Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಜನಗಣತಿಗೆ ಕೇಂದ್ರದಿಂದ ಅಧಿಸೂಚನೆ – ಸರ್ಕಾರದ ನಿರ್ಧಾರ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Public TV
Last updated: June 16, 2025 6:55 pm
Public TV
Share
3 Min Read
B K Hariprasad
SHARE

ನವದೆಹಲಿ: ಕೇಂದ್ರ ಸರ್ಕಾರ ಕಡೆಗೂ ರಾಹುಲ್ ಗಾಂಧಿಯವರ (Rahul Gandhi) ಹೋರಾಟಕ್ಕೆ ಸ್ಪಂದಿಸಿ ಜನಗಣತಿ ಅಧಿಸೂಚನೆ ಆದೇಶ ಹೊರಡಿಸಿದ್ದಾರೆ. ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (B K Hariprasad) ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಯಾರೇ ಆದರೂ ಪ್ರಜಾಪ್ರಭುತ್ವದಲ್ಲಿ ಜನರ ಸ್ಥಿತಿಗತಿ ನೋಡಿಲ್ಲ ಎಂದರೆ ಕಾರ್ಯಕ್ರಮ ಕೊಡೋದು ಕಷ್ಟ. ರಾಹುಲ್ ಗಾಂಧಿಯವರ ನಿರಂತರ ಹೋರಾಟದ ಉದ್ದೇಶದ ಫಲವಾಗಿ ಕೇಂದ್ರ ಅಧಿಸೂಚನೆ ಹೊರಡಿಸಿದೆ ಅದಕ್ಕೆ ಸ್ವಾಗತ ಎಂದಿದ್ದಾರೆ. ಇದನ್ನೂ ಓದಿ: ಸಾವಿನಲ್ಲಿ ವಿಪಕ್ಷಗಳು ರಾಜಕೀಯ ಮಾಡೋದು ಬಿಡಲಿ: ಚಲುವರಾಯಸ್ವಾಮಿ

1931ರಲ್ಲಿ ಜಾತಿಯನ್ನ ಸೇರಿಸಿದ್ದರು. ಸ್ವತಂತ್ರದ ಬಳಿಕ ಮೊದಲ ಬಾರಿಗೆ ಜಾತಿಯನ್ನ ಸೇರಿಸೋದು ಬಹಳ ಮುಖ್ಯವಾದದ್ದು, ರಾಹುಲ್‌ಯವರ ಬೇಡಿಕೆ ಕೂಡ ಅದೇ ಆಗಿತ್ತು. ಸ್ವತಂತ್ರದ ಬಳಿಕ ಯಾವ ಸ್ಥಿತಿಗತಿಯಲ್ಲಿದ್ದಾರೆ ಅನ್ನೋದು ತಿಳಿಯಲಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಜಾತಿಗಣತಿ ಜಾರಿಯಾದರೆ ಒಳ್ಳೆಯದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿದ ಸತೀಶ್ ನೀನಾಸಂ, ಸಪ್ತಮಿ ನಟನೆಯ ʻದಿ ರೈಸ್ ಆಫ್ ಅಶೋಕʼ

ಜಾತಿಗಣತಿ (Caste Census) ತಡೆಗೆ ಪ್ರಬಲ ಸಮುದಾಯ ಕಾರಣ ಎನ್ನುವ ಸಿಎಂ ಪುತ್ರ ಯತೀಂದ್ರ ಹೇಳಿಕೆ ವಿಚಾರವಾಗಿ, ಕರ್ನಾಟಕ ರಾಜ್ಯದ ವಿಚಾರದಲ್ಲಿ ನಮಗೆ ಹೊಸದಲ್ಲ. 1960ರಲ್ಲಿ ನಾಗನಗೌಡ ಸಮಿತಿಯಿಂದ ಹಿಡಿದು ಹಾವನೂರ್, ವೆಂಕಟಸ್ವಾಮಿ, ಚಿನ್ನಪ್ಪ ರೆಡ್ಡಿ ಎಂಬೆಲ್ಲಾ ಸಮುದಾಯ ಇದ್ದವು. ಇದು ಹೊಸದೇನಲ್ಲ. ಎಲ್ಲಾ ಸಂದರ್ಭದಲ್ಲಿ ಕೂಡ ಕೆಲ ಮೇಲ್ಜಾತಿಯವರು ವಿರೋಧ ಮಾಡಿರೋದು ನೋಡಿಕೊಂಡು ಬಂದಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಇಸ್ರೇಲ್, ಇರಾನ್ ಮೇಲೆ ಪರಮಾಣು ಬಾಂಬ್ ಬಳಸಿದ್ರೆ, ನಾವು ಪರಮಾಣು ದಾಳಿ ಮಾಡಲ್ಲ: ಪಾಕಿಸ್ತಾನ

ಜಾತಿಗಣತಿ ಎಂದ್ರೆ ತಲೆ ಎಣಿಕೆ ಅಲ್ಲ
ಜಾತಿ ಜನಗಣತಿ ಎಂದರೇ ತಲೆ ಎಣಿಸುವ ವಿಚಾರ ಅಲ್ಲ. ಮೇಲ್ಜಾತಿಯವರಿಗೆ ಸಂಖ್ಯೆ ಬೇಕಿದೆ. ದೊಡ್ಡ ಸಂಖ್ಯೆಯಲ್ಲಿ ಹೇಳಿಕೊಳ್ಳೋಕೆ ವಿನಃ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಉದ್ಯೋಗಕ್ಕಾಗಿ ನೋಡಲು ಜಾತಿಗಣತಿ ಬೇಕು. ಜೊತೆಗೆ ದೇಶದಲ್ಲಿ ಸಮಾನತೆ ಮೂಡಿಸಲು ಬೇಕಿದೆ ಎಂದು ಹೇಳಿದ್ದಾರೆ.

1995ರ ಕಾಯ್ದೆಯ ಅನುಗುಣವಾಗಿ ಪ್ರತಿ 10 ವರ್ಷಕ್ಕೆ ಒಂದು ಬಾರಿ ಜಾತಿಗಣತಿ ಮಾಡಬೇಕು ಅಂತ ಇದೆ. ಹತ್ತು ವರ್ಷಗಳಲ್ಲಿ ಯಾವ ಸ್ಥಿತಿ ಇದೆ ಎಂದು ತಿಳಿಯಲು ಜಾತಿಗಣತಿ ಮಾಡಬೇಕು. ಹಿಂದುಳಿದವರು ಮುಂದೆ ಬಂದಿದ್ದಾರಾ ಎಂದು ನೋಡಲು ಮಾಡಬೇಕು. ಈಗ ಸಿದ್ದರಾಮಯ್ಯ ಅವರ ಸರ್ಕಾರ ತೀರ್ಮಾನ ಮಾಡಿದ್ದೇನು ಅಂದರೆ, ಇದು ಎರಡನೇ ಸಮೀಕ್ಷೆ, ಜಾತಿಗಣತಿ ಅಲ್ಲ. ಸಮೀಕ್ಷೆ ಇದು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಭೀಮಾತೀರದ ನಕಲಿ ಎನ್‌ಕೌಂಟರ್ ಕೇಸ್ – ಜು.1ಕ್ಕೆ ವಿಚಾರಣೆ ಮುಂದೂಡಿಕೆ

ಪಕ್ಷದ ಪ್ರಣಾಳಿಕೆಯಲ್ಲಿ ಜಾತಿಗಣತಿ
ಕಾಂತರಾಜು ಮಾಡಿದ್ದು ಜಾತಿ ಸಮೀಕ್ಷೆ. ಯಾರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ನೋಡಲು ಸಮೀಕ್ಷೆ ಮಾಡಲಾಗಿದೆ. ಇದು ಎರಡನೇ ವರದಿಯೇ ವಿನಃ, ಇದು ಹೊಸ ಸಮೀಕ್ಷೆ ಅಲ್ಲ. ಇದರಿಂದ ಯಾರಿಗೂ ತೊಂದರೆ ಇಲ್ಲ. ಜಾತಿಗಣತಿಯು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿದೆ. ಇದು ಜಾರಿ ಆಗಲೇಬೇಕು. ನಾವು ಸಹ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಲ್ಲು ಹೊಸ ಸಿನಿಮಾ ಡ್ಯೂನ್‌ ಕಾಪಿ? – ಕಿಡಿ ಕಿಡಿ ಕ್ಲಾರಿಟಿ ಕೊಟ್ಟ ಅಟ್ಲೀ

ಕೇಂದ್ರ ಸರ್ಕಾರ ಮಾಡ್ತಿರೋದು ಜಾತಿಯ ತಲೆ ಎಣಿಕೆ
ಕೇಂದ್ರ ಸರ್ಕಾರ ಮಾಡುವುದು ಸಮೀಕ್ಷೆ ಅಲ್ಲ. ಜಾತಿಯ ತಲೆ ಎಣಿಕೆ. ಈ ಬಗ್ಗೆ ಎಲ್ಲೂ ಹೇಳಿಲ್ಲ. ಸಮೀಕ್ಷೆ ಮಾಡಬೇಕಾಗಿರೋದು ಹಿಂದುಳಿದ ವರ್ಗಗಳ ಆಯೋಗ. ಇವರು ಜಾತಿಗಣತಿ ಮಾಡುವುದಕ್ಕೆ ಸಂತೋಷವಿದೆ. ನಾವು ಕರ್ನಾಟಕದಲ್ಲಿ ಮಾಡ್ತಿರೋದು ಎರಡನೇ ಸಮೀಕ್ಷೆ. ನಾನು ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡೋದು ಏನೆಂದರೆ ಮೊದಲ ಸಮೀಕ್ಷೆಯ ವರದಿಯನ್ನು ಬಹಿರಂಗಪಡಿಸಿ. ಅದನ್ನ ನೋಡಿ ಮಿಕ್ಕಿದ್ದು ಮಾಡಲಿ. ಈಗ ಎರಡನೇ ಸಮೀಕ್ಷೆ ಆಗಲಿದೆ. ಎಲ್ಲಿ ತಪ್ಪಾಗಿದೆ ಅಲ್ಲಿ ಸರಿಮಾಡಿಕೊಂಡು ಹೋಗಬೇಕು. ಇದು ಆಗಲೇಬೇಕಿದೆ ಎಂದಿದ್ದಾರೆ.

TAGGED:B.K hariprasadbjpCaste CensuscongressNew Delhisiddaramaiahಕಾಂಗ್ರೆಸ್ಜಾತಿ ಜನಗಣತಿನವದೆಹಲಿಬಿ.ಕೆ ಹರಿಪ್ರಸಾದ್ಬಿಜೆಪಿ
Share This Article
Facebook Whatsapp Whatsapp Telegram

You Might Also Like

Boeing 787 air india dreamliner
Latest

ಬೆಂಗಳೂರು – ಲಂಡನ್‌ ಸೇರಿದಂತೆ ದಿಢೀರ್‌ 7 ಏರ್‌ ಇಂಡಿಯಾ ಅಂತರಾಷ್ಟ್ರೀಯ ವಿಮಾನಗಳ ಹಾರಾಟ ರದ್ದು

Public TV
By Public TV
56 seconds ago
Akshay Kumar Arshad Warsi
Bollywood

ಜಾಲಿ ಎಲ್‌ಎಲ್‌ಬಿ-3: ಸೀಕ್ರೆಟ್ ಬಿಚ್ಚಿಟ್ಟ ಅಕ್ಷಯ್

Public TV
By Public TV
2 minutes ago
R Ashok 1
Bengaluru City

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಸರ್ಕಾರದ ತನಿಖೆ ಮೇಲೆ ಯಾರಿಗೂ ನಂಬಿಕೆ ಇಲ್ಲ: ಅಶೋಕ್

Public TV
By Public TV
33 minutes ago
Trump Mobile T1 Phone 2
Latest

ಟ್ರಂಪ್‌ ಹೆಸರಿನಲ್ಲಿ ಫೋನ್‌ – ಮೊಬೈಲ್‌ ಉದ್ಯಮಕ್ಕೆ ಕಾಲಿಟ್ಟ ಟ್ರಂಪ್‌ | ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

Public TV
By Public TV
50 minutes ago
Rajanikanth
Cinema

`ಕಣ್ಣಪ್ಪ’ ನೋಡಿ ವಿಷ್ಣು ಮಂಚು ಮೆಚ್ಚಿದ ರಜನಿಕಾಂತ್

Public TV
By Public TV
2 hours ago
Air India Bird Hit Ahmedabad Plane Crash
Latest

ಏರ್‌ ಇಂಡಿಯಾ ಎಂಜಿನಿಯರಿಂಗ್ ಮುಖ್ಯಸ್ಥನಿಗೆ ಡಿಜಿಸಿಎ ಬುಲಾವ್ – ಬೋಯಿಂಗ್ 787 ವಿಮಾನಗಳ ತಾಂತ್ರಿಕ ಸಮಸ್ಯೆ ಬಗ್ಗೆ ಚರ್ಚೆ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?