ಏಳು ದಿನಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ 13ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಮಾರೋಪ ಸಮಾರಂಭ ಇಂದು ಬೆಂಗಳೂರಿನ ಜೆ.ಎನ್.ಟಾಟಾ ಆಡಿಟೋರಿಯಂನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಚಿತ್ರೋತ್ಸವದಲ್ಲಿ ಭಾಗಿಯಾಗಿ, ನಾನಾ ವಿಭಾಗಗಳಲ್ಲಿ ಸ್ಪರ್ಧಿಸಿದ್ದ ಸಿನಿಮಾಗಳಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರಶಸ್ತಿ ಪ್ರದಾನ ಮಾಡಿದರು.
ಮುಖ್ಯ ಅಥಿಗಳಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್. ಜೈರಾಜ್, ಚಿತ್ರೋತ್ಸವದ ಕಲಾತ್ಮಾಕ ನಿರ್ದೇಶಕ ನರಹರಿರಾವ್, ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಮುಂತಾದವರು ಭಾಗಿಯಾಗಿದ್ದರು.
2021 ನೇ ಸಾಲಿನ ಪ್ರಶಸ್ತಿಗಳು
ಕನ್ನಡ ಪಾಪ್ಯೂಲರ್ ಎಂಟರ್ ಟೇನ್ಮೆಂಟ್ : ಮೋಸ್ಟ್ ಪಾಪ್ಯುಲರ್ ಕನ್ನಡ ಸಿನಿಮಾ ಅವಾರ್ಡ್
ಅತ್ಯುತ್ತಮ ಚಿತ್ರ : ಯುವರತ್ನ ( ನಿರ್ದೇಶಕ ಸಂತೋಷ್ ಆನಂದರಾವ್)
ಅತ್ಯುತ್ತಮ ಎರಡನೇ ಸಿನಿಮಾ : ರಾಬರ್ಟ್ ( ನಿರ್ದೇಶಕ ತರುಣ್ ಸುಧೀರ್)
ಅತ್ಯುತ್ತಮ ಮೂರನೇ ಸಿನಿಮಾ : ಲವ್ ಕೋಟಿಗೊಬ್ಬ ( ನಿರ್ದೇಶಕ ಶಿವಕಾರ್ತಿಕ್)
ಪೊಗರು (ಸ್ಪೇಷಲ್ ಜ್ಯೂರಿ ಅವಾರ್ಡ್ )
ಕನ್ನಡ ಸಿನಿಮಾ ಕಾಂಪಿಟೇಷನ್ : ಬೆಸ್ಟ್ ಫಿಲ್ಮ್ ಅವಾರ್ಡ್
ಅತ್ಯುತ್ತಮ ಚಿತ್ರ : ದೊಡ್ಡ ಹಟ್ಟಿ ಬೋರೇಗೌಡ ( ನಿರ್ದೇಶಕ ರಘುಕೆ.ಎಂ)
ಅತ್ಯುತ್ತಮ ಎರಡನೇ ಸಿನಿಮಾ : ದಂಡಿ (ನಿರ್ದೇಶಕ ವಿಶಾಲ್ ರಾಜ್ )
ಅತ್ಯತ್ತಮ ಮೂರನೇ ಸಿನಿಮಾ : ದೇವರ ಕಾಡು ( ನಿರ್ದೇಶಕ ಅಮರ್ ಎಲ್)
ಕೇಕ್ (ಸ್ಪೇಷಲ್ ಜ್ಯೂರಿ ಅವಾರ್ಡ್ )