ಚೆಂಡು ವಿರೂಪಗೊಳಿಸಿದ ಪ್ರಕರಣ: ಐಸಿಸಿ ನೀತಿ ವಿರುದ್ಧ ಹರ್ಭಜನ್ ಕಿಡಿ

Public TV
2 Min Read
harbhajan singh1 e1522051697560

ನವದೆಹಲಿ: ಆಸೀಸ್ ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ಕಳ್ಳಾಟ ನಡೆಸಿದ ಬಳಿಕ ಟೀಂ ಇಂಡಿಯಾ ಆಫ್‍ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಐಸಿಸಿ ವಿರುದ್ಧ ಕಿಡಿಕಾರಿ ಟ್ವೀಟ್ ಮಾಡಿದ್ದಾರೆ.

ಚೆಂಡು ವಿರೂಪಗೊಳಿಸುವ ಜಾಲ ರೂಪಿಸಿದ್ದ ಆಸೀಸ್ ನಾಯಕ ಸ್ಮಿತ್ ಗೆ ಐಸಿಸಿ ಪಂದ್ಯದ 100% ದಂಡ, ಒಂದು ಪಂದ್ಯದ ನಿಷೇಧ ಹಾಗೂ ಬ್ಯಾಟ್ಸ್ ಮನ್ ಬ್ಯಾನ್ ಕ್ರಾಫ್ಟ್ ಗೆ ಪಂದ್ಯದ 75% ದಂಡ, 3 ಡಿಮೆರಿಟ್ ಅಂಕಗಳನ್ನು ನೀಡಿದೆ. ಅಲ್ಲದೇ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಮಿತ್ ಹಾಗೂ ಉಪನಾಯಕ ವಾರ್ನರ್ ಅವರ ಸ್ಥಾನವನ್ನು ತಲೆ ದಂಡ ಮಾಡಿದೆ. ಆದರೆ ಪ್ರಕರಣದ ಕುರಿತು ಐಸಿಸಿ ಆಸೀಸ್ ಆಟಗಾರರ ವಿರುದ್ಧ ಕೈಗೊಂಡಿರುವ ಕ್ರಮದ ಕುರಿತು ಹರ್ಭಜನ್ ಕೋಪಗೊಂಡಿದ್ದಾರೆ.

cameron bancroft ball tampering 2
ಈ ಬಗ್ಗೆ ಟ್ವೀಟ್ ಮಾಡಿರುವ ಹರ್ಭಜನ್ `ವಾವ್ ಐಸಿಸಿ. ಉತ್ತಮ ಕ್ರಮ ಮತ್ತು ನ್ಯಾಯೋಚಿತ ವರ್ತನೆ. ಚೆಂಡು ವಿರೂಪಗೊಳಿಸಿದ ಬ್ಯಾನ್ ಕ್ರಾಫ್ಟ್ ಗೆ ನಿಷೇಧವಿಲ್ಲ. 2001 ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಹೆಚ್ಚು ಬಾರಿ ಅಪೀಲ್ ಮಾಡಿದ್ದೇವೆ ಎಂದು ಯಾವುದೇ ಸಾಕ್ಷಿ ಇಲ್ಲದೆ 6 ಮಂದಿಗೆ ನಿಷೇಧ ವಿಧಿಸಿದ್ದೀರಿ. 2008 ರ ಸಿಡ್ನಿ ಟೆಸ್ಟ್ ಘಟನೆ ನಿಮಗೆ ನೆನಪಿಲ್ಲವೇ? ತಪ್ಪು ಮಾಡದೆಯೂ 3 ಪಂದ್ಯಕ್ಕೆ ನಿಷೇಧ ಹೇರಿದ್ದೀರಿ. ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ನಿಯಮ ಎಂದು ಬರೆದು ಟ್ವೀಟ್‍ನಲ್ಲಿ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದನ್ನು ಓದಿ: ಸ್ವೀವ್ ಸ್ಮಿತ್, ವಾರ್ನರ್ ಐಪಿಎಲ್ ಭವಿಷ್ಯ ಶೀಘ್ರವೇ ನಿರ್ಧಾರ

ಆಸೀಸ್ ಆಟಗಾರರ ಕೃತ್ಯ ಕ್ರಿಕೆಟ್ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯಲಿದ್ದು, ವಿಶ್ವ ಕ್ರಿಕೆಟ್‍ನ ಹಲವು ದಿಗ್ಗಜ ಆಟಗಾರರು ಕೃತ್ಯದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಆಸೀಸ್ ನ ಮಾಧ್ಯಮಗಳು ಸಹ ತಮ್ಮ ದೇಶದ ಕ್ರಿಕೆಟ್ ಆಟಗಾರರ ಕೃತ್ಯವನ್ನು ಖಂಡಿಸಿವೆ.

Share This Article
Leave a Comment

Leave a Reply

Your email address will not be published. Required fields are marked *