ಅನರ್ಹ ಆದ ಮೇಲೆ ಆಗೋ ಕಷ್ಟ ಏನು ಎಂದು ನನಗೆ ಗೊತ್ತಿದೆ: ತಂಗಡಗಿ ವ್ಯಂಗ್ಯ

Public TV
1 Min Read
shivraj tangadagi 1

– ಅನರ್ಹ ಶಾಸಕರ ಕಿವಿಗೆ ಬಿಜೆಪಿ ಸರಿಯಾಗಿಯೇ ಹೂ ಮುಡಿಸಿದೆ

ಬೆಂಗಳೂರು: ರಾಜೀನಾಮೆ ನೀಡಿದ ನಂತರ ಅನರ್ಹ ಆದ ಮೇಲೆ ಆಗೋ ಕಷ್ಟ ಏನು ಎಂದು ನನಗೆ ಗೊತ್ತಿದೆ. ಈ ಹಿಂದೆ ಆ ಕಷ್ಟವನ್ನು ನಾನು ಅನುಭವಿಸಿದ್ದೇನೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ವ್ಯಂಗ್ಯವಾಡಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ಈ ಹಿಂದೇ ನನಗೆ ಬಂದ ಕಷ್ಟ, ಈಗ ನಮ್ಮ ಮಿತ್ರರು ಅನುಭವಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್‍ನಲ್ಲಿ ಅವರು ಅಷ್ಟು ಸುಲಭವಾಗಿ ಕೇಸ್ ಗೆದ್ದು ಬಂದು ಮಂತ್ರಿ ಆಗೋಕೆ ಸಾಧ್ಯ ಇಲ್ಲ ಎಂದು ಹೇಳಿದರು.

Rebel MLAs B 1

ಬಿಜೆಪಿಯವರು ಮಾತನ್ನು ನಂಬಬೇಡಿ ಎಂದು ನಾನು ಈ ಹಿಂದೆ ಹೇಳಿದ್ದೆ. ಇವಾಗ ಅನರ್ಹ ಶಾಸಕರ ಕಿವಿಗೆ ಬಿಜೆಪಿ ಸರಿಯಾಗಿಯೇ ಹೂ ಮುಡಿಸಿದೆ. ಅವರಿಗೆ ಏನೇನೋ ಭರವಸೆ ಕೊಟ್ಟು ಕೊನೆಗೆ ಬೀದಿಗೆ ತಂದು ನಿಲ್ಲಿಸಿದ್ದಾರೆ. ದಯಮಾಡಿ ಯಾರು ಬಿಜೆಪಿಯವರ ಆಶ್ವಾಸನೆ ನಂಬಬೇಡಿ. ಯಾಕೆಂದರೆ ಅವರು ಸಿಎಂ ಸ್ಥಾನ ಬಿಟ್ಟು ಉಳಿದೆಲ್ಲಾ ಸ್ಥಾನ ಕೊಡ್ತೀನಿ ಅಂತಾರೆ. ಹಣಕಾಸು, ಗೃಹ, ಲೋಕೋಪಯೋಗಿ ಸೇರಿದಂತೆ ಎಲ್ಲವೂ ಕೊಡ್ತೇವಿ ಅಂತಾರೆ ಆದರೆ ಕೊಡಲ್ಲ ಎಂದು ವ್ಯಂಗ್ಯವಾಡಿದರು.

BJP 1

ಬಿಜೆಪಿಯವರು ಕೊಟ್ಟ ಭರವಸೆಯನ್ನು ಈಡೇರಿಸುವುದಿಲ್ಲ. ಯಾರು ತಮಗೆ ಸಪೋರ್ಟ್ ಮಾಡಿದ್ದಾರೋ ಅವರನ್ನೇ ಅವರು ಮೊದಲು ತುಳಿಯುತ್ತಾರೆ. ಅನರ್ಹ ಶಾಸಕರು ಅಂದುಕೊಂಡಂತೆ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಸಾಧ್ಯ ಆಗುವುದಿಲ್ಲ. ಮೊದಲಿನಂತೆ ಬಿಜೆಪಿಯ ಹೈಕಮಾಂಡ್ ಈಗ ಇಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *