‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ವಿಜೇತ ಹನುಮಂತ ಲಮಾಣಿ ಅವರು ‘ಬಿಗ್ ಬಾಸ್’ ಗೆಲುವಿನ ಬಗ್ಗೆ ಮಾಧ್ಯಮದೊಂದಿಗೆ ಸಂಭ್ರಮ ಹಂಚಿಕೊಂಡಿದ್ದಾರೆ. ನನ್ನ ಗೆಲುವಿಗೆ ಕರ್ನಾಟಕದ ಜನತೆ ಕಾರಣ ಎಂದು ಖುಷಿಯಿಂದ ಮಾತನಾಡಿದ್ದಾರೆ. ಈ ವೇಳೆ, ಗೆದ್ದ 50 ಲಕ್ಷ ಏನು ಮಾಡ್ತಾರೆ ಎಂಬುದನ್ನು ವಿವರಿಸಿದ್ದಾರೆ. ಇದನ್ನೂ ಓದಿ:ದೇವರಾಣೆ ಗೆಲ್ತೀನಿ ಅಂತ ಬಂದಿರಲಿಲ್ಲ, ಹೋಗಿ ಮಜಾ ಮಾಡಿ ಬರೋಣ ಅಂತ ಬಂದಿದ್ದೆ: ಹನುಮಂತ
‘ಬಿಗ್ ಬಾಸ್’ ಶೋ ಗೆದ್ದ 50 ಲಕ್ಷ ರೂ.ನಲ್ಲಿ ಮನೆ ಕಟ್ಟಿಸುತ್ತೇನೆ. ಜೊತೆ ಮದುವೆ (Wedding) ಆಗುತ್ತೇನೆ. ನಮಗೆ ತಗಡಿನ ಮನೆಯಿದೆ ಅದನ್ನು ತೆಗೆಯಿಸಿ, ಸ್ಲ್ಯಾಬ್ ಮನೆ ಕಟ್ಟಿಸುತ್ತೇನೆ ಎಂದು ಹನುಮಂತ (Hanumantha) ಮಾತನಾಡಿದ್ದಾರೆ.
- Advertisement
- Advertisement
ಬರೋದು ಬಂದು ಬಿಟ್ಟಿದ್ದೇ, ಏನಾದರೂ ಆಗಲಿ ಅಂತ ನಿಂತುಬಿಟ್ಟಿದ್ದೆ. ಬರುವಾಗ ಬಂದೇ ಖಾಲಿ, ಹೋಗುವಾಗ ಖಾಲಿ, ಇರೋ ಮಟ ಜಾಲಿ ಜಾಲಿ ಎಂದು ಸುದ್ದಿಗೋಷ್ಠಿಯಲ್ಲಿ ಹನುಮಂತ ಹಾಡಿದ್ದಾರೆ. ಈ ಮೂಲಕ ಗೆಲುವಿಗಾಗಿ ತಾವು ಯಾವುದೇ ಪ್ಲ್ಯಾನ್ ಮಾಡಿರಲಿಲ್ಲ. ನಾನು ಹೇಗೆ ಇದ್ದೆನೋ ಹಾಗೇ ಆಡಿದ್ದೇನೆ ಎಂದಿದ್ದಾರೆ.