ಸಭೆಯಲ್ಲಿ ಲಸಿಕೆ, ಹಬ್ಬಗಳ ನಡುವೆ ವೈರಸ್ ನಿಯಂತ್ರಣ ಕುರಿತು ಚರ್ಚೆ: ಗೌರವ್ ಗುಪ್ತ

Public TV
2 Min Read
GOWRAV GUPTHA

ಬೆಂಗಳೂರು: ಗಣೇಶ ಹಬ್ಬ ಆಚರಣೆ ಸಂಬಂಧ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಸಭೆಯಲ್ಲಿ ಕೊರೊನಾ ಲಸಿಕೆ ಮತ್ತು ಹಬ್ಬಗಳ ನಡುವೆ ವೈರಸ್ ನಿಯಂತ್ರಣ ಕುರಿತು ಚರ್ಚಿಸಲಾಗುತ್ತದೆ. ಈಗಾಗಲೇ ಹೊರಡಿಸಿರುವ ಮಾರ್ಗಸೂಚಿ ಪುನರ್ ಪರಿಶೀಲಿಸಲು ಸರ್ಕಾರಕ್ಕೆ ಹಕ್ಕಿದೆ, ಈ ಬಗ್ಗೆ ಪಾಲಿಕೆ ತನ್ನ ಅಭಿಪ್ರಾಯ ಸ್ಪಷ್ಟಪಡಿಸಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.

mud ganesha medium

ಗಣೇಶ ಹಬ್ಬ ಆಚರಣೆ ವಿಚಾರವಾಗಿ ಇಂದು ಸಿಎಂ ಸಭೆಯಲ್ಲಿ ಎಲ್ಲ ಚರ್ಚೆ ಆಗಲಿದೆ. ಸದ್ಯಕ್ಕಂತೂ ಈ ಹಿಂದೆ ನೀಡಿರುವ ಮಾರ್ಗಸೂಚಿ ಆಧಾರದಲ್ಲೇ ಎಲ್ಲ ಪಾಲನೆ ಆಗಲಿದೆ. ಗಣೇಶ ಹಬ್ಬ ಹಿನ್ನೆಲೆಯಲ್ಲಿ ಮಾರುಕಟ್ಟೆ ಕ್ಲೋಸ್ ವಿಚಾರವೂ ಸದ್ಯಕ್ಕೆ ಇದೆಲ್ಲ ಸಾಧ್ಯವಿಲ್ಲ ಎನ್ನುತ್ತಾ, ಜನರು ಕೆಲವು ಗಂಟೆಗಳ ಕಾಲ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಹಾಗಾಗಿ ಮಾರುಕಟ್ಟೆ ಕ್ಲೋಸ್ ವಿಚಾರ ಬಂದಿಲ್ಲ. ಜನರು ಮಾಸ್ಕ್ ಸರಿಯಾದ ಕ್ರಮದಲ್ಲಿ ಧರಿಸಿದರೆ ಹೆಚ್ಚು ಉಪಯುಕ್ತವಾಗಲಿದೆ. ಕಡೆಗೆ ಟಫ್ ರೂಲ್ಸ್ ಮಾತ್ರ ಜಾರಿಗೊಳಿಸಿದರೆ ಸಾಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಡ್ರಗ್ಸ್ ಕೇಸ್ – ಉದ್ಯಮಿ, ಸೆಲೆಬ್ರಿಟಿ, ಡಿಜೆ ಮನೆಗಳ ಮೇಲೆ ದಾಳಿ

Corona a

ಕೊರೊನಾ ಲಸಿಕೆ ವಿಚಾರದಲ್ಲಿ ಹೊಸ ಆಲೋಚನೆಗಳಿವೆ. ಮನೆ-ಮನೆಗೆ ಲಸಿಕೆ ಎಂಬ ಆಲೋಚನೆ ಇದೆ. ಸದ್ಯಕ್ಕಂತೂ ಮಾರ್ಗಸೂಚಿ ಪ್ರಕಾರ ಮೆಡಿಕಲ್ ಸೆಂಟರ್ ನಲ್ಲಿ ಲಸಿಕೆ ಕೊಡಬೇಕು -ಮೆಡಿಕಲ್ ಎರ್ಮಜೆನ್ಸಿ ಅಟೆಂಡ್ ಮಾಡಬೇಕು ಅಂತ ಚರ್ಚೆ ಆಗಿದೆ. ಆದರೆ ಸದ್ಯ ಶೇ.75 ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಶೇ.90 ರಷ್ಟು ಜನರಿಗೆ ಲಸಿಕೆ ನೀಡುವ ಲೆಕ್ಕಾಚಾರ ಇದೆ. ಈ ಹಂತದಲ್ಲಿ ಮನೆ ಮನೆ ಲಸಿಕೆ ಬಗ್ಗೆ ತಜ್ಞರು ಅಭಿಪ್ರಾಯ ಕೊಡಬೇಕಾಗಿದೆ ಎಂದರು.

VACCINE 4

ಕೆಲವೊಂದು ಕಾರ್ಮಿಕ ವರ್ಗ ವಾಸಿಸುವ ಕಡೆ ಅತಿ ಹೆಚ್ಚು ಲಸಿಕಾ ಕೇಂದ್ರ ಸ್ಥಾಪಿಸಬೇಕು ಎಂಬ ಚರ್ಚೆ ಇದೆ. ದುಡಿಯುವ ವರ್ಗದ ಜನರಿಗೆ ಬೆಳಗ್ಗೆಯೇ ಲಸಿಕೆ ನೀಡುವ ಲೆಕ್ಕಾಚಾರವಿದೆ. ಮುಂದೆ ಕೆಲಸ ಮುಗಿಸಿ ಬಂದ ನಂತರ ಲಸಿಕೆ ಕೊಡುವ ಬಗ್ಗೆಯೂ ಯೋಚನೆ ಆಗಿದೆ. ಕೆಲವೆಡೆ 24″ 7 ಲಸಿಕೆ ನೀಡಿಕೆ ಬಗ್ಗೆ ಚರ್ಚೆ ನಡೆದಿದೆ. ನಿನ್ನೆ 90 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ. ವೈರಸ್ ವೇರಿಯಂಟ್ ಬಗ್ಗೆ ಮಾಹಿತಿ ಇದೆ. ರೋಗ ನಿರೋಧಕ ಶಕ್ತಿ ಎಷ್ಟಿದೆ ಎಂಬ ಬಗ್ಗೆಯೂ ಗುರುತು ಮಾಡುವ ಕೆಲಸವೂ ನಡೆದಿದೆ. ಈ ಸಂಬಂಧಿತ ಫಲಿತಾಂಶ ಬರುತ್ತಿದೆ. ಡೆಲ್ಟಾ ಹಾಗೂ ಡೆಲ್ಟಾ+ ಸಂಬಂಧಿತ ಸ್ಟ್ರೇನ್ಸ್ ಸಂಬಂಧ ಜಿನೋಮಿಕ್ ಸಿಕ್ವೆನ್ಸ್ ನಡೆಯುತ್ತಲೇ ಇದೆ. ವ್ಯಾಕ್ಸಿನ್ ಹೆಚ್ಚಳದ ನಂತರ – ಎರಡನೇ ಅಲೆ ಹಿನ್ನೆಲೆಯಲ್ಲಿ ಬಹಳಷ್ಟು ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಕಂಡು ಬಂದಿದೆ. ಇಷ್ಟೇ ಸಂಖ್ಯೆಯ ಹೆಚ್ಚಳ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುತ್ತದೆ ಎಂದರು.  ಇದನ್ನೂ ಓದಿ: ಜೇಬಿನಲ್ಲೇ ಸದಾ ಕಾಂಡೋಮ್ ಇಟ್ಕೊಂಡು ತಿರುಗಾಡುತ್ತಿದ್ದ ಕಾಮುಕ

ಐಡೆನ್ ಸಿಟಿ ಕಾರಿಡಾರ್ ಕೆಆರ್‍ಡಿಸಿಎಲ್‍ಗೆ ನೀಡಿ ವಿಳಂಬ ವಿಚಾರದ ಬಗ್ಗೆ ಮಾತನಾಡಿ, ಪಾಲಿಕೆ ಹಿಂದಿನ ಆಯುಕ್ತ ರಸ್ತೆ ನಿರ್ವಹಣೆ ಬೇರೆ ಕಡೆ ನೀಡಿದ್ದಕ್ಕೆ ಅಸಮಾಧಾನ ಹೊರಹಾಕಿದರು. ಆದರೆ ಇದರ ಬಗ್ಗೆ ನಾನೇನು ಹೇಳುವುದಿಲ್ಲ. ಸ್ವಂತ ಅಭಿಪ್ರಾಯವೂ ಹೇಳಲ್ಲ. ಬೆಂಗಳೂರಿನ ಹಲವು ರಸ್ತೆಗಳ ನಿರ್ವಹಣೆ ಪಾಲಿಕೆ ಮಾಡುತ್ತಲೇ ಇದೆ. ಅದಕ್ಕಾಗಿಯೇ ಅಧಿಕಾರಿಗಳ ತಂಡವೂ ಇದೆ. ಇದಕ್ಕಾಗಿ ವಿಶೇಷವಾಗಿ ಯುಟಿಲಿಟಿಸ್ ವಿಚಾರವಾಗಿ ಬೆಸ್ಕಾಂ, ಜಿಡಬ್ಲ್ಯೂಎಸ್‍ಎಸ್‍ಬಿ ಎಲ್ಲವನ್ನೂ ಹಿಡಿತದಲ್ಲಿ ಇಟ್ಟು ಕೆಲಸ ಮಾಡಿಸುವ ಲೆಕ್ಕ ಪಾಲಿಕೆಗೆ ಇದೆ. ರಸ್ತೆ ನಿರ್ವಹಣೆಗೆ ಬೇರೆ ಸಂಸ್ಥೆ ಬರುವುದಾದರೆ ಇದನ್ನು ಕಲಿಯಲೇ ಬೇಕಾಗುತ್ತದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *