ಅ.23ರಂದು ಶೃಂಗೇರಿ, ಹೊರನಾಡು, ಕಳಸ ಸಂಚಾರ ಬಂದ್

Public TV
1 Min Read
ckm 1

ಚಿಕ್ಕಮಗಳೂರು: ಬಾಳೆಹೊನ್ನೂರು ಸೇತುವೆ ಕುಸಿಯೋ ಹಂತದಲ್ಲಿರುವುದರಿಂದ ಶೃಂಗೇರಿ, ಹೊರನಾಡು ಮತ್ತು ಕಳಸ ವಾಹನ ಸಂಚಾರವನ್ನು ಬಂದ್ ಮಾಡಲಾಗುತ್ತದೆ.

ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸೇತುವೆ ಮೇಲೆ ವಾಹನ ಸಂಚಾರಕ್ಕೆ ಸುಮಾರು 3 ಗಂಟೆಗಳ ಕಾಲ ನಿರ್ಬಂಧ ಹಾಕಲಾಗುತ್ತದೆ. ಅಕ್ಟೋಬರ್ 23ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ಸೇತುವೆ ಮೇಲೆ ವಾಹನ ಸಂಚಾರವನ್ನು ಬಂದ್ ಮಾಡಿ ಎಂದು ಡಿ.ಸಿ ಬಗಾದಿ ಗೌತಮ್ ಸೂಚನೆ ಕೊಟ್ಟಿದ್ದಾರೆ.

vlcsnap 2019 10 20 11h44m02s567

ಬಾಳೆಹೊನ್ನೂರು ಸೇತುವೆ ಕುಸಿಯೋ ಹಂತದಲ್ಲಿರುವುದರಿಂದ ಅಧಿಕಾರಿಗಳು ವೀಕ್ಷಣೆ ಮಾಡಲಿದ್ದಾರೆ. ಬ್ರಿಡ್ಜ್ ಟೆಸ್ಟಿಂಗ್ ಮೆಷಿನ್ ಬಳಸಿ ಪರಿವೀಕ್ಷಣೆ ನಡೆಸಲಿದ್ದಾರೆ. ಈ ವೇಳೆ ವಾಹನ ಸವಾರರಿಗೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಡಿ.ಸಿ ಆದೇಶ ಹೊರಡಿಸಿದ್ದಾರೆ.

ಬಾಳೆಹೊನ್ನೂರು ಸೇತುವೆಯನ್ನು ವಿರಾಜಪೇಟೆ ಮತ್ತು ಬೈಂದೂರ್ ರಾಷ್ಟ್ರೀಯ ಹೆದ್ದಾರಿ 27ರಲ್ಲಿ ಭದ್ರಾ ನದಿಗೆ ನಿರ್ಮಿಸಲಾಗಿದೆ.

vlcsnap 2019 10 20 11h44m06s107

Share This Article
Leave a Comment

Leave a Reply

Your email address will not be published. Required fields are marked *