ಬೆಳಗಾವಿ: ಕಳೆದ ಹಲವಾರು ದಿನಗಳಿಂದ ಖಾನಾಪೂರ ಕಾಡಿನಲ್ಲಿ ಅಕ್ರಮವಾಗಿ ಬೇಟೆಯಾಡುತ್ತಿದ್ದ ಕಳ್ಳರ ಜಾಲವೊಂದನ್ನು ಗೋಲಿಹಳ್ಳಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ತಂಡವೊಂದು ಕಾಡುಪ್ರಾಣಿಗಳನ್ನು ತಡರಾತ್ರಿ ಬೇಟೆಯಾಡುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಸಿನೀಮಿಯ ರೀತಿಯಲ್ಲಿ ರೇಡ್ ಮಾಡಿ ಬಂಧನ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ನಿಚ್ಚನಕಿ ಗ್ರಾಮದ ಬಳಿ ಬಂದ ಆರೋಪಿಗಳನ್ನು ವಶಕ್ಕೆ ಪಡೆದಾಗ ಅವರ ಬಳಿ ಚಿಗರಿ ಮೃತ ದೇಹ ಹಾಗೂ ಕಾಡು ಮೊಲದ ಮೃತ ದೇಹಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದ ಭರಮಾ, ಮಲ್ಲೇಶ ಹಾಗೂ ಯವರಾಜ ಕಳೆದ ಹಲವಾರು ದಿನಗಳಿಂದಲೂ ವನ್ಯಜೀವಿಗಳನ್ನು ಕೊಂದು ಮಾಂಸವನ್ನು ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಗೋಲಿಹಳ್ಳಿ ಅರಣ್ಯಾಧಿಕಾರಿಗಳ ಕಡೊಲಕರ್ ತಂಡ ಈ ಕಾರ್ಯಚರಣೆ ಮಾಡಿದ್ದು ತನಿಖೆ ಆರಂಭವಾಗಿದೆ.