ನವದೆಹಲಿ: ಕೇಂದ್ರ ಸರ್ಕಾರ ಕಡೆಗೂ ರಾಹುಲ್ ಗಾಂಧಿಯವರ (Rahul Gandhi) ಹೋರಾಟಕ್ಕೆ ಸ್ಪಂದಿಸಿ ಜನಗಣತಿ ಅಧಿಸೂಚನೆ ಆದೇಶ ಹೊರಡಿಸಿದ್ದಾರೆ. ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (B K Hariprasad) ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಯಾರೇ ಆದರೂ ಪ್ರಜಾಪ್ರಭುತ್ವದಲ್ಲಿ ಜನರ ಸ್ಥಿತಿಗತಿ ನೋಡಿಲ್ಲ ಎಂದರೆ ಕಾರ್ಯಕ್ರಮ ಕೊಡೋದು ಕಷ್ಟ. ರಾಹುಲ್ ಗಾಂಧಿಯವರ ನಿರಂತರ ಹೋರಾಟದ ಉದ್ದೇಶದ ಫಲವಾಗಿ ಕೇಂದ್ರ ಅಧಿಸೂಚನೆ ಹೊರಡಿಸಿದೆ ಅದಕ್ಕೆ ಸ್ವಾಗತ ಎಂದಿದ್ದಾರೆ. ಇದನ್ನೂ ಓದಿ: ಸಾವಿನಲ್ಲಿ ವಿಪಕ್ಷಗಳು ರಾಜಕೀಯ ಮಾಡೋದು ಬಿಡಲಿ: ಚಲುವರಾಯಸ್ವಾಮಿ
1931ರಲ್ಲಿ ಜಾತಿಯನ್ನ ಸೇರಿಸಿದ್ದರು. ಸ್ವತಂತ್ರದ ಬಳಿಕ ಮೊದಲ ಬಾರಿಗೆ ಜಾತಿಯನ್ನ ಸೇರಿಸೋದು ಬಹಳ ಮುಖ್ಯವಾದದ್ದು, ರಾಹುಲ್ಯವರ ಬೇಡಿಕೆ ಕೂಡ ಅದೇ ಆಗಿತ್ತು. ಸ್ವತಂತ್ರದ ಬಳಿಕ ಯಾವ ಸ್ಥಿತಿಗತಿಯಲ್ಲಿದ್ದಾರೆ ಅನ್ನೋದು ತಿಳಿಯಲಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಜಾತಿಗಣತಿ ಜಾರಿಯಾದರೆ ಒಳ್ಳೆಯದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿದ ಸತೀಶ್ ನೀನಾಸಂ, ಸಪ್ತಮಿ ನಟನೆಯ ʻದಿ ರೈಸ್ ಆಫ್ ಅಶೋಕʼ
ಜಾತಿಗಣತಿ (Caste Census) ತಡೆಗೆ ಪ್ರಬಲ ಸಮುದಾಯ ಕಾರಣ ಎನ್ನುವ ಸಿಎಂ ಪುತ್ರ ಯತೀಂದ್ರ ಹೇಳಿಕೆ ವಿಚಾರವಾಗಿ, ಕರ್ನಾಟಕ ರಾಜ್ಯದ ವಿಚಾರದಲ್ಲಿ ನಮಗೆ ಹೊಸದಲ್ಲ. 1960ರಲ್ಲಿ ನಾಗನಗೌಡ ಸಮಿತಿಯಿಂದ ಹಿಡಿದು ಹಾವನೂರ್, ವೆಂಕಟಸ್ವಾಮಿ, ಚಿನ್ನಪ್ಪ ರೆಡ್ಡಿ ಎಂಬೆಲ್ಲಾ ಸಮುದಾಯ ಇದ್ದವು. ಇದು ಹೊಸದೇನಲ್ಲ. ಎಲ್ಲಾ ಸಂದರ್ಭದಲ್ಲಿ ಕೂಡ ಕೆಲ ಮೇಲ್ಜಾತಿಯವರು ವಿರೋಧ ಮಾಡಿರೋದು ನೋಡಿಕೊಂಡು ಬಂದಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಇಸ್ರೇಲ್, ಇರಾನ್ ಮೇಲೆ ಪರಮಾಣು ಬಾಂಬ್ ಬಳಸಿದ್ರೆ, ನಾವು ಪರಮಾಣು ದಾಳಿ ಮಾಡಲ್ಲ: ಪಾಕಿಸ್ತಾನ
ಜಾತಿಗಣತಿ ಎಂದ್ರೆ ತಲೆ ಎಣಿಕೆ ಅಲ್ಲ
ಜಾತಿ ಜನಗಣತಿ ಎಂದರೇ ತಲೆ ಎಣಿಸುವ ವಿಚಾರ ಅಲ್ಲ. ಮೇಲ್ಜಾತಿಯವರಿಗೆ ಸಂಖ್ಯೆ ಬೇಕಿದೆ. ದೊಡ್ಡ ಸಂಖ್ಯೆಯಲ್ಲಿ ಹೇಳಿಕೊಳ್ಳೋಕೆ ವಿನಃ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಉದ್ಯೋಗಕ್ಕಾಗಿ ನೋಡಲು ಜಾತಿಗಣತಿ ಬೇಕು. ಜೊತೆಗೆ ದೇಶದಲ್ಲಿ ಸಮಾನತೆ ಮೂಡಿಸಲು ಬೇಕಿದೆ ಎಂದು ಹೇಳಿದ್ದಾರೆ.
1995ರ ಕಾಯ್ದೆಯ ಅನುಗುಣವಾಗಿ ಪ್ರತಿ 10 ವರ್ಷಕ್ಕೆ ಒಂದು ಬಾರಿ ಜಾತಿಗಣತಿ ಮಾಡಬೇಕು ಅಂತ ಇದೆ. ಹತ್ತು ವರ್ಷಗಳಲ್ಲಿ ಯಾವ ಸ್ಥಿತಿ ಇದೆ ಎಂದು ತಿಳಿಯಲು ಜಾತಿಗಣತಿ ಮಾಡಬೇಕು. ಹಿಂದುಳಿದವರು ಮುಂದೆ ಬಂದಿದ್ದಾರಾ ಎಂದು ನೋಡಲು ಮಾಡಬೇಕು. ಈಗ ಸಿದ್ದರಾಮಯ್ಯ ಅವರ ಸರ್ಕಾರ ತೀರ್ಮಾನ ಮಾಡಿದ್ದೇನು ಅಂದರೆ, ಇದು ಎರಡನೇ ಸಮೀಕ್ಷೆ, ಜಾತಿಗಣತಿ ಅಲ್ಲ. ಸಮೀಕ್ಷೆ ಇದು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಭೀಮಾತೀರದ ನಕಲಿ ಎನ್ಕೌಂಟರ್ ಕೇಸ್ – ಜು.1ಕ್ಕೆ ವಿಚಾರಣೆ ಮುಂದೂಡಿಕೆ
ಪಕ್ಷದ ಪ್ರಣಾಳಿಕೆಯಲ್ಲಿ ಜಾತಿಗಣತಿ
ಕಾಂತರಾಜು ಮಾಡಿದ್ದು ಜಾತಿ ಸಮೀಕ್ಷೆ. ಯಾರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ನೋಡಲು ಸಮೀಕ್ಷೆ ಮಾಡಲಾಗಿದೆ. ಇದು ಎರಡನೇ ವರದಿಯೇ ವಿನಃ, ಇದು ಹೊಸ ಸಮೀಕ್ಷೆ ಅಲ್ಲ. ಇದರಿಂದ ಯಾರಿಗೂ ತೊಂದರೆ ಇಲ್ಲ. ಜಾತಿಗಣತಿಯು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿದೆ. ಇದು ಜಾರಿ ಆಗಲೇಬೇಕು. ನಾವು ಸಹ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಲ್ಲು ಹೊಸ ಸಿನಿಮಾ ಡ್ಯೂನ್ ಕಾಪಿ? – ಕಿಡಿ ಕಿಡಿ ಕ್ಲಾರಿಟಿ ಕೊಟ್ಟ ಅಟ್ಲೀ
ಕೇಂದ್ರ ಸರ್ಕಾರ ಮಾಡ್ತಿರೋದು ಜಾತಿಯ ತಲೆ ಎಣಿಕೆ
ಕೇಂದ್ರ ಸರ್ಕಾರ ಮಾಡುವುದು ಸಮೀಕ್ಷೆ ಅಲ್ಲ. ಜಾತಿಯ ತಲೆ ಎಣಿಕೆ. ಈ ಬಗ್ಗೆ ಎಲ್ಲೂ ಹೇಳಿಲ್ಲ. ಸಮೀಕ್ಷೆ ಮಾಡಬೇಕಾಗಿರೋದು ಹಿಂದುಳಿದ ವರ್ಗಗಳ ಆಯೋಗ. ಇವರು ಜಾತಿಗಣತಿ ಮಾಡುವುದಕ್ಕೆ ಸಂತೋಷವಿದೆ. ನಾವು ಕರ್ನಾಟಕದಲ್ಲಿ ಮಾಡ್ತಿರೋದು ಎರಡನೇ ಸಮೀಕ್ಷೆ. ನಾನು ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡೋದು ಏನೆಂದರೆ ಮೊದಲ ಸಮೀಕ್ಷೆಯ ವರದಿಯನ್ನು ಬಹಿರಂಗಪಡಿಸಿ. ಅದನ್ನ ನೋಡಿ ಮಿಕ್ಕಿದ್ದು ಮಾಡಲಿ. ಈಗ ಎರಡನೇ ಸಮೀಕ್ಷೆ ಆಗಲಿದೆ. ಎಲ್ಲಿ ತಪ್ಪಾಗಿದೆ ಅಲ್ಲಿ ಸರಿಮಾಡಿಕೊಂಡು ಹೋಗಬೇಕು. ಇದು ಆಗಲೇಬೇಕಿದೆ ಎಂದಿದ್ದಾರೆ.