ಮೋಜು, ಮಸ್ತಿಗಾಗಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಯತ್ನಾಳ್

Public TV
1 Min Read
basavana gowda yatnal

ವಿಜಯಪುರ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಚುನಾವಣಾ ಸ್ಟಂಟ್ ಆಗಿದೆ. ಕಾಂಗ್ರೆಸ್ಸಿಗರ ಆರೋಗ್ಯಕ್ಕಾಗಿ ಹಾಗೂ ಅವರ ಮೋಜು, ಮಸ್ತಿಗಾಗಿ ಪಾದಯಾತ್ರೆಯಾಗಿದೆ ಎಂದು ಶಾಸಕ ಬಸನಗೌಡ ಯತ್ನಾಳ್ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಪಾದಯಾತ್ರೆಯಲ್ಲಿ ಅಸಹ್ಯಕರ ವರ್ತನೆ ಮಾಡುತ್ತಿದ್ದಾರೆ. ಕುಣಿದು ಕುಪ್ಪಳಿಸಿ ಪಾದಯಾತ್ರೆ ಪಾವಿತ್ರ್ಯತೆ ಹಾಳು ಮಾಡಿದ್ದಾರೆ. ಪಾದಯಾತ್ರೆಯಲ್ಲಿ ಗಂಭೀರತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

CONGRESS PADAYATRE 2

ಪಾದಯಾತ್ರೆಯಲ್ಲಿ ನಡೆಯುವುದರಿಂದ ಕಾಂಗ್ರೆಸ್ ನಾಯಕರ ತೂಕ ಕಡಿಮೆಯಾಗಬಹುದಷ್ಟೇ. ತೂಕ ಕಡಿಮೆ ಮಾಡಿಕೊಳ್ಳಲು ಸಿದ್ದರಾಮಯ್ಯ, ಡಿಕೆಶಿ, ಎಂ ಬಿ ಪಾಟೀಲ್ ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಆರೋಗ್ಯಕ್ಕಾಗಿ ಪಾದಯಾತ್ರೆಯಾಗಿದೆ. ರಾಜ್ಯದ ಆರೋಗ್ಯಕ್ಕಾಗಿ ಅಲ್ಲ ಎಂದು ವ್ಯಂಗ್ಯವಾಡಿದರು.

CONGRESS copy

ದೇಶ, ರಾಜ್ಯದ ಆರೋಗ್ಯಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡಿಯೇ ಇಲ್ಲ. ಶರೀರದ ಆರೋಗ್ಯ ಕಾಪಾಡಲು ಪಾದಯಾತ್ರೆ ಮಾಡುತ್ತಿದೆ. ಮುಂದಿನ ಚುನಾವಣೆಯ ತಯಾರಿಗೆ ಮೇಕೆದಾಟು ಪಾದಯಾತ್ರೆಯಾಗಿದೆ. ಚುನಾವಣೆ ಘೋಷಣೆಯಾದರೆ ದಿಢೀರ್ ಎಂದು ಇವರಿಗೆ ನಡೆಯೋಕು ಆಗಲ್ಲ. ಹೀಗಾಗಿ ಪಾದಯಾತ್ರೆ ಮೂಲಕ ತಯಾರಿಯಾಗಿದೆ. ಪಾದಯಾತ್ರೆ ಚುನಾವಣೆಯ ಪ್ರಾಕ್ಟಿಸ್ ಎಂದರು.

Congress

ಇದೇ ಸಂದರ್ಭದಲ್ಲಿ ಉಕ್ರೇನ್ ಯುದ್ಧದ ಬಗ್ಗೆ ಮಾತನಾಡಿದ ಅವರು, ನಿನ್ನೆ ಪ್ರಧಾನಿಗಳು ಕ್ಯಾಬಿನೆಟ್ ಸಭೆ ಮಾಡಿ ನಾಲ್ಕು ಕೇಂದ್ರ ಮಂತ್ರಿಗಳನ್ನು ಅಲ್ಲಿ ಡೆಪ್ಯೂಟ್ ಮಾಡಿದ್ದಾರೆ. ಸಂತೋಷದ ವಿಷಯ ಅಂದರೆ ಭಾರತೀಯರು, ಇಂಡಿಯನ್ಸ್ ಎಂದರೆ ಯಾವುದೇ ತೊಂದರೆ ಆಗುತ್ತಿಲ್ಲ. ಭಾರತೀಯರು ಎಂದರೆ ನಮ್ಮ ಮಕ್ಕಳಿಗೆ ಎಲ್ಲಾ ದೇಶಗಳು ಗೌರವ ಕೊಡುತ್ತವೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಪವಾಡ ಎಂದು ಹೇಳಿದರು. ಇದನ್ನೂ ಓದಿ: ಜಾರ್ಖಂಡ್ ದೋಣಿ ದುರಂತದಲ್ಲಿ 14 ಮಂದಿ ಸಾವು – ಸಿಎಂನಿಂದ 4 ಲಕ್ಷ ಪರಿಹಾರ ಘೋಷಣೆ

NARENDRA MODI 1 4

ಪಾಕಿಸ್ತಾನ ಹೆಸರು ಹೇಳಿದರೆ ಅವರನ್ನು ಹೊರಗೆ ಬಿಡುತ್ತಿಲ್ಲ. ಪಾಕಿಸ್ತಾನದವರು ಭಾರತದ ಹೆಸರು ಹೇಳಿ ಜೀವ ಉಳಿಸಿಕೊಳ್ಳುತ್ತಿದ್ದಾರೆ. ಇಲ್ಲಿಯ ಅನ್ನ ತಿಂದು ಪಾಕಿಸ್ತಾನದ ಪರ ಮಾತನಾರುವವರಿಗೆ ಇದು ಒಳ್ಳೆ ಬುದ್ಧಿವಾದವಾಗಿದೆ. ಪಾಕ್ ಪರ ಮಾತನಾಡೋರು ಇನ್ನಾದರೂ ಬುದ್ಧಿ ಕಲಿಯಲಿ ಎಂದ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಖಾರ್ಕಿವ್‍ನ ಆಡಳಿತ ಕಚೇರಿ ಮೇಲೆ ಬಾಂಬ್ ದಾಳಿ- ಕಟ್ಟಡ ಸಂಪೂರ್ಣ ಧ್ವಂಸ

Share This Article
Leave a Comment

Leave a Reply

Your email address will not be published. Required fields are marked *