ಬಾಗಲಕೋಟೆ: ಪರಿಷತ್ ವಿಪಕ್ಷನಾಯಕ ಎಸ್.ಆರ್ ಪಾಟಿಲ್ ಅನರ್ಹ ಶಾಸಕರನ್ನು ಮಂಗಗಳಿಗೆ ಹೋಲಿಕೆ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮಂಗಗಳು ಮರದಿಂದ ಮರಕ್ಕೆ ಹಾರುತ್ತವೆ. ಅದೇ ರೀತಿ ಪಕ್ಷಾಂತರ ಮಾಡಿದ ಅನರ್ಹರು ಮಂಗನಂತೆ ಆಡಿದ್ದಾರೆ. ಇವರನ್ನು ಮತದಾರರು ಧೂಳಿಪಟ ಮಾಡಿ ಮನೆಗೆ ಕಳಿಸುತ್ತಾರೆ ಎಂದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರೋದು ಖಚಿತ. ಮಹಾರಾಷ್ಟ್ರ ಮಾದರಿ ನಮ್ಮ ಕಣ್ಣೆದುರಿಗಿದೆ. ಅದೇ ಮಾದರಿಯಲ್ಲಿ ಸಮ್ಮಿಶ್ರ ಸರ್ಕಾರ ಬರಲಿದೆ. ಯಾರು ನಾಯಕ, ಯಾರು ಸಿಎಂ ಎಂಬ ಬಗ್ಗೆ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಇದೇ ವೇಳೆ ಉಪಚುನಾವಣೆ ಬಳಿಕ ಯಡಿಯೂರಪ್ಪ ಖುರ್ಚಿಗೆ ಕಂಟಕವಿದೆ ಅಂತ ಭವಿಷ್ಯ ನುಡಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ 11 ರಿಂದ 12 ಸ್ಥಾನ ಗೆಲ್ಲಲಿದೆ. ರಾಜಕಾರಣದಲ್ಲಿ ಏನಾಗುತ್ತೆ, ಹೆಂಗಾಗುತ್ತೆ ಹೇಳೋಕ್ಕಾಗಲ್ಲ. ಡಿಸೆಂಬರ್ 9ರ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪತನ ಆಗೋದು ಪಕ್ಕಾ ಎಂದು ಪುನರುಚ್ಚರಿಸಿದರು.
ಡಿಕೆಶಿಗೆ ಇಡಿ ನೊಟೀಸ್ ವಿಚಾರವಾಗಿ ಮಾತನಾಡಿ, ಇಡಿ ಅಧಿಕಾರಿಗಳು ವಿಚಾರಣೆ ಹಿನ್ನೆಲೆಯಲ್ಲಿ ನೊಟೀಸ್ ಕೊಡೋದು ಸಾಮಾನ್ಯ. ಅದರಲ್ಲೇನು ವಿಶೇಷ ಇಲ್ಲವೆಂದು ತಿಳಿಸಿದ್ರು.