Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Search
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ದಾಳಿ ನಡೆಸಿದಕ್ಕೆ ಪಾಕಿಗೆ ಬೈಯ್ಯದೆ ಇನ್ನೇನು ಲಂಡನ್, ರಷ್ಯಾದವರಿಗೆ ಬೈಯ್ಯೊಕ್ಕಾಗುತ್ತಾ: ಯತ್ನಾಳ್ ಕಿಡಿ

Public TV
Last updated: February 18, 2019 4:27 pm
Public TV
Share
2 Min Read
yatnal
SHARE

ವಿಜಯಪುರ: ಅಟ್ಟಹಾಸ ಮೆರೆಯುತ್ತಿರೋ ಪಾಕಿಸ್ತಾನದವರಿಗೆ ಬೈಯ್ಯದೆ ಇನ್ನೇನು ಲಂಡನ್, ರಷ್ಯಾದವರಿಗೆ ಬೈಯಲು ಆಗುತ್ತಾ ಎಂದು ಪ್ರಶ್ನಿಸಿ ಕಾಂಗ್ರೆಸ್ ವಕ್ತಾರ ಎಸ್.ಎಂ ಪಾಟೀಲ್ ಗಣಿಹಾರ್ ವಿರುದ್ಧ ಬಿಜೆಪಿ ಶಾಸಕ ಬಸನ ಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಇವತ್ತು ವಿಜಯಪುರದಲ್ಲೂ ದೇಶದ್ರೋಹಿಗಳು ಇದ್ದಾರೆ. ಅವರ ಪ್ರಕಾರ ಪಾಕಿಸ್ತಾನಕ್ಕೆ ಬೈಯ್ಯಬಾರದು, ಮುಸ್ಲಿಮರಿಗೆ ಬೈಯಬಾರದು. ಈ ದೇಶದಲ್ಲಿ ಭಯೋತ್ಪಾದಕರು ಅಂತ ಇರೋದು ಯಾರು? ಹಿಂದೂಗಳು ಇದ್ದರಾ? ಪಾಕಿಸ್ತಾನದ ಮೂಲದವರೇ ಇದ್ದಾರೆ. ಅಟ್ಟಹಾಸ ಮಾಡುತ್ತಿರುವ ಪಾಕಿಸ್ತಾನದವರಿಗೆ ಬೈಯ್ಯದೆ ಇನ್ನೇನು ಲಂಡನ್, ರಷ್ಯಾದವರಿಗೆ ಬೈಯ್ಯಲು ಆಗುತ್ತಾ ಎಂದು ಪ್ರಶ್ನಿಸಿದರು.

bij yatnal

ಇಬ್ಬರು ಉಗ್ರರ ಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭಾರತೀಯ ಸೈನಿಕರು ಉಗ್ರರನ್ನು ನೇರವಾಗಿ ನರಕಕ್ಕೆ ಕಳುಹಿಸಿದ್ದಾರೆ. ಕಾಶ್ಮೀರದ ಸಮಸ್ಯೆಯನ್ನ ಬುಡದಿಂದ ತೆಗೆದು ಹಾಕಲು ಮೋದಿಯವರು ಮುಂದಾಗಬೇಕು. ಮೊದಲು ಕಾಶ್ಮೀರ ನೀಡಿರುವ ಕಾಲಂ 370 ಅನ್ನು ತೆಗೆದು ಹಾಕಬೇಕು. ಲೋಕಸಭೆ ಚುನಾವಣೆ ನಡೆಯಲಿ, ಬಿಡಲಿ ಅದು ಸದ್ಯ ಮುಖ್ಯವಲ್ಲ. ದೇಶ ಉಳಿಯುವುದು ಮುಖ್ಯ. ಆದರಿಂದ ವಿಶೇಷ ಲೋಕಸಭಾ ಅಧಿವೇಶನ ಕರೆದು 370 ಕಲಂ ಅನ್ನ ರದ್ದುಗೊಳಿಸಬೇಕು. ಅದಕ್ಕೆ ಯಾರು ವಿರೋಧ ಮಾಡುತ್ತಾರೋ ಅವರಿಗೆ ಜನರು ಸರಿಯಾಗಿ ಬುದ್ಧಿ ಕಲಿಸುತ್ತಾರೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

Pulwama terror attack kashmir AP

370 ಕಲಂ ಅನ್ನು ಸಂವಿಧಾನದಿಂದ ತೆಗೆಯುವುದು ವಾಜಪೇಯಿಯವರ ಆಸೆ ಕೂಡ ಆಗಿತ್ತು. ಲೋಕಸಭೆ ಚುನಾವಣೆ ಈಗ ಅವಶ್ಯಕತೆ ಇಲ್ಲ. ನಮಗೆ ಬೇಕಾಗಿದ್ದು ಶಾಂತಿ, ನಮ್ಮ ಹುತಾತ್ಮ ಸೈನಿಕರ ಪ್ರತೀಕಾರ. ಮೋದಿಯವರ ಸರ್ಕಾರ ಬಂದ ಮೇಲೆ ಪುಲ್ವಾಮ ಘಟನೆ ಬಿಟ್ಟರೆ ಮುಂಬೈ ಬ್ಲಾಸ್ಟ್, ಹೈದ್ರಾಬಾದ್ ಬ್ಲಾಸ್ಟ್ ಆಗಿಲ್ಲ. ಇಡೀ ಭಾರತದಲ್ಲಿ ಮೋದಿ ಸರ್ಕಾರ ಬಂದ ಮೇಲೆ ಶಾಂತಿ ನೆಲೆಸಿದೆ ಎಂದರು.

pulwama attack

ಈ ರೀತಿಯಾಗಿ ಹೇಳಿಕೆ ನೀಡಿದ ಅಯೋಗ್ಯ ಗಣಿಹಾರ್ ಮೇಲೆ ಕ್ರಮ ತಗೆದುಕೊಳ್ಳಬೇಕು. ಗೃಹ ಮಂತ್ರಿಗಳು ನಿನ್ನೆ ಹೇಳಿದ್ದಾರೆ ನಾವು ಯಾರೇ ದೇಶದ್ರೋಹಿ ಹೇಳಿಕೆ ಕೊಟ್ಟರೂ ಬಿಡಲ್ಲ ಅಂತ. ಈಗ ನಿಮ್ಮ ಪಕ್ಷದವನೇ ಈ ರೀತಿ ದೇಶ ವಿರೋಧಿ ಹೇಳಿಕೆಯನ್ನು ಕೊಟ್ಟಿದ್ದಾನೆ. ಅವನ ವಿರುದ್ಧ ನಿಷ್ಪಕ್ಷಪಾತವಾದ ತನಿಖೆ ನಡೆಸಿ ಎಂದು ಗೃಹ ಸಚಿವರಿಗೆ ಯತ್ನಾಳ್ ಅವರು ಆಗ್ರಹಿಸಿದ್ದಾರೆ.

1c1f23e3 add4 4f0c b5e1 5dabf4c1cf87 1

ಈ ವಿಚಾರವಾಗಿ ಪೊಲೀಸರಿಗೆ ಮುಕ್ತವಾದ ಅಧಿಕಾರ ನೀಡಬೇಕು. ಕರ್ನಾಟಕ ಗೃಹಮಂತ್ರಿಗಳು ಕೂಡ ಆ ಧೈರ್ಯ ಮಾಡಬೇಕು. ಯತ್ನಾಳ್ ವಿರುದ್ಧ ಕೇಸ್ ಹಾಕಿದರೆ ಏನು ಅಗಲ್ಲ. ಯತ್ನಾಳ್‍ಗೆ ಯಾರು ಏನು ಮಾಡಲು ಆಗಲ್ಲ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:370 ಕಾಲಂBasanagowda Patil YatnalPublic TVPulwamaS.M Patil GaniharTerror attackvijayapuraಉಗ್ರರ ದಾಳಿಎಸ್.ಎಂ ಪಾಟೀಲ್ ಗಣಿಹಾರ್ಪಬ್ಲಿಕ್ ಟಿವಿಪುಲ್ವಾಮಬಸನಗೌಡ ಪಾಟೀಲ್ ಯತ್ನಾಳ್ವಿಜಯಪುರ
Share This Article
Facebook Whatsapp Whatsapp Telegram

You Might Also Like

Koppal nava brindavana
Districts

ರಘುವರ್ಯ ತೀರ್ಥರ ಮಧ್ಯಾರಾಧನೆ ಮಹೋತ್ಸವ ಸಂಪನ್ನ

Public TV
By Public TV
12 minutes ago
WTC SA 3
Cricket

ದ. ಆಫ್ರಿಕಾ ಈಗ ʻವಿಶ್ವ ಟೆಸ್ಟ್‌ ಚಾಂಪಿಯನ್‌ʼ – 27 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಂಡ ಹರಿಣರು

Public TV
By Public TV
17 minutes ago
Chikkodi Crime
Belgaum

ಅಣ್ಣ ಶ್ರೀಮಂತ ಆಗ್ಬಿಟ್ಟ ಅಂತ ತಮ್ಮ ಮಾಡಿದ್ದೆಂತ ನೀಚ ಕೆಲ್ಸ ಗೊತ್ತಾ? – ಹಂತಕ ಸಿಕ್ಕಿಬಿದ್ದಿದ್ದೇ ರೋಚಕ!

Public TV
By Public TV
19 minutes ago
Untitled 1 copy
Latest

11A ಸೀಟ್ ಮಿಸ್ಟರಿ – 2 ವಿಮಾನ ಪತನ, ಒಂದೇ ಕಡೆ ಕುಳಿತಿದ್ದ ಇಬ್ಬರು ಮೃತ್ಯುಂಜಯರು!

Public TV
By Public TV
48 minutes ago
Mallikarjun Kharge
Latest

ವಿಮಾನ ದುರಂತ ಸ್ಥಳಕ್ಕೆ ಭೇಟಿ – ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ ಮಲ್ಲಿಕಾರ್ಜುನ ಖರ್ಗೆ

Public TV
By Public TV
48 minutes ago
Indian Embassy Israel
Latest

ಇಸ್ರೇಲ್ – ಇರಾನ್ ಸಂಘರ್ಷ | 24×7 ಸಹಾಯವಾಣಿ ಆರಂಭಿಸಿದ ಭಾರತ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?