ಕೊಪ್ಪಳ: ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ ದಡೆಸುಗೂರ್ (Basavaraj Dhadesugur) ಕಾರು ಡಿಕ್ಕಿಯಾಗಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಕೊಪ್ಪಳ (Koppala) ಜಿಲ್ಲೆಯ ಮೈಲಾಪುರ ಕ್ರಾಸ್ನಲ್ಲಿ ಸೋಮವಾರ ಈ ಅಪಘಾತ ನಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಚಳ್ಳೂರಿನ 70 ವರ್ಷದ ಮರಿಯಮ್ಮ ಚಿಕಿತ್ಸೆ ಫಲಕಾರಿಯಾಗದೇ ಇಂದು ಅಸುನೀಗಿದ್ದಾರೆ. ಇದನ್ನೂ ಓದಿ: ಹಿಂದೂಸ್ಥಾನ ಹಿಂದೂಸ್ಥಾನವಾಗಿಯೇ ಉಳಿಯಬೇಕು – ಭಾಗವತ್ ಹೇಳಿಕೆಗೆ ವಿಪಕ್ಷಗಳ ಟೀಕೆ
ಅಪಘಾತ ವೇಳೆ ಶಾಸಕರು ಕೂಡ ಕಾರಿನಲ್ಲಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಬಸವರಾಜ ದಡೆಸುಗೂರು, ನನ್ನ ಕಾರು ಮುದುಕಿಗೆ ಡಿಕ್ಕಿ ಹೊಡೆದಿಲ್ಲ. ನನ್ನ ಕಾರು ನಾಯಿಗೆ ಡಿಕ್ಕಿ ಹೊಡೆದಿತ್ತು. ನಾಯಿ ಹೋಗಿ ಮುದುಕಿ ಮೇಲೆ ಬಿದ್ದಿತ್ತು. ಗಾಯಗೊಂಡ ಆಕೆಯನ್ನು ನಾನೇ ಆಸ್ಪತ್ರೆಗೆ ಸೇರಿಸಿದ್ದೆ. ಇದೇ ತಪ್ಪಾಗಿದೆ ನೋಡಿ ಎಂದು ಕತೆ ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k