ಸಿದ್ದರಾಮಯ್ಯನನ್ನು ಕಾಂಗ್ರೆಸ್‌ನಿಂದಲೇ ಹೊರಹಾಕ್ತಾರೆ: ಮುನಿರತ್ನ ಹೊಸ ಬಾಂಬ್

Public TV
1 Min Read
Munirathna

ಬೆಂಗಳೂರು: 2023ರ ಒಳಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಕಾಂಗ್ರೆಸ್‌ನಿಂದಲೇ ಹೊರಹಾಕ್ತಾರೆ ಎಂದು ಸಚಿವ ಮುನಿರತ್ನ ಭವಿಷ್ಯ ನುಡಿದಿದ್ದಾರೆ.

ಅವರಿಂದು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 2023ರ ಒಳಗೆ ಸಿದ್ದರಾಮಯ್ಯನನ್ನು ಪಾರ್ಟಿಯಿಂದಲೇ ಹೊರಹಾಕ್ತಾರೆ ನೋಡಿ. ರಾಮಕೃಷ್ಣ ಹೆಗಡೆ ಜಾಗದಲ್ಲಿ ಸಿದ್ದರಾಮಯ್ಯ ಇದ್ದಾರೆ. 1994ರಲ್ಲಿ ಆಗಿದ್ದ ಘಟನೆ ಮತ್ತೆ 2023ಕ್ಕೆ ಆಗುತ್ತೆ ನೋಡಿ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಸ್ವಾಮೀಜಿಗಳ ಪಲ್ಲಕ್ಕಿ ಉತ್ಸವಕ್ಕೆ ಬ್ರೇಕ್ – ನಿರ್ಬಂಧ ಹೇರಿದ್ರೆ ನಾನೇ ಪಲ್ಲಕ್ಕಿ ಹೊರುತ್ತೇನೆಂದ ಅಣ್ಣಾಮಲೈ 

sumalatha ambarish

ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸುಮಲತಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರ ಕುರಿತು ವರಿಷ್ಠರು ನಿರ್ಧಾರ ಮಾಡ್ತಾರೆ. ನನಗೆ ಜವಬ್ದಾರಿ ವಹಿಸಿದ್ರೆ ನಾನು ಇಂದೇ ಸುಮಲತಾ ಪಕ್ಷಕ್ಕೆ ಕರೆತರುವ ಕೆಲಸ ಆರಂಭ ಮಾಡ್ತೇನೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *