ವಿಜಯಪುರ: ಯಾವುದೇ ಕಾಲಕ್ಕೂ ಯಡಿಯೂರಪ್ಪ ಮುಖ್ಯಮಂತ್ರಿ ಆಗಲ್ಲ. ಅವರ ಆಗಬೇಕೆಂದರೂ ತ್ರಿಮೂರ್ತಿಗಳಾದ ಅನಂತಕುಮಾರ್ ಹೆಗ್ಡೆ, ಅನಂತಕುಮಾರ್ ಮತ್ತು ಸಂತೋಷ್ ಬಿಡಲ್ಲ ಎಂದು ಪಕ್ಷದ ಆಂತರಿಕ ಒಳಜಗಳವನ್ನು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಟೀಕಿಸಿದ್ರು.
ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಚಿವರು, ಸಿಎಂ ಸಿದ್ದರಾಮಯ್ಯ ಮೂರ್ಖರು ಅಲ್ಲ, ಯಡಿಯೂರಪ್ಪರ ಹೇಳಿಕೆ ಮೂರ್ಖತನವಾದದ್ದು. ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದು, ಮುಖ್ಯಮಂತ್ರಿ ಆಗಲ್ಲ. ಅವರ ಮಗನಿಗೂ ಟಿಕೆಟ್ ಸಿಕ್ಕಿಲ್ಲ, ಪಕ್ಷದಲ್ಲಿ ತಮ್ಮ ಸ್ಥಾನ ಏನು ಎನ್ನುವುದು ಅವರಿಗೆ ಗೊತ್ತಾಗಿದೆ ಅಂತಾ ವ್ಯಂಗ್ಯ ಮಾಡಿದ್ರು.
ಬಿಜೆಪಿ ಸಿಎಂ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಯಸ್ಸಾಯ್ತು. ಅವರಂತೂ ಮುಖ್ಯಮಂತ್ರಿ ಆಗಲ್ಲ, ಆದ್ರೆ ಅವರನ್ನ ಏನು ಮಾಡ್ಬೇಕು ಎನ್ನುವುದು ಆರ್ಎಸ್ಎಸ್ ಗೊತ್ತಿದೆ ಅಂತಾ ಲೇವಡಿ ಮಾಡಿದ್ದಾರೆ.
ಬದಾಮಿ ಕ್ಷೇತ್ರದಲ್ಲಿ ಬಿಎಸ್ವೈ ಮತದಾರರನ್ನು ಗುತ್ತಿಗೆ ತೆಗೆದುಕೊಂಡಿಲ್ಲ. ಅಲ್ಲಿಯ ಜನತೆಯ ಆರ್ಶಿರ್ವಾದ ಸಿದ್ದರಾಮಯ್ಯ ಅವರಿಗಿದ್ದು, ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸಲಿದ್ದಾರೆ. ಇತ್ತ ನನಗೂ ಬಬಲೇಶ್ವರ ಕ್ಷೇತ್ರದ ಜನತೆಯ ಆಶೀರ್ವಾದವಿದೆ ಗೆಲುವು ನನ್ನದೇ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.