ತುಮಕೂರು: ಅನಿವಾರ್ಯವಾಗಿ ಕೆಲವು ಹೆಣ್ಣುಮಕ್ಕಳು ಕುಂಕುಮ, ಸಿಂಧೂರ ವಿಷಯಗಳನ್ನು ಎತ್ತಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಪಟೂರಿನಲ್ಲಿ ಹೇಳಿದರು.
ಹಿಜಬ್ ಜೊತೆ ಈಗ ಪ್ರಾರಂಭವಾಗಿರುವ ಕುಂಕುಮ ವಿವಾದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಷಯನೇ ಇಲ್ದೇ ಹೈಕೋರ್ಟ್ನಲ್ಲಿ ಈ ಬಗ್ಗೆ ಮಾತನಾಡುವ ಒಂದಿಷ್ಟು ಲಾಯರ್ ಗಳನ್ನೂ ನಾನು ನೋಡಿದ್ದೇನೆ. ಸದ್ಯಕ್ಕೆ ಸಮವಸ್ತ್ರದ ಮಾತುಗಳನ್ನ ಬಿಟ್ರೆ ಇನ್ಯಾವ ವಿಚಾರಗಳೂ ಕೋರ್ಟ್ ಮುಂದೆ ಬಂದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಲಂಡನ್ ಮಾರುಕಟ್ಟೆಯಲ್ಲಿ ಒಂದು ಹಲಸಿನ ಹಣ್ಣಿಗೆ 16,000 ರೂ!
1885ರಿಂದ ಯಾವ ಸಮವಸ್ತ್ರ ಧರಿಸಿಕೊಂಡು ಬರುತ್ತಿದ್ದರೋ ಅದೇ ಸಮವಸ್ತ್ರಗಳನ್ನ ಧರಿಸಿಕೊಂಡು ಬರಬೇಕು ಎಂಬುದು ಸರ್ಕಾರದ ಆದೇಶ. ಎಲ್ಲರಿಗೂ ಇದು ಗೊತ್ತೇ ಇದೆ. ಹಿಜಬ್, ಕೇಸರಿ ಶಾಲು, ಸ್ಕಾರ್ಪ್ಗಳನ್ನು ಹಾಕಿಕೊಂಡು ಬರಬಾರ್ದು ಎಂದು ಕೋರ್ಟ್ ಮಧ್ಯಂತರ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. ನಾನು ಮನವಿ ಮಾಡುತ್ತೇನೆ. ಈ ತರಹದ ಇಶ್ಯೂಗಳನ್ನ ತೆಗೆದು ಸಮಾಜದಲ್ಲಿರುವಂತ ಸಾಮರಸ್ಯವನ್ನ ಹಾಳುಮಾಡಬೇಡಿ ಎಂದು ಕೇಳಿಕೊಂಡರು.
ಇದ್ರಲ್ಲಿ ಕಾಣದ ಕೈ ಅಂತೇನಿಲ್ಲ. ಕಾಣುವ ಕೈ ಎಲ್ಲವನ್ನೂ ಮಾಡ್ತಿದೆ. ಸಿಎಫ್ಐ ಸಂಘಟನೆ ಬಂದಿದೆ. ರಾಜಕೀಯ ನಾಯಕರು ಏನೇನು ಮಾತನಾಡುತ್ತಿದ್ದಾರೆ ಎಂಬುದನ್ನ ನಾವು ನೋಡ್ತಿದ್ದೇವೆ ಎಂದರು. ಇದನ್ನೂ ಓದಿ: ರೋಡ್ ಶೋ ವೇಳೆ ಕಾರಿನ ಮೇಲಿಂದ ಕೆಳಗೆ ಬಿದ್ದ ಪವನ್ ಕಲ್ಯಾಣ್!