ಬೆಳಗಾವಿ: ಜಿಲ್ಲೆಯಲ್ಲಿ ಉಪಚುನಾವಣೆಯ ಕಾವು ಮುಗಿದ ಬೆನ್ನಲ್ಲೇ ಮತ್ತೊಂದು ಚುನಾವಣೆ ನಡೆದಿದ್ದು, ಜನತೆ ಸರದಿಯಲ್ಲಿ ನಿಂತು ಮತ ಚಲಾವಣೆ ಮಾಡಿದರು.
ಮಹಾನಗರ ಪಾಲಿಕೆಯ ಪಟ್ಟಣ ವ್ಯಾಪಾರ ಸಮಿತಿಯ ಎರಡು ಸ್ಥಾನಕ್ಕೆ ಶನಿವಾರ ಬೆಳಗಾವಿ ಕುಮಾರ ಗಂಧರ್ವ ರಂಗಮಂದಿರದಲ್ಲಿ ಮತದಾನ ಜರುಗಿತು. ಪಟ್ಟಣ ವ್ಯಾಪಾರ ಸಮಿತಿಯ ಚುನಾವಣೆಯ 13 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಎರಡು ಸ್ಥಾನಕ್ಕಾಗಿ ಮತದಾನ ನಡೆಯುತ್ತಿದೆ. ಸಂಜೆ 6ಕ್ಕೆ ಫಲಿತಾಂಶ ಹೊರ ಬಿಳಲಿದೆ.
ಚುನಾವಣೆಗೆ ಒಟ್ಟು ಆರು ಜನ ಸ್ಪರ್ಧಿಸಿದ್ದು, ಇಮಾಮ್ ನದಾಫ, ಇಮ್ರಾನ್ ಬಾಗವಾನ್, ಕಾಶಿನಾಥ್ ಮುಚ್ಚಂಡಿ, ಬಸಪ್ಪ ಗೆಜಪತ್ತಿ, ಯಲ್ಲಪ್ಪ ಕೊಪ್ಪದ, ಶರೀಫ್ ಖಾಜಿ ಚುನಾವಣಾ ಕಣದಲ್ಲಿದ್ದಾರೆ.
ಒಟ್ಟು 2,418 ಮತದಾರರಿದ್ದು, ಸಾಮಾನ್ಯ ಕೋಟಾದ ಎರಡು ಸ್ಥಾನಕ್ಕೆ ಆರು ನಾಮಪತ್ರ ಸಲ್ಲಿಕೆಯಾಗಿವೆ. ಎರಡು ಮಹಿಳಾ ಸ್ಥಾನ, ಒಂದು ಎಸ್ಸಿ, ವಿಕಲಚೇತನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುಣಾವಣಾಧಿಕಾರಿಯಾಗಿ ತಹಶೀಲ್ದಾರ್ ಆರ್.ಕೆ ಕುಲಕರ್ಣಿ ಕಾರ್ಯನಿರ್ವಹಿಸುತ್ತಿದ್ದಾರೆ.