ಮೈಸೂರು: ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಒಬ್ಬ ನಾಲಾಯಕ್, ನಾಮರ್ದ ಮಂತ್ರಿ ಎಂದು ಬಿಜೆಪಿ ಮುಖಂಡ ಗೋ. ಮಧುಸೂದನ್ ಅವಾಚ್ಯ ಶಬ್ದಗಳಿಂದ ಕಿಡಿ ಕಾರಿದ್ದಾರೆ.
ರಾಜ್ಯ ಮುಕ್ತ ವಿವಿಗೆ ಗೆ ಮಾನ್ಯತೆ ನವೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಗೋ. ಮಧುಸೂಧನ್ ಈ ರೀತಿ ಆಕ್ರೋಶ ವ್ಯಕ್ತಪಡಿಸಿದರು. ಬಸವರಾಜ ರಾಯರೆಡ್ಡಿಯನ್ನ ನೋಡಿದ್ರೆ ಅಯ್ಯೋ ಪಾಪಾ ಅನಿಸುತ್ತೆ. ಪ್ರೊಫೆಸರ್ ಹಾಗೂ ಕುಲಪತಿಗಳ ಮೇಲೆ ಸುಮ್ಮನೆ ಎಗರಾಡುತ್ತಾರೆ ಅಷ್ಟೇ. ನಾಲೆಗೆಯ ತೀಟೆ ತೀರಿಸಿಕೊಳ್ಳಲು ಮಾತಾಡುತ್ತಾರೆ ಅಂತ ಗೋ ಮಧುಸೂಧನ್ ಹೇಳಿದ್ರು.
ಮುಕ್ತ ವಿವಿಗೆ ಬಂದ ಹಣ ಯಾವುದೇ ಕಾರಣಕ್ಕೂ ಸರ್ಕಾರ ಮುಟ್ಟಬಾರದು. ವಿವಿಯ ನಿವೃತ್ತ ಕುಲಪತಿ ರಂಗಪ್ಪ ನಂಬರ್ ಒನ್ 420. ಇನ್ನೊಬ್ಬ ನಿವೃತ್ತ ಕುಲಪತಿ ಕೃಷ್ಣನ್ ಕೂಡ ನಂಬರ್ ಒನ್ 420. ಇಬ್ಬರು ಸೇರಿ 840 ಎಂದು ಟೀಕಿಸಿದರು. ರಾಜ್ಯ ಮುಕ್ತ ವಿವಿ ಹಗರಣದಲ್ಲಿ ಸರ್ಕಾರ ಹಾಗೂ ಸಿಎಂ ಬುಕ್ ಆಗಿದ್ದಾರೆ ಎಂದು ಆರೋಪಿಸಿದರು.