ರಾಯಚೂರು: ಯೋಗ ಗುರು ಬಾಬಾ ರಾಮ್ದೇವ್ ಜಿಲ್ಲೆಯ ಸಿಂಧನೂರು ತಾಲೂಕಿನ ಅಂಬಾಮಠಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ.
ಸಿದ್ದಪರ್ವತ ಅಂಬಾದೇವಿಯ ದೇವಾಲಯದ ಬಗ್ಗೆ ತಮ್ಮ ಶಿಷ್ಯರಿಂದ ಮಾಹಿತಿ ಪಡೆದಿದ್ದ ಬಾಬಾ ರಾಮ್ದೇವ್ ಮಾರ್ಗ ಮಧ್ಯೆ ಅಂಬಾಮಠಕ್ಕೆ ಭೇಟಿ ನೀಡಿದ್ದಾರೆ. ಬಳ್ಳಾರಿಯ ಸಿರಗುಪ್ಪದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಬಾ ರಾಮ್ದೇವ್ ಅಂಬಾದೇವಿ ದರ್ಶನಪಡೆದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ – ಟ್ರೆಂಡಿಂಗ್ ಆದ ಜಯ್ ಶಾ
ಇದಕ್ಕೂ ಮುನ್ನ ಕನಕಗಿರಿಯ ಅವಧೂತರ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಂಬಾದೇವಿ ದೇವಾಲಯ ಬಗ್ಗೆ ಮಾಹಿತಿ ತಿಳಿದಿದ್ದ ಹಿನ್ನೆಲೆ ದೇವಾಲಯಕ್ಕೆ ಭೇಟಿ ನೀಡಿ ದೇವಿ ಆಶೀರ್ವಾದ ಪಡೆದರು. ದೇವಾಲಯದ ಅರ್ಚಕರು ದೇವಾಲಯಕ್ಕೆ ರಾಮ್ದೇವ್ ಅವರನ್ನು ಆದರದಿಂದ ಬರಮಾಡಿಕೊಂಡರು. ಇದನ್ನೂ ಓದಿ: ಸೋಮವಾರದಿಂದ ಪ್ರಾಥಮಿಕ ಶಾಲೆಗಳು ಆರಂಭ – ಮಾರ್ಗಸೂಚಿ ಏನು?