ಮುಂಬೈನಿಂದ ಹೊರಡಲು ಸಿದ್ಧರಾಗಿದ್ದ ಅನರ್ಹ ಶಾಸಕರಿಗೆ ಬಿಎಸ್‍ವೈ ತಡೆ!

Public TV
1 Min Read
BSY Rebel MLAs

ಬೆಂಗಳೂರು: ಮುಂಬೈನಿಂದ ಇಂದೇ ಹೊರಡಲು ಸಿದ್ಧರಾಗಿದ್ದ ಅನರ್ಹ ಶಾಸಕರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ತಡೆ ಹಾಕಿದ್ದಾರೆ.

ಬೆಂಗಳೂರಿಗೆ ಮರಳುವ ಸಂಬಂಧ ಅನರ್ಹ ಶಾಸಕರು ಬಿ.ಎಸ್.ಯಡಿಯೂರಪ್ಪ ಅವರಿಗೆ ಕರೆ ಮಾಡಿ, ಸೋಮವಾರ ನೀವು ಸೂಚಿಸಿದ ಸ್ಥಳಕ್ಕೆ ಬಂದು ನಿಮ್ಮನ್ನು ಒಟ್ಟಾಗಿ ಭೇಟಿ ಮಾಡುತ್ತೇವೆ. ಹೀಗಾಗಿ ಇಂದು ರಾತ್ರಿಯೇ ಮುಂಬೈನಿಂದ ಹೊರಟು ಬೆಂಗಳೂರಿಗೆ ಬರುತ್ತೇವೆ ಎಂಬುದಾಗಿ ಹೇಳಿದ್ದರು ಎನ್ನುವ ವಿಚಾರ ಮೂಲಗಳಿಂದ ಲಭ್ಯವಾಗಿದೆ.

REBEL MLA 1

ಅನರ್ಹ ಶಾಸಕರ ಮನವಿಗೆ ಯಡಿಯೂರಪ್ಪ, ಇವತ್ತು ಒಂದೇ ಒಂದು ದಿನ ವಾಸ್ತವ್ಯ ಮುಂದುವರಿಸಿ. ಸೋಮವಾರ ವಿಶ್ವಾಸ ಮತಯಾಚನೆ ಪೂರ್ಣಗೊಳ್ಳುತ್ತಿದ್ದಂತೆ ಬೆಂಗಳೂರಿಗೆ ವಾಪಸ್ ಆಗಿ. ನೀವು ಬಂದರೆ ಸುಮ್ಮನೆ ಸಮಸ್ಯೆಯಾಗುತ್ತದೆ ಎಂದು ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಅತೃಪ್ತ ಶಾಸಕರ ಉಸ್ತುವಾರಿಗೆ ತೆರಳಿದ್ದ ಮಾಜಿ ಡಿಸಿಎಂ ಆರ್.ಅಶೋಕ್, ಶಾಸಕ ಡಾ.ಅಶ್ವತ್ಥ ನಾರಾಯಣ ಅವರು ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಇತ್ತ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಅವರು ಅನರ್ಹ ಶಾಸಕರ ಜೊತೆಗೆ ಸೋಮವಾರ ಬೆಂಗಳೂರಿಗೆ ಬರಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *