Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಿದ್ದರಾಮಯ್ಯ ಹೇಳಿದ ತಕ್ಷಣ ಯಾವುದೂ ಸತ್ಯ ಆಗಲ್ಲ: ಬಿ.ಸಿ.ಪಾಟೀಲ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಸಿದ್ದರಾಮಯ್ಯ ಹೇಳಿದ ತಕ್ಷಣ ಯಾವುದೂ ಸತ್ಯ ಆಗಲ್ಲ: ಬಿ.ಸಿ.ಪಾಟೀಲ್

Districts

ಸಿದ್ದರಾಮಯ್ಯ ಹೇಳಿದ ತಕ್ಷಣ ಯಾವುದೂ ಸತ್ಯ ಆಗಲ್ಲ: ಬಿ.ಸಿ.ಪಾಟೀಲ್

Public TV
Last updated: October 16, 2021 4:48 pm
Public TV
Share
3 Min Read
PATIL
SHARE

– ಬಿಎಸ್‍ವೈಗೆ ದೊಣ್ಣೆ ನಾಯಕನ ಅಪ್ಪಣೆ ಏನು ಬೇಡ

ಹಾವೇರಿ: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ ತಕ್ಷಣ ಯಾವುದೂ ಸತ್ಯ ಆಗಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹಾವೇರಿಯಲ್ಲಿ ಕಿಡಿಕಾರಿದರು.

ಹಾನಗಲ್‍ನ ಚೀರನಹಳ್ಳಿ ಗ್ರಾಮದಲ್ಲಿ ಬಿ.ಸಿ ಪಾಟೀಲ್ ಅವರು ಪ್ರಚಾರ ಕೈಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಸಂಗೂರು ಶುಗರ್ ಫ್ಯಾಕ್ಟರಿಗೆ ನುಂಗಿ ನೀರು ಕುಡಿದರು ಎಂಬ ಸಿದ್ದರಾಮಯ್ಯ ಅವರ ಆರೋಪ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ 2017 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಸಿದ್ದರಾಮಯ್ಯ ಅವರು ಬಂದಾಗ ನಾನೂ ಇದ್ದೆ. ಆಗಲೂ ಸಿದ್ದರಾಮಯ್ಯ ಉದಾಸಿ ಅವರ ಮೇಲೆ ಹಲವು ಗಂಭೀರ ಆರೋಪ ಮಾಡಿದರು. ಆದರೆ ಅದ್ಯಾವುದನ್ನೂ ಜನ ಕೇಳಲಿಲ್ಲ, ಉದಾಸಿ ಅವರು ಗೆದ್ದು ಬಂದಿದ್ದರು. ಸಿದ್ದರಾಮಯ್ಯ ಅವರು ಹೇಳಿದ ತಕ್ಷಣ ಯಾವುದೂ ಸತ್ಯ ಅಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಸಜ್ಜನರನ್ನೇ ಗೆಲ್ಲಿಸ್ತೀರೋ? ಅಥವಾ ದುರ್ಜನರನ್ನ ಗೆಲ್ಲಿಸ್ತೀರೋ? ನಾವು ಮತದಾರರನ್ನ ಕೇಳ್ತೇವೆ ಎಂದರು. ಇದನ್ನೂ ಓದಿ: ನೀವೇ ಎತ್ತಾಕ್ತಿರಾ, ಇಲ್ಲಾ ನಾನೇ ಎತ್ತಿ ಹಾಕ್ಲಾ – ತೊಂದ್ರೆ ಕೊಡ್ತಿದ್ದ ವ್ಯಕ್ತಿಯ ವಿರುದ್ಧ ರೇವಣ್ಣ ಆಕ್ರೋಶ

Siddaramaiah 1

ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಪ್ರಚಾರಕ್ಕೆ ಬರಲು ಮನಸ್ಸಿಲ್ಲ. ಬಿ.ಎಲ್ ಸಂತೋಷ್ ಮೂಲಕ ಅವರನ್ನು ಬಲವಂತದಿಂದ ಪ್ರಚಾರಕ್ಕೆ ಕರೆದುಕೊಂಡು ಬರಲಾಗ್ತಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಬಿ.ಎಲ್ ಸಂತೋಷ್ ಫೋನ್ ಮಾಡಿ ಹೇಳಿದ್ರಾ? ಇವರ ಊಹೆಗೆ ನಾವು ಉತ್ತರ ಕೊಡೋಕೆ ಆಗಲ್ಲ. ಯಡಿಯೂರಪ್ಪ ಅವರು ಪ್ರಬುದ್ಧ ನಾಯಕ. ಪಕ್ಷದ ಋಣ ತೀರಿಸೋದಾಗಿ ಹೇಳಿದ್ದಾರೆ. ಬಿಎಸ್‍ವೈಗೆ ದೊಣ್ಣೆ ನಾಯಕನ ಅಪ್ಪಣೆ ಏನು ಬೇಡ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಅವರು ಕೇಳಿದ ಪ್ರಶ್ನೆಗೆಲ್ಲ ಉತ್ತರ ಕೊಡೋಕೆ ಆಗಲ್ಲ. ಸಿದ್ದರಾಮಯ್ಯ ಅವರನ್ನು ಕೇಳಿಕೊಂಡು ಯಡಿಯೂರಪ್ಪ ಬರಬೇಕಾ? ಯಡಿಯೂರಪ್ಪ ಅವರು ಎರಡು ಸ್ಥಾನದಿಂದ 110 ಸ್ಥಾನ ತಂದಿದ್ದಾರೆ. ಉಪಚುನಾವಣೆ ಬಂದಿದೆ, ಬಿಎಸ್‍ವೈ ಬರ್ತಾರೆ. ಇವರ ಪರ್ಮಿಷನ್ ತಗೊಬೇಕಾ ಯಡಿಯೂರಪ್ಪ ಅವರು? ಎಂದು ಕಿಡಿಕಾರಿದರು. ಇದನ್ನೂ ಓದಿ: ಮಾಜಿ ಮಂತ್ರಿ ಎನ್.ಎಚ್ ಶಿವಶಂಕರರೆಡ್ಡಿ ವಿರುದ್ಧ ನಿಂದನೆ ಆರೋಪ -ಆಡಿಯೋ ವೈರಲ್

ರಾಮಮಂದಿರ ವಿಚಾರವಾಗಿ ಮಾತನಾಡಿದ ಅವರು, ರಾಮಮಂದಿರಕ್ಕೆ ಎಲ್ಲರಿಂದ ಒಂದೊಂದು ಇಟ್ಟಿಗೆ ಸಂಗ್ರಹ ಮಾಡ್ತಿದ್ದಾರೆ. ಅದೇ ಇಟ್ಟಿಗೆಯಲ್ಲಿ ದೇವಸ್ಥಾನ ಕಟ್ಟತ್ತಾರೆ ಎಂದು ಯಾವ ಮೂರ್ಖನೂ ಹೇಳಲ್ಲ. ರಾಮಮಂದಿರ ಭಾವನೆಗಳ ಸಂಕೇತ. ರಾಮಮಂದಿರ 2023 ಕ್ಕೆ ಲೋಕಾರ್ಪಣೆ ಆಗಲಿದೆ. ಅದನ್ನು ಕಟ್ಟೋಕೆ ಸಾವಿರಾರು ಕೋಟಿ ಕೊಡೋಕೆ ಹಲವರು ಸಿದ್ಧರಿದ್ದಾರೆ. ಆದರೆ ಮಂದಿರದ ಟ್ರಸ್ಟ್ ಅವರು ಇದು ಭಾರತೀಯರ ರಾಮಮಂದಿರ ಆಗಬೇಕು. ಇದು ಪ್ರತಿಯೊಬ್ಬರ ಬೆವರ ಹನಿಯ ಸಂಕೇತ ಆಗಬೇಕು ಅಂತ ಹೇಳಿದ್ದಾರೆ ಎಂದರು.

HDK 1

ಆಯಕಟ್ಟಿನ ಜಾಗಗಳಲ್ಲಿ ಆರ್‍ಎಸ್‍ಎಸ್ ಅವರೇ ಇದ್ದು, ಲಕ್ಷಾಂತರ ಹಣ ತಗೊಳ್ತಾರೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಅಧಿಕಾರದಲ್ಲಿ ಇದ್ದಾಗ ಅವರ ಬಳಗ ಇತ್ತು. ಸಿದ್ದರಾಮಯ್ಯ ಅವರು ಇದ್ದಾಗ ಅವರ ಭಕ್ತರೇ ಇದ್ದರು. ಆಯಾ ಸರ್ಕಾರ ಬಂದಾಗ ಇರೋದು ಸಹಜ. ಜನರ ಮೈಂಡ್ ಡೈವರ್ಟ್ ಮಾಡೋಕೆ ಕುಮಾರಸ್ವಾಮಿ ಅವರು ಆ ರೀತಿ ಮಾತಾಡ್ತಾರೆ. ಆದರೆ ಮತದಾರ ಪ್ರಭು ಬುದ್ಧಿವಂತ. ಮತದಾರ ಈಗಾಗಲೇ ಯಾರಿಗೆ ವೋಟ್ ಹಾಕಬೇಕು ಎಂದು ತೀರ್ಮಾನ ಮಾಡಿರ್ತಾನೆ ಎಂದು ತಿಳಿಸಿದರು.

ಪ್ರಸ್ತುತ ಹಾನಗಲ್‍ನ ಚೀರನಹಳ್ಳಿ ಗ್ರಾಮದಲ್ಲಿ ಪ್ರಚಾರದಲ್ಲಿರುವ ಇವರು ಈ ಕುರಿತು ಮಾತನಾಡಿದ್ದು, ಇವತ್ತಿನಿಂದ ಪ್ರಚಾರ ಆರಂಭಿಸಿದ್ದೇನೆ. ಬಿಜೆಪಿ ಅಭ್ಯರ್ಥಿ ಗೆಲ್ಲಿಸುತ್ತೇವೆ. ನಾಳೆಯಿಂದ 7 ಜನ ಸಚಿವರು ಇಲ್ಲೇ ಇರ್ತೇವೆ. ಸಿಎಂ ಬೊಮ್ಮಯಿ ನಾಳೆ ಹಾಗೂ 21, 22, 26, 27 ಹಾನಗಲ್‍ನಲ್ಲಿ ಪ್ರಚಾರ ಮಾಡ್ತಾರೆ. ಬಿಜೆಪಿಗೆ ಅನುಕೂಲ ಮಾಡಲೆಂದೇ ಕುಮಾರಸ್ವಾಮಿ ಅವರು ಟೀಕೆ ಮಾಡ್ತಿದ್ದಾರೆ ಎಂದರು.

ಕುಮಾರಸ್ವಾಮಿ ಅವರು ಸಿಎಂ ಆಗಿ ಎರಡು ಬಾರಿ ಕೆಲಸ ಮಾಡಿದ್ದಾರೆ. ಅವರು ಒಂದು ಪ್ರಾದೇಶಿಕ ಪಕ್ಷದ ನಾಯಕರ ಆಗಿ ಮಾತಾಡ್ತಾರೆ. ಆದರೆ ಸಿದ್ದರಾಮಯ್ಯ ಅವರು ಏಕೆ ಆ ರೀತಿ ಹೇಳ್ತಾರೋ ಗೊತ್ತಿಲ್ಲ. ಇವರು ಯಾರನ್ನು ಓಲೈಕೆ ಮಾಡ್ತಿದ್ದಾರೆ ಹಾಗಾದರೆ? ಮಾತೆತ್ತಿದರೆ ಅಲ್ಪಸಂಖ್ಯಾತರಿಗೆ 13,000 ಕೋಟಿ ಬಜೆಟ್ ನಲ್ಲಿ ಕೊಡ್ತೀನಿ ಅಂತಾರೆ. ಈಗಿನಿಂದಲೇ ಆಮಿಷ ಒಡ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಹೇಳಿಕೆ ಅಲ್ಲವಾ? ಎಂದು ಪ್ರಶ್ನಿಸಿದರು.

TAGGED:B.C.PatilKumaraswamyPublic TVsiddaramaiahಕುಮಾರಸ್ವಾಮಿಪಬ್ಲಿಕ್ ಟಿವಿಬಿ.ಸಿ. ಪಾಟೀಲ್ಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

Pavithra Gowda 1
ಪವಿತ್ರಗೌಡಗೆ ಮನೆ ಊಟ ನಿರಾಕರಿಸಿದ್ದು ಒಳ್ಳೆಯದು – ಅಲೋಕ್ ಕುಮಾರ್
Cinema Districts Karnataka Latest Sandalwood Shivamogga States Top Stories
CM Siddaramaiah congratulates Gilli Nata on winning Kannada Bigg Boss
ಬಿಗ್‌ಬಾಸ್‌ ಗೆದ್ದ ಗಿಲ್ಲಿಯನ್ನು ಅಭಿನಂದಿಸಿದ ಸಿಎಂ
Bengaluru City Cinema Districts Karnataka Latest Top Stories TV Shows
Payal Changappa
ʻಅಮೃತ ಅಂಜನ್‌ʼ ಸಿನಿಮಾದ ಫೀಲಿಂಗ್‌ ಸಾಂಗ್‌ ರಿಲೀಸ್‌
Cinema Latest Sandalwood
Life Ellind Ellige
`ಲೈಫ್ ಎಲ್ಲಿಂದ ಎಲ್ಲಿಗೆ’ ಅಂತ ಹಾಡಿದ ಟೀಮ್
Cinema Latest Sandalwood Top Stories

You Might Also Like

01 21
Big Bulletin

ಬಿಗ್‌ ಬುಲೆಟಿನ್‌ 22 January 2026 ಭಾಗ-1

Public TV
By Public TV
2 hours ago
Rajeshwari Gayakwad
Cricket

ಕನ್ನಡತಿ ರಾಜೇಶ್ವರಿ ಮ್ಯಾಜಿಕ್‌, 45 ರನ್‌ಗಳ ಜಯ – ಕೊನೆಯಲ್ಲಿದ್ದ ಗುಜರಾತ್‌ 2ನೇ ಸ್ಥಾನಕ್ಕೆ ಜಂಪ್‌

Public TV
By Public TV
2 hours ago
02 18
Big Bulletin

ಬಿಗ್‌ ಬುಲೆಟಿನ್‌ 22 January 2026 ಭಾಗ-2

Public TV
By Public TV
2 hours ago
03 15
Big Bulletin

ಬಿಗ್‌ ಬುಲೆಟಿನ್‌ 22 January 2026 ಭಾಗ-3

Public TV
By Public TV
2 hours ago
Leopard
Chamarajanagar

ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತನ ಕೊಂದಿದ್ದ ಚಿರತೆ ಸೆರೆ – ಮೃತನ ಕುಟುಂಬಕ್ಕೆ 5 ಲಕ್ಷ ಪರಿಹಾರ ವಿತರಣೆ

Public TV
By Public TV
3 hours ago
let recruitment case nia court sentences key accused to 10 years ri
Crime

ಉಗ್ರ ಸಂಘಟನೆಗೆ ಯುವಕರ ನೇಮಕಾತಿ ಪ್ರಕರಣ – ಶಿರಸಿಯ ವ್ಯಕ್ತಿಗೆ 10 ವರ್ಷ ಕಠಿಣ ಶಿಕ್ಷೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?