ಬೆಂಗಳೂರು: ಚಿನ್ನ ಹಾಗೂ ನಿಧಿಯ ಅಸೆಗೆ ವಾಮಾಚಾರ ಮಾಡುತ್ತಿದ್ದ ಆರು ಜನರ ತಂಡವೊಂದನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸಲ್ಮಾನ್ ಪಾಷಾ, ಫರೀದ್ ಖಾನ್, ಸಮೀ ಉಲ್ಲಾ, ಮಹಮ್ಮದ್ ಆಸೀಫ್, ಗುಲ್ಜರ್ ಖಾನ್ ಮತ್ತು ಗುರುರಾಜ್ ಎಂದು ಗುರುತಿಸಲಾಗಿದೆ. ತಂಡದ ಅಯೂಬ್ ಮತ್ತು ಯಾಸೀನ್ ಎಂಬ ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದಾರೆ.
ಈ ಆರು ಜನರ ತಂಡ ನೆಲಮಂಗಲ ತಾಲೂಕಿನ ರಾಯರಪಾಳ್ಯ ಬಳಿಯ ಸಿದ್ಧರಬೆಟ್ಟದಲ್ಲಿ ವಾಮಾಚಾರ ಮಾಡಿತ್ತು. ಘಟನಾ ಸ್ಥಳದಲ್ಲಿ ನಿಂಬೆಹಣ್ಣು, ಅರಿಶಿನ ಕುಂಕುಮ, ಇನ್ನಿತರ ಸಾಮಾಗ್ರಿ ಪತ್ತೆಯಾಗಿದೆ. ಬಂಧಿತರಿಂದ ಒಂದು ಕಾರು, ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.