ಬೆಂಗಳೂರು: ಆರೋಪಿಗಳಿಗೆ ಜಾಮೀನು ಕೊಡಿಸಲು ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದು ಪತ್ತೆಯಾಗಿದೆ.
ಜಾಮೀನು ಕೊಡಿಸಲು ಇವರು ಎಲ್ಲ ರೀತಿಯ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು, ಈ ಮೂಲಕ ಆರೋಪಿಗಳಿಗೆ ಶೀಘ್ರವೇ ಜಾಮೀನು ಸಿಗಬೇಕು ಆ ರೀತಿ ಪಕ್ಕಾ ದಾಖಲೆಗಳನ್ನು ನೀಡುತ್ತಿದ್ದು. ಇಂತಹ ಖತರ್ನಾಕ್ ಗ್ಯಾಂಗನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಸವಕುಮಾರ್, ರಮಾದೇವಿ, ಮದುಕರ್, ರತ್ನಮ್ಮ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ ಜಾಮೀನು ಕೊಡಿಸಲು ನಕಲಿ ದಾಖಲೆ ಸೃಷ್ಟಿಸುವುದೇ ಇವರ ಕಾಯಕವಾಗಿತ್ತು. ಎಂತಹದ್ದೇ ಪ್ರಕರಣವಾದರೂ ಅದಕ್ಕೆ ಸೂಕ್ತ ಜಾಮೀನು ಪತ್ರದ ದಾಖಲೆಗಳನ್ನು ಈ ಗ್ಯಾಂಗ್ ತಯಾರು ಮಾಡಿ ಕೊಡುತ್ತಿತ್ತು.
ಪ್ರಕರಣದ ಕಿಂಗ್ ಫಿನ್ ರತ್ನಮ್ಮ ಮೂಲತಃ ಆಂಧ್ರ ಪ್ರದೇಶದವಳಾಗಿದ್ದು, ನಕಲಿ ವಿಲೇಜ್ ಅಕೌಂಟೆಂಟ್ ಗಳ ಮೂಲಕ ನಕಲಿ ಸೀಲ್ ಇಟ್ಟುಕೊಂಡು ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಲವರಿಗೆ ವಂಚಿಸಿದ್ದಾರೆ. ಸದ್ಯ ಆರೋಪಿಗಳಿಂದ ಎರಡು ನಕಲಿ ಸೀಲ್, ಆಧಾರ್ ಕಾರ್ಡ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಹತ್ತು ದಿನಗಳ ಕಾಲ ಕಸ್ಟಡಿಗೆ ತಗೆದುಕೊಳ್ಳಲಾಗಿದೆ.