ಚಿಕ್ಕೋಡಿ (ಬೆಳಗಾವಿ): ಶನಿವಾರ ಆಂಜನೇಯನ ವಾರ ಎನ್ನುವ ವಾಡಿಕೆ. ಹೀಗಾಗಿ ಅಂದು ಆಂಜನೇಯನ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬರುತ್ತದೆ. ಆದರೆ ಭಕ್ತರ ಜೊತೆಗೆ ಹನುಮನ ಅವತಾರ ಎನ್ನುವ ಕೋತಿ ಆಂಜನೇಯನಿಗೆ ನಡೆಯುವ ಮಂಗಳಾರತಿ ವೇಳೆ ದೇವಸ್ಥಾನದಲ್ಲಿ ಹಾಜರಾಗುತ್ತಿದೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಜಾಗನೂರು ಗ್ರಾಮದ ಸುಪ್ರಸಿದ್ಧ ಹನುಮ ದೇವಾಲಯದಲ್ಲಿ ಕೋತಿ ಕಳೆದ ಒಂದು ವಾರದಿಂದ ಮಂಗಳಾರತಿ ಸಂದರ್ಭದಲ್ಲಿ ಹಾಜರಾಗಿ, ಆಂಜನೇಯನ ದರ್ಶನ ಪಡೆಯುತ್ತಿದೆ. ಜೊತೆಗೆ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಆಶೀರ್ವಾದ ಮಾಡುತ್ತಿದೆ.
ಈ ಕೋತಿಯನ್ನು ಜನ ಅಷ್ಟೇ ಪ್ರೀತಿಯಿಂದ ಹಾರೈಸುತ್ತಿದ್ದು ಹನುಮನಿಗೆ ತಂದ ಪ್ರಸಾದವನ್ನು ಕೋತಿಗೆ ನೀಡುತ್ತಿದ್ದಾರೆ. ಕೋತಿ ಆಗಮನದಿಂದ ದೇವಸ್ಥಾನದಲ್ಲಿ ಸಾಕ್ಷಾತ್ ಆಂಜನೇಯನೇ ನಮಗೆ ದರ್ಶನ ನೀಡಿದ್ದಾನೆ ಎನ್ನುವ ಭಾವನೆಯನ್ನ ಭಕ್ತರು ವ್ಯಕ್ತಪಡಿಸುತ್ತಿದ್ದಾರೆ. ಕೋತಿಯನ್ನ ನೋಡಲು ಭಕ್ತರ ದಂಡೇ ದೇವಸ್ಥಾನಕ್ಕೆ ಹರಿದು ಬರುತ್ತಿದೆ.