ಬಾಗಲಕೋಟೆ: ವ್ಯಾಪಾರ ವೃದ್ಧಿಗೆ ಉಚಿತ ಈರುಳ್ಳಿ ಅಸ್ತ್ರ ಪ್ರಯೋಗಿಸಿದ ಬಾಗಲಕೋಟೆಯ ಹೋಟೆಲ್ವೊಂದು ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಿದೆ. 500 ರೂ. ಫುಡ್ ಆರ್ಡರ್ ಮಾಡಿದರೆ 1 ಕೆಜಿ ಈರುಳ್ಳಿ ಉಚಿತವೆಂದು ಗ್ರಾಹಕರನ್ನು ಸೆಳೆಯುವ ಹೊಸ ಪ್ರಯತ್ನಕ್ಕೆ ಕೈಹಾಕಿದೆ.
ಗಗನಕ್ಕೇರಿದ ಈರುಳ್ಳಿ ಬೆಲೆಯಿಂದ ಜನರು ಕಂಗಾಲಾಗಿದ್ದಾರೆ. ಹೀಗಾಗಿ ಹೋಟೆಲ್ ಪಕ್ವಾನ್ನಲ್ಲಿ ಗ್ರಾಹಕರಿಗೆ ಈರುಳ್ಳಿ ಕೊಡುಗೆ ನೀಡಲಾಗುತ್ತಿದೆ. ಮನೆ ಮನೆಗೆ ಆಹಾರ ಪೂರೈಕೆ ಮಾಡುವ ಪಕ್ವಾನ್ ಹೋಟೆಲ್, ವ್ಯಾಪಾರ ವೃದ್ಧಿಗೆ ಈ ಪ್ಲಾನ್ ಮಾಡಿದೆ. 500 ರೂ. ಫುಡ್ ಆರ್ಡರ್ ಮಾಡಿದರೆ 1 ಕೆಜಿ ಈರುಳ್ಳಿ ಉಚಿತ ಎಂಬ ಆಫರ್ ನೀಡುತ್ತಿದೆ.
ಪಕ್ವಾನ್ ಹೋಟೆಲ್ನಲ್ಲಿ 500 ರೂ. ಅಥವಾ ಅದಕ್ಕಿಂತ ಹೆಚ್ಚು ಆಹಾರ ಆರ್ಡರ್ ಮಾಡುವ ಗ್ರಾಹಕರಿಗೆ ಮನೆಗೆ ಆಹಾರದ ಜೊತೆ ಈರುಳ್ಳಿ ಪ್ಯಾಕೇಟ್ ಸಹ ಹೊಟೇಲ್ ಸಿಬ್ಬಂದಿ ತಲುಪಿಸುತ್ತಾರೆ. ಇದರ ಜೊತೆಗೆ ಹೋಟೆಲ್ಗೆ ಬಂದವರಿಗೆ ಒಂದು ಉಚಿತ ಸಸಿ ಗಿಫ್ಟ್ ಕೂಡ ಕೊಡುತ್ತಾ ಸಿಬ್ಬಂದಿ ಪರಿಸರ ಪ್ರೇಮ ಮೆರೆಯುತ್ತಿದ್ದಾರೆ.