ಬೆಂಗಳೂರು: ನಿಮ್ಮನ್ನು ಸಿಎಂ ಮಾಡಿದ ಅನರ್ಹ ಶಾಸಕರನ್ನು ತಬ್ಬಲಿ ಮಾಡಬೇಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ಸಲಹೆ ನೀಡುವ ಮೂಲಕ ವ್ಯಂಗ್ಯವಾಡಿದ್ದಾರೆ.
ಇಂದು ಸದನದಲ್ಲಿ ಯಡಿಯೂರಪ್ಪ ವಿಶ್ವಾಸಮತಯಾಚನೆಯ ವೇಳೆ ಮಾತನಾಡಿದ ಶಿವಕುಮಾರ್ ಅವರು, ನಿಮ್ಮನ್ನು ಸಿಎಂ ಮಾಡಿದ ಅನರ್ಹ ಶಾಸಕರನ್ನು ಕೈ ಬಿಡಬೇಡಿ. ಅವರನ್ನು ತಬ್ಬಲಿ ಮಾಡಬೇಡಿ ಎಂದು ಹೇಳಿದರು.
ಅಪೃತ್ತ ಶಾಸಕರಿಗೆ ಏನೇನು ಕೊಡುತ್ತೀವಿ ಎಂದು ಹೇಳಿದ್ರೋ ಅದನ್ನೆಲ್ಲ ಕೊಡಿ. ಮಂತ್ರಿ ಮಾಡ್ತೀರೋ ಏನ್ ಮಾಡ್ತೀರೋ ನೋಡಿ. ಅವರಿಗೂ ನಿಮ್ಮ ಜೊತೆಯೇ ಪ್ರಮಾಣವಚನ ಕೊಡಿಸಿ. ವಿಪ್ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುತ್ತಿದ್ದರಲ್ಲ ಈಗ ನೋಡಿ ಏನಾಯ್ತು? ಈಗ ಅವರನ್ನು ತಬ್ಬಲಿ ಮಾಡಬೇಡಿ ಎಂದು ವ್ಯಂಗ್ಯವಾಡಿದ್ದಾರೆ.