ಬೆಂಗಳೂರು: ಬಿಬಿಎಂಪಿ (BBMP) ಆಪರೇಷನ್ ರಾಜಕಾಲುವೆ ಕಾರ್ಯಾಚರಣೆ ನಡೆಸುತ್ತಿದ್ದು, ಇಂದಿನಿಂದ ರಾಜಧಾನಿಯಲ್ಲಿ ಮತ್ತೆ ಜೆಸಿಬಿಗಳು (JCB) ಘರ್ಜಿಸಲಿವೆ. 15 ದಿನದಲ್ಲಿ 100 ತೆರವಿಗೆ ಟಾರ್ಗೆಟ್ ಹಾಕಿಕೊಳ್ಳಲಾಗಿದೆ.
ಇಂದು (ಶನಿವಾರ) ಮಹಾದೇವಪುರ, ಕೆ.ಆರ್ ಪುರಂನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದೆ. 15 ದಿನದಲ್ಲಿ 100 ತೆರವು ಕಾರ್ಯಾಚರಣೆ ಮಾಡೋ ಗುರಿ ಹೊಂದಲಾಗಿದೆ. 571 ಕಡೆ ತೆರವು ಮಾಡಬೇಕಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಇದನ್ನೂ ಓದಿ: ಚಿಪ್ಸ್ ಕರೆಯುವ ಎಣ್ಣೆ ಬಾಣಲೆಗೆ ಬಿದ್ದಿದ್ದ 25 ರ ಯುವಕ ಸಾವು
ಮಹಾದೇವಪುರ ವಲಯದ ಮೊನೆನುಕೊಳಲು ಬಳಿಯ ಸ್ಪೈಸ್ ಗಾರ್ಡನ್ನಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ. 22 ಬಿಲ್ಡಿಂಗ್ಗಳನ್ನ ಮಾರ್ಕ್ ಮಾಡಿದ್ದು, ಇದರಲ್ಲಿ ನಿರ್ಮಾಣ ಹಂತದ ಕಟ್ಟಡಗಳು, ಗೋಡೆಗಳು ಮತ್ತು ಖಾಲಿ ಸೈಟ್ಗಳು ಕೂಡ ಇವೆ. 21 ಬಿಲ್ಡಿಂಗ್ಗಳನ್ನ ಹಂತಹಂತವಾಗಿ ತೆರವು ಕಾರ್ಯಾಚರಣೆ ಮಾಡಲಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಯಿಂದ ಕಾರ್ಯಾಚರಣೆ ಶುರುವಾಗಲಿದೆ. ಕೋರ್ಟ್ನಿಂದ ತಡೆ ತಂದವರ ವಿರುದ್ಧ ಕಾನೂನು ಸಮರಕ್ಕೆ ಕೂಡ ಬಿಬಿಎಂಪಿ ಮುಂದಾಗಿದೆ. ಇದರ ಮಧ್ಯೆ ಸರ್ವೇ ರಿಪೋರ್ಟ್ ಒಂದು ಹೊರಬಿದ್ದಿದ್ದು, 30 ಸರ್ವೆ ನಂಬರ್ಗಳಲ್ಲಿ 571 ಕಡೆ ತೆರವು ಬಾಕಿ ಇದೆ. ಈಗಾಗಲೇ 2017 ರಿಂದ ಸುಮಾರು 2,951 ಒತ್ತುವರಿ ಗುರುತಿಸಿದ್ದು, 2,267 ತೆರವು ಮಾಡಲಾಗಿದೆ. ಇದನ್ನೂ ಓದಿ: ಊರಿಗೆ ಹೋಗೋಣವೆಂದು ಕರ್ಕೊಂಡು ಬಂದು ಮಕ್ಕಳೆದುರೇ ದಾರಿ ಮಧ್ಯೆ ಪತ್ನಿಯನ್ನ ಹೊಡೆದು ಕೊಂದ!
2023 ನೇ ಸಾಲಿನಲ್ಲಿ 88 ಒತ್ತುವರಿಗಳನ್ನ ತೆರವುಗೊಳಿಸಲಾಗಿದೆ. 118 ಕಡೆ ತಡೆ ತರಲಾಗಿದೆ. 666 ಕಡೆ ತೆರವು ಮಾಡಲು ಕ್ರಮ ವಹಿಸಲಾಗಿದೆ. ಇನ್ನೂ ವಲಯವಾರು ತಡೆ ಎಷ್ಟಿದೆ ಎಂದು ನೋಡಬೇಕಿದೆ.