ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಕಂಟ್ರೋಲ್ ರೂಂ ಮೇಲ್ವಿಚಾರಕನ ದರ್ಬಾರ್ ಶುರುವಾಗಿದ್ದು, ಇವರಿಗೆ ಗಾಳಿ ಬೀಸೋದಕ್ಕೂ ಸರ್ಕಾರಿ ಸಂಬಳ ಕೊಡಬೇಕಾ ಅನ್ನೋ ಪ್ರಶ್ನೆಯೊಂದು ಎದ್ದಿದೆ.
ಬೆಂಗಳೂರು ಮಹಾನಗರ ಪಾಲಿಕೆಯ ಕ್ಲಾಸ್ 4 ನೌಕರ ಸುಬ್ರಮಣ್ಯ ಅಂಧ ದರ್ಬಾರ್ ಮಾಡುತ್ತಿದ್ದು, ಇವರು ಬಿಬಿಎಂಪಿಯ ಕೊಠಡಿಯ ಕಂಟ್ರೋಲ್ ರೂಮಿನ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದಾರೆ. ಮರ ಕಡಿಯುವರು, ಪಾಲಿಕೆ ಕೆಳ ವರ್ಗದ ನೌಕರರನ್ನು ಈಗ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮೇಲ್ವಿಚಾರಕ ಗಾಳಿ ಬೀಸಿಕೊಳ್ಳುತ್ತಿರೋ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಕಳೆದ 3- 4 ವರ್ಷಗಳಿಂದ ಕಂಟ್ರೋಲ್ ರೂಂ ಜೊತೆ ಎಲ್ಲ ಕಂಟ್ರೋಲ್ ಇರುವ ನೌಕರನಾಗಿದ್ದು, ಮಾತು ಶುರು ಮಾಡಿದರೆ ಸಾಕು ಕಮೀಷನರ್, ಮಿನಿಸ್ಟರ್ ಹೆಸರು ಹೇಳುತ್ತಾರೆ. ಇವರ ಅಡಿಯಲ್ಲಿ ಬರುವ ಕೆಳ ವರ್ಗದ ನೌಕರರನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮೇಲ್ವಿಚಾರಕ ಚೇರ್ ಮೇಲೆ ಕುಳಿತುಕೊಂಡು ಮೊಬೈಲ್ ಬಳಸುತ್ತಿದ್ದಾರೆ. ಆದರೆ ಅವರ ಪಕ್ಕದ ಎರಡನೇ ಚೇರ್ ಮೇಲೆ ಕೆಳ ನೌಕರ ಕುಳಿತುಕೊಂಡು ಅವರಿಗೆ ಗಾಳಿ ಬೀಸುತ್ತಿದ್ದಾರೆ. ಸರ್ಕಾರಿ ಸಂಬಳ ಕೊಡುವುದು ಕಚೇರಿಯ ಕೆಲಸವನ್ನು ಮಾಡುವುದಕ್ಕೆ, ಆದರೆ ಮೇಲ್ವಿಚಾರಕ ತನಗೆ ಗಾಳಿ ಬೀಸಿಕೊಳ್ಳುವ ಮೂಲಕ ಗಾಳಿ ಬೀಸುವುದಕ್ಕೂ ಸರ್ಕಾರಿ ಸಂಬಳ ಕೊಡಬೇಕಾ ಎಂಬ ಮಾತುಗಳು ಕೇಳಿ ಬರುತ್ತಿದೆ.
ಮೇಲ್ವಿಚಾರಕನು ಪಾಲಿಕೆ ವರ್ಗಾವಣೆ, ನೇಮಕಾತಿ, ವ್ಯಜ್ಯಗಳನ್ನ ಬರೀ ಅವಾಜ್ ಹಾಕುತ್ತಲೇ ಬಗೆಹರಿಸುವ ಮಾಸ್ಟರ್ ಎಂಬ ಮಾತು ಕೂಡ ಇದೆ. ಆದರೆ ಇವರು ಕೆಳವರ್ಗದ ಜನರಿಂದ ಗಾಳಿ ಬೀಸಿಕೊಳ್ಳುತ್ತಿರುವುದು ಎಷ್ಟು ಸರಿ ಎಂದು ಜನಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv