ಬೆಂಗಳೂರು: ಕರ್ನಾಟಕದಲ್ಲಿ ಪಟಾಕಿಯನ್ನು ನಿಷೇಧಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಹಾಕುವುದಕ್ಕೆ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆ ಮುಂದಾಗಿದೆ.
ಹಿಂದೂ ಧರ್ಮದಲ್ಲಿ ದೀಪಾವಳಿಗೆ ಪಟಾಕಿ ಹೊಡೆಯಬೇಕು ಎಂದು ಎಲ್ಲೂ ಉಲ್ಲೇಖವಾಗಿಲ್ಲ, ಪಟಾಕಿಯಲ್ಲಿ ದೇವರ ಚಿತ್ರಗಳು ಇರುತ್ತವೆ. ಅದಕ್ಕೆ ಬೆಂಕಿಯಿಟ್ಟರೆ ದೇವರಿಗೆ ಅವಮಾನ ಅಲ್ಲದೆ ಪಟಾಕಿಯಿಂದ ಪರಿಸರ ಮಾಲಿನ್ಯವಾಗುತ್ತದೆ. ಪಟಾಕಿ ಹೊಡೆಯುವುದು ರಾಷ್ಟ್ರದ್ರೋಹದ ಕೆಲಸ ಅದಕ್ಕಾಗಿ ಸರ್ಕಾರಕ್ಕೆ ಪಟಾಕಿ ನಿಷೇಧವಾಗಲೇ ಬೇಕು ಎಂದು ಒತ್ತಾಯಿಸಿ ಪಿಎಐಎಲ್ ಹಾಕಲು ಈ ಎರಡು ಸಂಘಟನೆಗಳು ಮುಂದಾಗಿವೆ.
ದೀಪಾವಳಿ ಸಂದರ್ಭದಲ್ಲಿ ಮಾತ್ರವಲ್ಲದೇ, ಹಬ್ಬ ಜಾತ್ರೆ ಇನ್ನೂ ಯಾವುದೇ ಸಂದರ್ಭಗಳಲ್ಲಿ ಪಟಾಕಿ ಹೊಡೆಯುವುದು ನಿಷೇಧವಾಗಬೇಕು. ಹಾಗೆಯೇ ಶಬ್ಧ ಮಾಲಿನ್ಯವಾಗುವ ಮುಸ್ಲಿಂ ಅಜಾನ್ ನಿಷೇಧಮಾಡುವಂತೆ, ಸದ್ಯದಲ್ಲೇ ಕೋರ್ಟ್ ಮೆಟ್ಟಿಲೇರಲು ನಿರ್ಧಾರವನ್ನು ಮಾಡಲಿದ್ದೇವೆಂದು ಪಬ್ಲಿಕ್ ಟಿವಿಗೆ ಹಿಂದೂ ಜನಜಾಗೃತಿ ಸಂಸ್ಥೆಯ ಮೋಹನ್ ಗೌಡ ಹೇಳಿದ್ದಾರೆ.