ಬಾಗಲಕೋಟೆ: ಜನ ಮರುಳೊ, ಜಾತ್ರೆ ಮರುಳೊ ಎಂಬ ಘಟನೆ ನಿನ್ನೆ ರಾತ್ರಿ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ನಡೆದಿದೆ. ಬಸಪ್ಪನಿಗೆ ಭಕ್ತರು ಚಮಚದಲ್ಲಿ ಹಾಲು ಕುಡಿಸಿದ್ದಾರೆ.
ಪಟ್ಟಣದ ಅರಳಿಕಟ್ಟೆ ಬಸಪ್ಪನಿಗೆ ಭಕ್ತರು ಚಮಚದಲ್ಲಿ ಹಾಲು ಕುಡಿಸಲು ಶುರು ಮಾಡಿದ್ದಾರೆ. ಚಮಚದಲ್ಲಿನ ಹಾಲು ಕೆಳಗೆ ಬಿದ್ದರೇ ಬಸವಣ್ಣ ಹಾಲು ಕುಡಿದ ಅಂತ ನಂಬಿಕೆ. ಈ ಸುದ್ದಿ ಪಟ್ಟಣದ ತುಂಬ ಹರಡಿದ್ದು, ಬಸಪ್ಪನನ್ನು ನೋಡಲು ಜನರು ಮುಗಿಬಿದ್ದಿದ್ದಾರೆ.
ನಿನ್ನೆ ರಾತ್ರಿ ಜನರು ಬಸಪ್ಪನ ಪವಾಡ ನೋಡಬೇಕು ಎಂದು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.