ಕಿತ್ತಾಡಿ 20 ಅಡಿ ಆಳದ ಬಾವಿಗೆ ಬಿದ್ದ ಕರಡಿ – ಅರಣ್ಯಾಧಿಕಾರಿಗಳಿಂದ ರಕ್ಷಣೆ

Public TV
1 Min Read
rmg bear

ರಾಮನಗರ: ಆಹಾರ ಅರಸಿ ಬಂದ ಕರಡಿಯೊಂದು ನೀರಿಲ್ಲದ ಬಾವಿಗೆ ಬಿದ್ದು ಸತತ ಏಳು ಗಂಟೆಗಳ ಕಾಲ ನರಳಾಡಿದ ಘಟನೆ ರಾಮನಗರ ತಾಲೂಕಿನ ಯರೇಹಳ್ಳಿ ಗ್ರಾಮದಲ್ಲಿ ನಡೆದಿದೆ.

rmg bear 22

ಜಮೀನಿನಲ್ಲಿ ಬೆಳೆದಿದ್ದ ಸಪೋಟ ಹಾಗೂ ಮುಸುಕಿನ ಜೋಳವನ್ನು ತಿನ್ನಲು ಶುಕ್ರವಾರ ಎರಡು ಕರಡಿಗಳು ಬಂದಿದ್ದವು. ಈ ವೇಳೆ ಕರಡಿಗಳು ಕಿತ್ತಾಡಿಕೊಂಡಿದ್ದನ್ನು ಜಮೀನಿನ ಮಾಲೀಕ ಅಂಗಡಿ ಕುಮಾರ್ ನೋಡಿದ್ದಾರೆ.

ಇಂದು ಬೆಳಗ್ಗೆ ಕುಮಾರ್ ತೋಟಕ್ಕೆ ಹೋದಾಗ ನೀರಿಲ್ಲದ 20 ಅಡಿ ಆಳದ ಬಾವಿಯ ಒಳಗಡೆ ಕಿರುಚಾಡುತ್ತಿದ್ದ ಒಂದು ಕರಡಿಯನ್ನು ಗಮನಿಸಿದ್ದಾರೆ. ಈ ಕುರಿತು ತಕ್ಷಣವೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

rmg bear 3

ಮಧ್ಯಾಹ್ನ 1 ಗಂಟೆಯ ವೇಳೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನದ ವೈದ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಕರಡಿಗೆ ಅರವಳಿಕೆ ಚುಚ್ಚುಮದ್ದು ನೀಡಿ ರಕ್ಷಿಸಿದ್ದಾರೆ. ಕರಡಿ 20 ಅಡಿಯಷ್ಟು ಆಳದ ಬಾವಿಗೆ ಬಿದ್ದಿದ್ದರಿಂದ ಗಾಯಗಳಾಗಿವೆ. ಚಿಕಿತ್ಸೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *