ಬೆಳಗಾವಿ: ಪ್ರಯಾಣಿಕರೊಬ್ಬರು ಬಸ್ನಲ್ಲಿ ಬಿಟ್ಟು ಹೋಗಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಹಿಂದಿರುಗಿಸುವ ಮೂಲಕ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಪ್ರಾಮಾಣಿಕತೆ ಮೆರೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿಯಿಂದ ಜಮಖಂಡಿಗೆ ಸಂಪರ್ಕ ಕಲ್ಪಿಸುವ ಬಸ್ಸಿನಲ್ಲಿ ರಡ್ಡರಹಟ್ಟಿ ಗ್ರಾಮದ ಮಹಿಳೆ ಜಮಖಂಡಿಯಿಂದ ಅಥಣಿಗೆ ಬರುವಾಗ ಬಸ್ಸಿನಲ್ಲಿ ಬಂಗಾರ ಇದ್ದ ಕೈಚೀಲ ಮರೆತು ಹೋಗಿದ್ದರು. ಇದನ್ನು ಕಂಡಕ್ಟರಾದ ಪ್ರಶಾಂತ್ ಕಟಗೇರಿ ಗಮನಿಸಿ ಘಟಕದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಎಮ್ಮೆ ಹಾಲು ಕೊಡ್ತಿಲ್ಲ, ಯಾರೋ ಮಾಟ ಮಾಡ್ಸಿದ್ದಾರೆಂದು ಪೊಲೀಸ್ ಠಾಣೆಗೆ ದೂರು ನೀಡಿದ ರೈತ!
15 ಗ್ರಾಮ ಚಿನ್ನ ಮತ್ತು 10 ಗ್ರಾಮ ಬೆಳ್ಳಿ ಆಭರಣ ಕಳೆದುಕೊಂಡಿದ್ದ ಮಹಿಳೆಗೆ ಘಟಕದ ವ್ಯವಸ್ಥಾಪಕ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಶಾಂತ್ ಕಟಗೇರಿ ಆಭರಣಗಳನ್ನು ಹಸ್ತಾಂತರಿಸಿದರು. ಇದನ್ನೂ ಓದಿ: 1.50 ಕೋಟಿ ರೂ. ಮೋಸ – ಶಿಲ್ಪಾ ಶೆಟ್ಟಿ ದಂಪತಿ ವಿರುದ್ಧ FIR
ಅಥಣಿ ಕೆಎಸ್ಆರ್ಟಿಸಿ ಘಟಕದ ಹಿರಿಯ ಅಧಿಕಾರಿಗಳಿಂದ ಪ್ರಶಾಂತ್ ಕಟಗೇರಿ ಪ್ರಾಮಾಣಿಕತೆ ಕಾರ್ಯಕ್ಕೆ ಅವರನ್ನು ಸನ್ಮಾನಿಸಲಾಯಿತು. ಕಂಡಕ್ಟರ್ ಕಾರ್ಯಕ್ಕೆ ಅಥಣಿ ಜನತೆ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.