ಬೆಳಗಾವಿ: ಕೃಷ್ಣಾ ನದಿ ಪ್ರವಾಹಕ್ಕೆ ಅಥಣಿ ತಾಲೂಕಿನ ಝುಂಜುರವಾಡ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಪ್ರವಾಹಕ್ಕೆ ಹೆದರಿ ಮನೆಗಳಿಗೆ ಬೀಗ ಜಡಿದು ಊರಿಗೆ ಊರೇ ಖಾಲಿಯಾಗಿದ್ದರೂ ಜೈನ ಮಹಾಮುನಿ ಮಾತ್ರ ಗ್ರಾಮ ಬಿಟ್ಟು ಕದಲುತ್ತಿಲ್ಲ.
ಸಮುದ್ರ ಸೇನ ಮಾಹಾಮುನಿಗಳು ಚಾತುರ್ಮಾಸ್ಯ ಆಚರಣೆಗಾಗಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದಾರೆ. ಗ್ರಾಮದ ಬಸ್ತಿಯಲ್ಲಿ ಮುನಿಗಳ ಚಾತುರ್ಮಾಸ್ಯ ಆಚರಣೆ ಮಾಡುತ್ತಿದ್ದು, ಚಾತುರ್ಮಾಸ್ಯ ವ್ರತ ಬಿಟ್ಟು ಗ್ರಾಮದಿಂದ ತೆರಳಲು ಮುನಿಗಳು ಮುಂದಾಗುತ್ತಿಲ್ಲ.
ಮುನಿಗಳನ್ನು ಬಿಟ್ಟು ಸಂಪೂರ್ಣ ಗ್ರಾಮಸ್ಥರನ್ನು ಪೊಲೀಸರು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ. ಮುನಿಗಳ ನಿಲುವಿನಿಂದ ಜೈನ ಭಕ್ತರು ಕಂಗೆಟ್ಟಿದ್ದಾರೆ. ಬೇರೆ ಕಡೆಗೆ ತೆರಳಿ ಎಂದು ಭಕ್ತರು ಪರಿ ಪರಿಯಾಗಿ ಕೇಳಿಕೊಂಡರೂ ಜೈನ ಮುನಿ ಮಾತ್ರ ಸ್ಥಳ ಬಿಟ್ಟು ಕದಲುತ್ತಿಲ್ಲ.