ವಿಜಯಪುರ: ಅವರೆಲ್ಲ ಕರ್ನಾಟಕದ ಸಲುವಾಗಿ ಹೋರಾಡುತ್ತಾರೆ. ಅವರನ್ನು ಹೀರೋ ಮಾಡಬೇಕು ಎಂದು ಹೇಳುತ್ತೀರಿ. ಆದರೆ ಅವರದ್ದೆಲ್ಲ ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ದಂಧೆಗಳಿವೆ ಎಂದು ಬಿಜೆಪಿ (BJP) ನಾಯಕ ಬಸವನಗೌಡ ಪಾಟೀಲ್ (Basavanagowda Patil Yatnal) ಯತ್ನಾಳ್ ಕಿಡಿಕಾರಿದ್ದಾರೆ.
ವಿಜಯಪುರದಲ್ಲಿ (Vijayapura) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋರಾಟಗಾರರು ಎನಿಸಿಕೊಂಡವರು ಮಿನಿಸ್ಟರ್ ಮನೆಯಲ್ಲೇ ಇರ್ತಾರೆ. ಹೋರಾಟ ಮಾಡ್ತಿನಿ ಎಂದು ಅವರು ರಾಜಕಾರಣಿಗಳ ಮನೆಯಲ್ಲಿದ್ದರೆ ಹೇಗೆ? ಹೋರಾಟದ ಅಸ್ತಿತ್ವ ಎಲ್ಲಿ ಉಳಿದಿದೆ? ಎಂದು ಕಾವೇರಿ ಹೋರಾಟದ ವೇಳೆ ಕರವೇ ನಾಯಕ ಕೆಪಿಸಿಸಿ ಕಚೇರಿಗೆ ಹೋದ ವಿಚಾರಕ್ಕೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪತ್ರ ಬರೆದು ಬೆದರಿಕೆ ಹಾಕಿದ್ದರೆ ಪ್ರಗತಿಪರರು ಸುಮ್ಮನಾಗುತ್ತಿದ್ದರು: ಶಿವಾಜಿರಾವ್ ಜಾಧವ್ ಹೇಳಿದ್ದೇನು?
ಕೆಲವೊಂದು ಸಂಘಟನೆಗಳು 10 ಜನರನ್ನ ಕರೆದುಕೊಂಡು ಒಂದು ಜಂಡಾ ಹಿಡಿದು ಹೋಗ್ತಾರೆ. ನೋಡಿ ಅವರೆಲ್ಲಾ ಬುಕ್ ಆಗಿದ್ದಾರೆ. ನೀವು ಮಾತ್ರ ಅವರನ್ನು ಕರ್ನಾಟಕದ ಸಲುವಾಗಿ ಹೋರಾಡುತ್ತಾರೆ. ಹೀರೋ ಮಾಡಬೇಕು ಎನ್ನುತ್ತೀರಿ. ಅವರು ಹೀರೋ ಆಗೋದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಹೋರಾಟಗಾರರು ಎಂದು ಹೇಳಿಕೊಂಡು ಸಿಎಂ ಮನೆಯಲ್ಲಿ, ಡಿಸಿಎಂ ಮನೆಯಲ್ಲಿ ಇರ್ತಾರೆ. ಜೈಲಿನಿಂದ ಬಂದ ಮೇಲೆ ಡಿಸಿಎಂನ್ನು ಮಾತನಾಡಿಸಲು ಹೋಗ್ತಾರೆ. ಏನು ಸ್ವಾತಂತ್ರ್ಯ ಹೋರಾಟಕ್ಕೋ ಅಥವಾ ಪಾಕಿಸ್ತಾನ ಯುದ್ಧ ಗೆದ್ದು ಬಂದವರಂತೆ ಅವರ ಮನೆಗೆ ಮಾತಾಡಿಸೋಕೆ ಹೋಗ್ತಾರೆ. ಅವರು ಜೈಲಿಗೆ ಹೋಗಿದ್ದು ಭ್ರಷ್ಟಾಚಾರದಿಂದ. ಇಂಥವರ ಮನೆಗೆ ಮಾತಾಡಲು ಹೋಗ್ತಾರೆ ಎಂದರೆ ನೈತಿಕತೆ ಎಲ್ಲಿದೆ ಎಂದು ಕೆಲವು ಹೋರಾಟಗಾರರು ಹಾಗೂ ಡಿ.ಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಿದ್ದು ಸಂಪುಟದ ಮೂವರು ಸಚಿವರಿಗೆ ಜೀವ ಬೆದರಿಕೆ ಪತ್ರ
Web Stories