Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಆ ಮಗುವಿನ ಆತ್ಮ ಎಷ್ಟು ಕಾಟ ಕೊಡ್ತು ಅಂತಾ ಗೊತ್ತಾದ್ರೆ ನೀವು ನಿದ್ರೇಲೂ ಬೆಚ್ಚಿಬೀಳ್ತೀರಿ..!!

Public TV
Last updated: April 8, 2018 8:35 am
Public TV
Share
4 Min Read
Baby Ghost F
SHARE

ಐರ್ಲೆಂಡ್: ಅದು ಪಶ್ಚಿಮ ಐರ್ಲೆಂಡ್. ಭೂ ಲೋಕದ ಸ್ವರ್ಗದಂತಿರೋ ತಾಣಗಳನ್ನು ಹೊತ್ತಿರೋ ಸುಂದರಾತಿ ಸುಂದರ ತಾಣ. ಇದು ಐತಿಹಾಸಿಕ ನಗರಿಯೂ ಹೌದು. ಅಂತೆಯೇ ಅನೇಕ ನಿಗೂಢ ರಹಸ್ಯಗಳನ್ನು ತನ್ನಲ್ಲಿ ಹೊತ್ತುಕೊಂಡಿರೋ ವಿಲಕ್ಷಣ ಸ್ಥಳವೂ ಹೌದು. ಇಂದಿಗೂ ಇಲ್ಲಿ ಕಳೆದು ಹೋದ ಆತ್ಮಗಳ ಪಿಸುಮಾತನ್ನು ಕೇಳಬಹುದು ಅನ್ನೋದು ಅನೇಕರ ಅನುಭವದ ಮಾತು.

ಇಂತಹ ಪ್ರಶಾಂತವಾದ ಪ್ರದೇಶದಲ್ಲಿ ಕಳೆದ 50 ವರ್ಷಗಳಿಂದ ಗೋಡಿಯವರ ಕುಟುಂಬ ವಾಸ ಮಾಡ್ತಿದೆ. ಅಂದ ಹಾಗೆ ಈ ಘಟನೆ ನಡೆದಿರೋದು 1996ರಲ್ಲಿ. ಅಂದ್ರೆ, ಇಲ್ಲಿಂದ ಸರಿ ಸುಮಾರು 20-22 ವರ್ಷಗಳ ಹಿಂದೆ. ಆ ಸಮಯದಲ್ಲಿ ಈ ಮನೆಯಲ್ಲಿ ಗೋಡಿ ಹಾಗೂ ಪತ್ನಿ ವೀನಸ್, ಮಗ ಮೈಕೆಲ್ ಹಾಗೂ ಮಗನ ಭಾವಿ ಪತ್ನಿ ನೀಹೆ, ಮಗಳು ಮೀನಲ್ ಹಾಗೂ ಆಕೆಯ ಒಂದು ತಿಂಗಳ ಮಗು ಸಾರಾ ವಾಸಮಾಡ್ತಿದ್ರು. ಆಗ ತಾನೇ ಮನೆಗೆ ಪುಟಾಣಿ ಸಾರಾಳನ್ನು ಕರೆದುಕೊಂಡು ಬಂದ ಖುಷಿಯಲ್ಲಿದ್ರು ಮನೆ ಮಂದಿ. ಆದ್ರೆ, ಯಾವಾಗ ಮಗುವನ್ನು ಕರೆದುಕೊಂಡು ಬಂದ್ರೋ ಒಂದೊಂದೇ ತೊಂದರೆಗಳು ನಡೆಯೋದಕ್ಕೆ ಆರಂಭವಾದವಂತೆ.

ಮೊದಲ ಘಟನೆ: ಮಗು ಮಲಗಿದ್ದ ತೊಟ್ಟಿಲಿನ ಮೇಲ್ಭಾಗದಲ್ಲಿ ಸಾಲಾಗಿ ಗೊಂಬೆಗಳನ್ನು ಜೋಡಿಸಲಾಗಿತ್ತು. ಅದೊಂದು ದಿನ ಮಗು ಮಲಗಿದ್ದ ಕೋಣೆಯ ಗೋಡೆಗಳು ಅಲುಗಾಡೋದಕ್ಕೆ ಶುರುವಾಯ್ತು. ತಕ್ಷಣ ಗೊಂಬೆಯೊಂದು ಮಗುವಿನ ಮೇಲೆ ಬಿದ್ದು ಬಿಡುತ್ತೆ. ಮಗು ಜೋರಾಗಿ ಅಳೋದಕ್ಕೆ ಶುರು ಮಾಡಿಬಿಡುತ್ತೆ. ಮಗು ಅಳ್ತಿರೋದನ್ನ ನೋಡಿ ಕೋಣೆಗೆ ಬಂದ ಮೀನಲ್ ಗೆ ಆತಂಕವುಂಟಾಯ್ತು. ಆದ್ರೆ ಇದು ಇಷ್ಟಕ್ಕೇ ನಿಲ್ಲಲಿಲ್ಲ ಅನ್ನೋದೇ ದುರಂತ.

baby 147416 960 720
ಸಾಂದರ್ಭಿಕ ಚಿತ್ರ

ಅದೊಂದು ದಿನ ರಾತ್ರಿ ಮನೆಯವರೆಲ್ಲಾ ಮಲಗಿದ್ರು. ಮಧ್ಯರಾತ್ರಿ 2 ಗಂಟೆ ಆಗಿರಬಹುದೇನೋ. ಅಷ್ಟರಲ್ಲೇ, ಜೋರಾಗಿ ಮಗು ಅಳೋ ಶಬ್ದ ಕೇಳೋಕೆ ಶುರುವಾಗಿತ್ತು. ಮನೆಯ ಒಂದನೇ ಮಹಡಿಯಲ್ಲಿ ಮಲಗಿದ್ದ ಮೈಕೆಲ್ ಹಾಗೂ ನೀಹೆಗೆ ಎಚ್ಚರವಾಯ್ತು. ಕೆಳಗೆ ಬಂದು ಮಗು ಮಲಗಿದ್ದ ಕೋಣೆಯ ಬಾಗಿಲನ್ನು ತೆಗೆದಾಗ ಪುಟಾಣಿ ಸಾರಾ ಹಾಗೂ ತಾಯಿ ಮೀನಲ್ ಬೆಚ್ಚಗೆ ಮಲಗಿರ್ತಾರೆ. ಇದನ್ನು ನೋಡಿದ ಮೈಕೆಲ್ ಗೆ ಅಚ್ಚರಿಯ ಜೊತೆಗೆ ಭಯಾನೂ ಆಗುತ್ತೆ. ಯಾಕಂದ್ರೆ, ಮಗು ಅಳೋ ಶಬ್ದ ಮತ್ತಷ್ಟು ಜಾಸ್ತಿಯಾಗ್ತಾನೆ ಇರುತ್ತೆ. ಇದು ಯಾವುದೋ ಆತ್ಮದ್ದೇ ಕಾಟ ಅನ್ನೋದು ಇಬ್ಬರಿಗೂ ಖಾತ್ರಿಯಾಗುತ್ತೆ.

ಈ ವಿಷ್ಯ ಮಾಧ್ಯಮಗಳ ಮೂಲಕ ಜನಕ್ಕೆ ತಿಳಿದ್ರೆ ಯಾರಾದ್ರೂ ತಮ್ಮ ಸಹಾಯಕ್ಕೆ ಬರಬಹುದು ಅಂತಾ ಮೈಕೆಲ್ ಸಲಹೆ ಕೊಡ್ತಾನೆ. ಅದೊಂದು ದಿನ ಐರ್ಲೆಂಡ್ ದೇಶದ ಪತ್ರಿಕಾ ಪ್ರತಿನಿಧಿಯೊಬ್ಬಳು ಇವರ ಮನೆಗೆ ಬರ್ತಾಳೆ. ಮೊದಮೊದಲು ಆಕೆಯೂ ಇದೆಲ್ಲಾ ಕಟ್ಟುಕಥೆ ಅಂತಾ ವಾದಿಸುತ್ತಾಳೆ. ಆದ್ರೆ, ಅವಳಿಗೂ ಆತ್ಮದ ಇರುವಿಕೆಯ ಅನುಭವವಾಗುತ್ತೆ. ಅದನ್ನು ಹಾಗೇ ಪತ್ರಿಕೆಗೆ ವರದಿ ಮಾಡ್ತಾಳೆ.

4 2
ಸಾಂದರ್ಭಿಕ ಚಿತ್ರ

ಪ್ಯಾರಾ ಸೈಕಾಲಜಿಸ್ಟ್: ಪತ್ರಿಕಾ ವರದಿ ನೋಡಿದ ಆತ್ಮ ಹಾಗೂ ಪುನರ್ಜನ್ಮದ ಬಗ್ಗೆ ಅಧ್ಯಯನ ಮಾಡ್ತಿದ್ದ ಪ್ಯಾರಾ ಸೈಕಾಲಜಿಸ್ಟ್ ತಜ್ಞೆ ಈಡಿಯಾ, ಗೋಡಿ ಮನೆಗೆ ಭೇಟಿ ಕೊಡ್ತಾಳೆ. ಅಂದ ಹಾಗೆ, ಇಲ್ಲಿ ಪ್ಯಾರಾ ಸೈಕಾಲಜಿಸ್ಟ್ ಅಂದ್ರೆ, ಮನಃಶಾಸ್ತ್ರಕ್ಕಿಂತಲೂ ಒಂದು ಹಂತ ಮೇಲಿನದ್ದೆಂದೇ ಹೇಳಬೇಕು. ವಿಜ್ಞಾನ ಹಾಗೂ ಮೂಢನಂಬಿಕೆಗಳ ನಡುವಿರೋ ತೀಕ್ಷ್ಣ ಗೆರೆಯದು. ಹೀಗೆ ಪ್ಯಾರಾ ಸೈಕಾಲಜಿಸ್ಟ್ ಈಡಿಯಾ ಮನೆಗೆ ಬಂದು ಎಲ್ಲರನ್ನೂ ಪರಿಚಯಿಸಿಕೊಳ್ತಾಳೆ. ಅವರೆಲ್ಲಾ ಹೇಳುತ್ತಿದ್ದ ಪ್ರತಿಯೊಂದು ಘಟನೆಗಳನ್ನೂ ಒಂದಕ್ಕೊಂದು ತಾಳೆ ಹಾಕ್ತಾ ಹೋಗ್ತಾಳೆ.

ತಾನು ಮನೆಯಲ್ಲಿ ಮಗುವಿನ ಕೋಣೆಗೆ ಹೋಗಬಹುದಾ ಅಂತಾ ಈಡಿಯಾ ಹೇಳ್ತಾಳೆ. ಸ್ವಲ್ಪ ಹೊತ್ತು ತನ್ನನ್ನ ಅಲ್ಲಿಯೇ ಏಕಾಂತವಾಗಿ ಇರೋದಕ್ಕೆ ಬಿಡಿ ಅಂತಾ ಕೇಳ್ಕೋತಾಳೆ. ಈಡಿಯಾ ಈ ಮನೆಯಲ್ಲಿ ಆಗಿದ್ದ ಘಟನೆಗಳ ಬಗ್ಗೆ ಪ್ಯಾರಾಸೈಕಾಲಜಿಯ ಮೂಲಕ ತಿಳಿದುಕೊಳ್ಳೋ ಪ್ರಯತ್ನ ಮಾಡಿದಾಗ, ಇದೇ ಕೋಣೆಯಲ್ಲಾದ ಘಟನೆಯೊಂದು ಗಮನಕ್ಕೆ ಬರುತ್ತೆ.

Doll
ಸಾಂದರ್ಭಿಕ ಚಿತ್ರ

ಅಲ್ಲಿ ನಡೆದಿದ್ದು ವಿಚಿತ್ರ: ಆ ಘಟನೆ ಪ್ರಕಾರ, ಇಲ್ಲಿ ಗರ್ಭಿಣಿಯೊಬ್ಬಳು ಮಗುವಿಗೆ ಜನ್ಮ ಕೊಡ್ತಾ ಇರ್ತಾಳೆ. ವ್ಯಕ್ತಿಯೊಬ್ಬ ಆಕೆಗೆ ಸಹಾಯ ಮಾಡ್ತಿರ್ತಾನೆ. ಇನ್ನು ಮತ್ತೊಬ್ಬ ವ್ಯಕ್ತಿ ಅಲ್ಲಿಯೇ ನಿಂತು ದುರುಗುಟ್ಟಿ ನೋಡುತ್ತಿರುತ್ತಾನೆ. ಸ್ವಲ್ಪ ಹೊತ್ತಲ್ಲೇ ಆ ಮಹಿಳೆ ಮಗುವಿಗೆ ಜನ್ಮ ಕೊಡ್ತಾಳೆ. ವಿಚಿತ್ರ ಅನ್ನೋ ಹಾಗೆ ಹೆರಿಗೆ ಮಾಡಿಸ್ತಾ ಇದ್ದ ವ್ಯಕ್ತಿಯೇ ಮಗುವನ್ನು ಉಸಿರುಗಟ್ಟಿಸಿ ಸಾಯಿಸಿಬಿಡ್ತಾನೆ.

ಆಗ್ಲೇ ಈಡಿಯಾಗೆ ಇಲ್ಲಿ ಅಳ್ತಿರೋದೂ ಅದೇ ಮಗುವಿನ ಆತ್ಮ ಅನ್ನೋದು ಸ್ಪಷ್ಟವಾಗುತ್ತೆ. ಇದನ್ನು ನೆಲಮಹಡಿಯಲ್ಲಿದ್ದ ಮನೆಯವರಿಗೆ ತಿಳಿಸ್ತಾಳೆ. ಜೊತೆಗೆ ಈ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳವುದು ಸಾಧ್ಯ ಅನ್ನೋದಾಗಿ ಹೇಳ್ತಾಳೆ. ಇದಕ್ಕಾಗಿ ಮನೆಯಲ್ಲಿರೋ ಮಗುವನ್ನು ಕರೆದುಕೊಂಡು ಹೊರಗೆ ಹೋಗಬೇಕಾಗುತ್ತೆ. ಉಳಿದವರು ತನಗೆ ಆತ್ಮವನ್ನು ಉಚ್ಛಾಟಿಸೋದಕ್ಕೆ ಸಹಾಯ ಮಾಡಿ ಅನ್ನೋದಾಗಿ ಈಡಿಯಾ ಹೇಳ್ತಾಳೆ. ಈಕೆಯ ಸೂಚನೆ ಪ್ರಕಾರ ಗೋಡಿ ಹಾಗೂ ವೀನಸ್ ಮಗುವನ್ನು ಕರೆದುಕೊಂಡು ಹೊರಗೆ ಹೋಗ್ತಾರೆ. ಉಳಿದ ಮೂವರು ಈಡಿಯಾ ಜೊತೆಗೆ ಇರ್ತಾರೆ.

brennanhousecradle1
ಸಾಂದರ್ಭಿಕ ಚಿತ್ರ

ತೊಟ್ಟಿಲು: ಈಡಿಯಾ, ಮೈಕೆಲ್, ನೀಹೆ ಹಾಗೂ ಮೀನಲ್ ಗೆ ಚಾಚೂ ತಪ್ಪದೆ ತನ್ನ ಸೂಚನೆಗಳನ್ನು ಪಾಲಿಸುವಂತೆ ಹೇಳ್ತಾಳೆ. ಅದರ ಪ್ರಕಾರ ಒಂದು ತೊಟ್ಟಿಲು ತಂದು ಎದುರಿಡಲಾಗುತ್ತೆ. ಮೂವರೂ ಕಣ್ಣು ಮುಚ್ಚಿದಾಗ, ಈಡಿಯಾ ಮಗುವಿನ ಆತ್ಮವನ್ನು ಆವಾಹಿಸ್ತಾಳೆ. ಆಗ ಅಲ್ಲೊಂದು ಪ್ರಕಾಶಮಾನವಾದ ಬೆಳಕಿನ ನಡುವೆ, ಆಟವಾಡ್ತಿರೋ ಮಗುವೊಂದು ಮೂಡುತ್ತೆ. ಇದು ಎಲ್ಲರ ಗಮನಕ್ಕೂ ಬರುತ್ತೆ. ಈಡಿಯಾ ಆ ಮಗುವಿಗೆ ನಿನ್ನ ಹೆತ್ತವರು ನಿನಗೋಸ್ಕರ ಕಾಯ್ತಾ ಇದ್ದಾರೆ, ಸುಂದರವಾದ ಪ್ರಪಂಚ ನಿನಗಾಗಿ ಕಾಯ್ತಾ ಇದೆ ನೀನು ಅಲ್ಲಿಗೆ ಹೋಗು ಅಂತಾ ಹೇಳ್ತಾ ಹೋಗ್ತಾಳೆ. ಆ ಆತ್ಮ ಈಡಿಯಾ ಸೂಚನೆಯಂತೆ ಮನೆ ಬಿಟ್ಟು ಹೊರಟುಹೋಗುತ್ತೆ. ಈಗ ಗೋಡಿ ಹಾಗೂ ಮನೆಯವರು ಒಂದು ಪುಟ್ಟ ಮಗುವಿನ ಆತ್ಮದಿಂದಾಗಿ ನರಕ ಅನುಭವಿಸಿಬಿಟ್ರು. ಆದ್ರೀಗ ಆ ಮನೆಯಲ್ಲಿ ಎಲ್ಲವೂ ಶಾಂತವಾಗಿದೆ. ಯಾವುದೇ ಸಮಸ್ಯೆ ಇಲ್ಲ. ಆದ್ರೆ ಇದನ್ನೆಲ್ಲಾ ನಂಬೋದು ಬಿಡೋದು ನಿಮಗೆ ಬಿಟ್ಟಿದ್ದು.

– ಕ್ಷಮಾ ಭಾರದ್ವಾಜ್, ಉಜಿರೆ

TAGGED:irelandPublic TVSoulಆತ್ಮಐರ್ಲೆಂಡ್ಪಬ್ಲಿಕ್ ಟಿವಿ
Share This Article
Facebook Whatsapp Whatsapp Telegram

Cinema Updates

Kamal Haasan
ಕಮಲ್ `ಕನ್ನಡ’ ವಿವಾದ – ಜೂ.20ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
11 hours ago
Kangana Ranaut to bengaluru
ಬೆಂಗಳೂರಿನ ಶಿವೋಹಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ ರಣಾವತ್‌
12 hours ago
Timmana Mottegalu
ಜೂ.27ಕ್ಕೆ `ತಿಮ್ಮನ ಮೊಟ್ಟೆಗಳು’ ರಿಲೀಸ್
15 hours ago
Karisma Kapoor Sunjay Kapur
ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಹೃದಯಾಘಾತದಿಂದ ನಿಧನ
1 day ago

You Might Also Like

Haveri Car Bus Accident
Crime

ಹಾವೇರಿ | ಸಾರಿಗೆ ಬಸ್‌ಗೆ ಕಾರು ಡಿಕ್ಕಿ – ಇಬ್ಬರು ದುರ್ಮರಣ, ಓರ್ವ ಗಂಭೀರ

Public TV
By Public TV
32 minutes ago
Narayanapura Dam
Districts

ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಳ – ಕೃಷ್ಣಾ ನದಿಗೆ 29,226 ಕ್ಯೂಸೆಕ್ ನೀರು ಬಿಡುಗಡೆ

Public TV
By Public TV
56 minutes ago
Ahmedabad Air India Plane Crash 2
Latest

ಏರ್‌ ಇಂಡಿಯಾ ವಿಮಾನ ದುರಂತ – ಸಾವಿನ ಸಂಖ್ಯೆ 274ಕ್ಕೆ ಏರಿಕೆ

Public TV
By Public TV
1 hour ago
Ahmedabad Air India Plane Crash 1
Latest

ಅಹಮದಾಬಾದ್ ವಿಮಾನ ಪತನ – 5 ತಂಡಗಳಿಂದ ತನಿಖೆ

Public TV
By Public TV
1 hour ago
Ahmedabad Plane Crash 1 1
Latest

ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿದೆ ವಿಮಾನ ದುರಂತದ ರಹಸ್ಯ – ನಾಳೆಯೊಳಗೆ ಅಪಘಾತಕ್ಕೆ ಅಸಲಿ ಕಾರಣ ಸಿಗುತ್ತಾ?

Public TV
By Public TV
2 hours ago
Jagannath Rath Yatra
Latest

ಬೆಂಗಳೂರು ಕಾಲ್ತುಳಿತ ಬೆನ್ನಲ್ಲೇ ಎಚ್ಚೆತ್ತ ಗುಜರಾತ್‌; ರಥಯಾತ್ರೆಯಲ್ಲಿ ಕಾಲ್ತುಳಿತ ತಪ್ಪಿಸಲು ನಯಾ ಪ್ಲ್ಯಾನ್‌ – AI ಟೆಕ್ನಾಲಜಿ ಮೊರೆ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?