ಬೆಳಕು ಇಂಪ್ಯಾಕ್ಟ್: ಕುಂಚದಲ್ಲಿ ಕೋಟೆ ನಾಡಿನ ಇತಿಹಾಸ ಬರೆಯುತ್ತಿದ್ದ ಕಲಾವಿದನ ಬಾಳಲ್ಲಿ ಮೂಡಿತು ರಂಗಿನೋಕುಳಿ

Public TV
1 Min Read
CTD BELAKU 3

ಚಿತ್ರದುರ್ಗ: ತಮ್ಮ ಕಲಾಕುಂಚದಿಂದ ಕೋಟೆನಾಡಿನ ಇತಿಹಾಸವನ್ನು ದೇಶಾದ್ಯಂತ ಬರೆದು ಸಾರಿದ್ದ ಕಲಾವಿದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾಗ ಮಾತ್ರ ಯಾರೊಬ್ಬರು ಆತನ ಕೈ ಹಿಡಿದಿರಲಿಲ್ಲ. ಕಲಾ ಪ್ರಾವೀಣ್ಯತೆ ಗುರುತಿಸಿದ್ದ ಪಬ್ಲಿಕ್ ಟಿವಿ ಕಲಾವಿದನ ಚಿಕಿತ್ಸೆಗೆ ನೆರವಾಗಿದ್ರಿಂದ ಮತ್ತೆ ಮರುಜನ್ಮ ಪಡೆದು ಈಗ ತನ್ನ ಕಲಾ ಕೌಶಲ್ಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ಕೋಟೆನಾಡಿನ ಕಲಾವಿದ ನಾಗರಾಜ್ ಮರುಜೀವ ಪಡೆದ ಚಿತ್ರಗಾರ. ತೆರೆದ ಹೃದಯ ಸರ್ಜರಿಗೆ ಹಣವಿಲ್ಲದೇ ಜೀವ ಉಳಿದರೆ ಸಾಕು, ಚಿಕಿತ್ಸೆಗಾಗಿ ನೆರವು ನೀಡಿ ಎನ್ನುವಷ್ಟು ಕುಗ್ಗಿಹೋಗಿದ್ದ ಕಲಾವಿದ, ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಚಿಕಿತ್ಸೆಯನ್ನ ನೀಡಿ ನನ್ನ ಕನಸು ನನಸು ಮಾಡುವಂತೆ ಕೇಳಿ ಕೊಂಡಿದ್ದರು. ಈಗ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ನೆರವಿನಿಂದಾಗಿ ಮತ್ತೆ ಮರುಜನ್ಮ ಪಡೆದು ತಮ್ಮ ಕಾಯಕವನ್ನು ಮುಂದುವರೆಸಿದ್ದಾರೆ.

CTD BELAKU 4

ಕೋಟೆನಾಡಿನ ಜನರಿಗೆ ಕಾಣಲಾಗದ ಅಪರೂಪದ ಸೌಂದರ್ಯದ ಸೊಬಗು ಹಾಗು ಕೋಟೆ ಕೊತ್ತಲಗಳನ್ನ ತಮ್ಮ ಚಿತ್ರಪಟಗಳ ಮೂಲಕ ದರ್ಶನ ಮಾಡಿಸಿ ನೆಮ್ಮದಿ ಜೀವನ ಮಾಡುತ್ತಿದ್ದಾರೆ. ಇತ್ತೀಚೆಗೆ ನಾಗರಾಜ್ ಅವರ ಚಿತ್ರಪಟಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಆಕರ್ಷಕ ಚಿತ್ರಪಟಗಳು, ಕಲಾಕೃತಿಗಳು ಹಾಗು ವಿಭಿನ್ನ ಅವೇಶಷಗಳನ್ನು ಕಂಡು ಪುಳಕಿತರಾದ ಕೋಟೆನಾಡಿನ ಜನರು ಕಲಾವಿದನ ಕೈಚಳಕ ಹಾಗೂ ಅಪರೂಪದ ದೃಶ್ಯಗಳ ಬಗ್ಗೆ ಸಂತಸ ವ್ಯಕ್ತಪಡಸಿದ್ದಾರೆ. ಅಲ್ಲದೇ ಈ ಅಪ್ರತಿಮ ಕಲಾವಿದನ ಜೀವ ಉಳಿಸಲು, ನಶಿಸಿ ಹೋಗುತ್ತಿದ್ದ ಕಲೆಯನ್ನು ಉಳಿಸಿದ ಪಬ್ಲಿಕ್ ಟಿವಿಗೆ ಅಭಿನಂದಿಸಿದ್ದಾರೆ. ಚಿಕಿತ್ಸೆಯಿಂದಾಗಿ ಮರುಜನ್ಮ ಪಡೆದ ನಾಗರಾಜ್ ಮತ್ತೆ ಹವ್ಯಾಸ ಮುಂದುವರೆಸಿರೋದು ಚಿತ್ರ ವೀಕ್ಷರಿಗೆ ಸ್ಥಳೀಯರಿಗೆ ಎಲ್ಲರಲ್ಲೂ ಸಂತಸ ಮೂಡಿಸಿದೆ.

CTD BELAku 1

Share This Article
Leave a Comment

Leave a Reply

Your email address will not be published. Required fields are marked *