಮಾಣವಚನ ಸ್ವೀಕರಿಸುತ್ತೇವೆ, ನಾಳೆ ಸ್ವೀಕರಿಸುತ್ತೇವೆ ಎಂದು ಕೋಟ್ ಹೊಲಸಿಕೊಂಡು ಓಡಾಡಿದ್ದೆ ಓಡಾಡಿದ್ದು. ಈಗ ಆ ಕೋಟ್ ಅನ್ನು ಬಿಜೆಪಿಯವರು ಎಲ್ಲಿ ತೆಗದು ಇಟ್ಟಿದ್ದರೋ ಗೊತ್ತಿಲ್ಲ. ಈಗ ಮತ್ತೆ ಡೈವರ್ಷನ್ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ನಾಯಕರನ್ನು ಕಾಲೆಳೆದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]