ಬೆಳಗಾವಿ: ಬಿಗ್ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯನ್ನು ಜನರು ಇಷ್ಟ ಪಡುವುದು ಮುಖ್ಯವಾಗಲ್ಲ. ವೋಟ್ ಮಾಡುವುದು ಮುಖ್ಯವಾಗುತ್ತದೆ ಎಂದು ಕನ್ನಡ ಚಲನಚಿತ್ರ ನಟ, ಬಿಗ್ಬಾಸ್ ಕನ್ನಡ ಮೊದಲ ಆವೃತ್ತಿಯ ವಿಜೇತ ವಿಜಯರಾಘವೇಂದ್ರ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಂಗಳವಾರ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಜನರು ಚರ್ಚೆ ನಡೆಸುವ ಹಾಗೆ ವೋಟ್ ಗಣನೆಗೆ ಬರುವುದಿಲ್ಲ ಎಂದರೆ ಅದು ತಪ್ಪಾಗುತ್ತದೆ. ಹಾಗಾದರೆ ನ್ಯಾಯಾಲಯ ಆ ಕಾರ್ಯಕ್ರಮ ನಡೆಸುವ ವಾಹಿನಿಗೆ ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತದೆ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಲ್ಲ ಎಂದರು.
- Advertisement 2
- Advertisement 3
ಯಾರೋ ಒಬ್ಬರು ಹೇಳಿದರು ಎಂದು ರಿಯಾಲಿಟಿ ಶೋಗಳಲ್ಲಿ ಅವರು ಗೆಲ್ಲಬೇಕಿತ್ತು. ಇವರು ಗೆಲ್ಲಬೇಕಿತ್ತು ಎನ್ನುವ ಮೊದಲು ವೋಟ್ ಮಾಡಿದ್ದೀರಾ ಎನ್ನುವುದು ಮುಖ್ಯವಾಗುತ್ತದೆ. ನಾನು ಆ ರಿಯಾಲಿಟಿ ಶೋನಲ್ಲಿ ಇದ್ದ ಕಾರಣ ಇದನ್ನು ಹೇಳುತ್ತಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುವ ಹಾಗೆ ಯಾವುದೂ ಆಗುವುದಿಲ್ಲ ಎಂದು ಹೇಳಿದರು.
- Advertisement 4
ಮಹದಾಯಿ ಸಮಸ್ಯೆ ಬಂದಾಗ ಕನ್ನಡ ಚಿತ್ರೋದ್ಯಮ ತಂಡ ಒಗ್ಗಟ್ಟಾಗಿ ಬಂದು ಹೋರಾಟ ಮಾಡಿದ್ದೇವೆ. ಚಿತ್ರ ಕಲಾವಿದರು ಕಾವೇರಿಗೆ ನೀಡಿದ ಪ್ರಾಸಸ್ತ್ಯ ಮಹದಾಯಿಗೂ ನೀಡಿದ್ದೇವೆ. ಇದರಲ್ಲಿ ಸಂದೇಹವೇ ಇಲ್ಲ. ಕೇವಲ ಚಿತ್ರೋದ್ಯಮ ತಂಡದವರು ಮಾತ್ರವಲ್ಲ. ಉತ್ತರ ಕರ್ನಾಟಕದ ಸಮಸ್ಯೆ ಬಂದಾಗ ಎಲ್ಲರೂ ಬಂದಿದ್ದಾರೆ. ಹಲವಾರು ಬಾರಿ ಈ ಭಾಗದ ವಿವಿಧ ಕಾರ್ಯಕ್ರಮಗಳಿಗೆ ಸ್ವತಃ ನಾನು ಬಂದಿದ್ದೇವೆ. ಮಹದಾಯಿ ಹೋರಾಟದಲ್ಲಿ ಇಡೀ ಚಿತ್ರೋದ್ಯಮವೇ ಬಂದಿದೆ. ಉತ್ತರ ಕರ್ನಾಟಕದ ಪ್ರವಾಹದ ಸಂದರ್ಭದಲ್ಲಿ ಎಲ್ಲರೂ ಸೇರಿಕೊಂಡು ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ತಿಳಿಸಿದರು.