ವಿಜಯಪುರ: ಕೂದಲು ವ್ಯಾಪಾರಕ್ಕೆ (Hair Business) ತೆರಳಿದ್ದ ಬಾಲಕನನ್ನು (Boy) ಬರ್ಬರ ಹತ್ಯೆ ಮಾಡಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಹಾರೋಗೇರಿಯಲ್ಲಿ ನಡೆದಿದೆ.
ಕಾಮಪ್ಪಾ (16) ಹತ್ಯೆಯಾದ ಬಾಲಕ. ಕಳೆದ ಮೂರು ದಿನದ ಹಿಂದೆ ಹಾರೋಗೇರಿಗೆ ಕೂದಲು ಮಾರಾಟ ಮಾಡಲು ವಿಜಯಪುರದಿಂದ ಕಾಮಪ್ಪಾ ಮತ್ತು ರೋಹಿತ್ ಎಂಬ ಬಾಲಕರು ತೆರಳಿದ್ದರು. ಈ ವೇಳೆ ವ್ಯಾಪಾರಕ್ಕೆ ಹಾರೋಗೇರಿಗೆ ಬಂದಿದ್ಯಾಕೆ ಎಂದು ತಗಾದೆ ತಗೆದು ಬಡಿಗೆ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿ ಕಾಮಪ್ಪಾನನ್ನು ಹತ್ಯೆ ಮಾಡಿದ್ದಾರೆ. ನಂತರ ಕಾಮಪ್ಪಾ ಮೃತದೇಹವನ್ನು ಬಾವಿಯಲ್ಲಿ ಎಸೆದಿದ್ದಾರೆ. ಇದನ್ನೂ ಓದಿ: ಅಂತರಗಂಗೆ ಬೆಟ್ಟದಲ್ಲಿ ಪಾಕ್ ಬಾವುಟ ಹೋಲುವ ಪೇಂಟಿಂಗ್ – ಆರೋಪಿ ಅರೆಸ್ಟ್
ಗಂಗಪ್ಪಾ ಹಾಗೂ ಅವನ ತಂದೆ ಸೇರಿದಂತೆ 15 ಜನರಿಂದ ಹಲ್ಲೆ ಹಾಗೂ ಹತ್ಯೆ ನಡೆದಿರುವ ಆರೋಪವನ್ನು ಕುಟುಂಬಸ್ಥರು ಮಾಡುತ್ತಿದ್ದಾರೆ. ಸದ್ಯ ಬಾವಿಯಲ್ಲಿ ಕಾಮಪ್ಪಾ ಮೃತ ದೇಹ ಪತ್ತೆಯಾಗಿದ್ದು, ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಲು ಕಾಮಪ್ಪಾ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]