ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆ ಆಗಿರುವುದು ಸಿಎಂ ಸಿದ್ದರಾಮಯ್ಯ ಅವರ ಪಾದಯಾತ್ರೆಗೆ ಸಿಕ್ಕ ಫಲ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ (HK Patil) ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಅಪರಾಧಿಗಳಿಗೆ ಕೋರ್ಟ್ ಶಿಕ್ಷೆ ನೀಡಿರುವುದು ಸಿದ್ದರಾಮಯ್ಯ (CM Siddaramaiah) ಪಾದಯಾತ್ರೆಗೆ ಸಿಕ್ಕ ಪ್ರತಿಫಲವಾಗಿದೆ. ಬಿಜೆಪಿ ಸರ್ಕಾರದಲ್ಲಿರುವಾಗ ದೇಶದ ಅತ್ಯಂತ ದೊಡ್ಡ ಲೂಟಿ ಹೊಡೆಯುವ ಪ್ರಕರಣ ಆಗಿತ್ತು. ಲಕ್ಷ ಲಕ್ಷ ಬೆಲೆ ಬಾಳುವ ಅದಿರು ಬಿಜೆಪಿ ಅವಧಿಯಲ್ಲಿ ಕಳ್ಳತನ ಆಗಿತ್ತು. ಇದಕ್ಕೆ ಸಂಬAಧಿಸಿದAತೆ ಕೋರ್ಟ್ ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದು, 44 ಕೋಟಿ ರೂ. ದಂಡ ಹೇರಿದೆ ಎಂದರು.ಇದನ್ನೂ ಓದಿ: ವಿಜಯಪುರ | ರೈತರಿಗೆ ವಕ್ಫ್ ಬೋರ್ಡ್ ಕೊಟ್ಟ ನೋಟಿಸ್ ವಾಪಸ್ ಪಡೆಯುತ್ತೇವೆ: ಹೆಚ್.ಕೆ. ಪಾಟೀಲ್
- Advertisement
ಬಿಜೆಪಿ ಸರ್ಕಾರದಲ್ಲಿರುವಾಗ ಈ ದೊಡ್ಡ ಅಕ್ರಮ ಆಗಿತ್ತು. ಈಗ ಇದನ್ನು ಮರೆಮಾಚುವುದಕ್ಕೆ ಬಿಜೆಪಿಯವರೇ ಬಂದು ಮಾತನಾಡುತ್ತಿದ್ದಾರೆ. ಅದಿರು ಕಳುವು ಮಾಡುವುದಕ್ಕೆ ಅಂದಿನ ಸರ್ಕಾರದ ಕುಮ್ಮಕ್ಕು ಇತ್ತು. ಅಂದು 6 ಲಕ್ಷ ಟನ್ ಖನಿಜ ರಫ್ತಾಗಿತ್ತು. ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಗೆ ಅವರು ಅಕ್ರಮ ಹೊರಗೆ ತಂದು, ವರದಿ ನೀಡಿದ್ದರು. ಅವರ ವರದಿಗೆ ತಾರ್ಕಿಕ ಅಂತ್ಯ ಬರುವುದಕ್ಕೆ ಪ್ರಾರಂಭವಾಗಿದೆ ಎಂದು ತಿಳಿಸಿದರು.
- Advertisement
ಸಿದ್ದರಾಮಯ್ಯ ಅವರು ಈ ಅಕ್ರಮದ ವಿರುದ್ಧ ಬಳ್ಳಾರಿವರೆಗೆ (Ballary) ಪಾದಯಾತ್ರೆ ಮಾಡಿದ್ದರು. ಸಿದ್ದರಾಮಯ್ಯ ಅವರ ಪ್ರಯತ್ನಕ್ಕೆ ಕೋರ್ಟ್ ನಿರ್ಣಯ ಮಾಡಿದೆ. ಕಳ್ಳರು ಎಲ್ಲೇ ಇರಲಿ ಅವರಿಗೆ ಶಿಕ್ಷೆ ಕೊಡುವುದು ಕೋರ್ಟ್ ಕೆಲಸವಾಗಿದೆ. ಈ ಅಕ್ರಮವನ್ನು ಮಟ್ಟ ಹಾಕಲು ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಸಿದ್ದರಾಮಯ್ಯನವರು ಪಾದಯಾತ್ರೆ ಮಾಡಿದಕ್ಕೆ ಯಶಸ್ಸು ಸಿಕ್ಕಿದೆ. ಕಾಂಗ್ರೆಸ್ ಶಾಸಕ ಬಂಧನ ಆಗಿರುವುದು ಸರ್ಕಾರಕ್ಕೆ ಮುಜುಗರವೇನು ಇಲ್ಲ ಎಂದು ಹೇಳಿದರು.ಇದನ್ನೂ ಓದಿ: ಮಳೆ ತಂದ ಸೌಭಾಗ್ಯ – ನಮ್ಮ ಮೆಟ್ರೋ ಆದಾಯದಲ್ಲಿ ಭಾರೀ ಏರಿಕೆ