Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Ayodhya Ram Mandir

Ayodhya Ram Mandir: ರಾಮಮಂದಿರಕ್ಕೆ 4 ಮಾರ್ಗ – ರಾಮನೂರಿಗೆ ಬರುವ ಭಕ್ತರಿಗಿದು ಮೋಕ್ಷದ ಹಾದಿ

Public TV
Last updated: January 12, 2024 2:59 pm
Public TV
Share
3 Min Read
Rama paths
SHARE

– 4 ವೇದ, 4 ಯುಗದಂತೆಯೇ ಅಯೋಧ್ಯೆಯಲ್ಲಿದೆ 4 ಪಥ
– ಯಾವುವು ಆ ನಾಲ್ಕು ಮಾರ್ಗ?

ಅಯೋಧ್ಯೆ (ಉತ್ತರ ಪ್ರದೇಶ): ರಾಮಮಂದಿರದಲ್ಲಿ (Ram Mandir) ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ಇಡೀ ಅಯೋಧ್ಯೆ (Ayodhya Ram Mandir) ರಾಮಮಯವಾಗಿ ಸಿಂಗಾರಗೊಳ್ಳುತ್ತಿದೆ. ಎಲ್ಲೆಲ್ಲೂ ರಾಮನಾಮ, ರಾಮಭಕ್ತಿ, ರಾಮಜಪ (Ram Paths) ಕೇಳಿಬರುತ್ತಿದೆ. ನೂರಾರು ವರ್ಷಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿರುವುದಕ್ಕೆ ರಾಮಭಕ್ತರು ಸಂತಸಗೊಂಡಿದ್ದಾರೆ. ಭಕ್ತರ ಯಾತ್ರೆ ಈಗ ರಾಮನೂರಿನ ಕಡೆ ಹೊರಟಿದೆ.

ಸನಾತನ ಧರ್ಮದಲ್ಲಿ ನಾಲ್ಕು ವೇದ, ನಾಲ್ಕು ಯುಗಗಳು ಜನರಿಗೆ ದಾರಿದೀಪವಿದ್ದಂತೆ. ಅದರಿಂದ ಪ್ರೇರೇಪಣೆಗೊಂಡ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ನೇತೃತ್ವದ ಸರ್ಕಾರ ರಾಮನೂರಿಗೆ ಯಾತ್ರೆ ಕೈಗೊಳ್ಳುವ ಭಕ್ತರಿಗಾಗಿ ನಾಲ್ಕು ಪಥಗಳನ್ನು ಅಭಿವೃದ್ಧಿ ಪಡಿಸಿದೆ. ರಾಮನಗರಿಗೆ ಬರುವವರಿಗೆ ಇದು ಕೇವಲ ಮಾರ್ಗವಲ್ಲ, ಮೋಕ್ಷದ ಹಾದಿ. ಬನ್ನಿ ಹಾಗಿದ್ರೆ ಆ ಮೋಕ್ಷದ ನಾಲ್ಕು ಪಥಗಳ ಬಗ್ಗೆ ತಿಳಿಯೋಣ. ಇದನ್ನೂ ಓದಿ: ಮೋದಿ ನಾಸಿಕ್‌ನಿಂದಲೇ ವ್ರತ ಆರಂಭಿಸಿದ್ದು ಯಾಕೆ? ರಾಮಾಯಣಕ್ಕೂ ನಾಸಿಕ್‌ಗೂ ಏನು ಸಂಬಂಧ?

ram path

ಯಾವುವು ಆ 4 ಪಥ?
ಧರ್ಮಪಥ, ರಾಮಪಥ, ಭಕ್ತಿಪಥ ಮತ್ತು ಜನ್ಮಭೂಮಿಪಥ ಎಂಬ ನಾಲ್ಕು ಮಾರ್ಗಗಳ ಬಗ್ಗೆ ಅಯೋಧ್ಯೆಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಮಾರ್ಗಗಳು ಮೋಕ್ಷದ ಪಥ ಎಂದೇ ಬಿಂಬಿತವಾಗಿವೆ. ರಾಮನಗರಕ್ಕೆ ಬರುವವರು ಈ ಮಾರ್ಗದಲ್ಲಿ ಬರಬೇಕು.

ರಾಮಜನ್ಮಭೂಮಿ ದೇವಸ್ಥಾನಕ್ಕೆ ಹೋಗುವ ಎರಡು ಲೇನ್ ರಸ್ತೆ
ಲತಾ ಮಂಗೇಶ್ಕರ್ ಚೌಕ್‌ನಿಂದ ಲಕ್ನೋ-ಗೋರಖ್‌ಪುರ ಹೆದ್ದಾರಿಯನ್ನು ಸಂಪರ್ಕಿಸುವ 2 ಕಿಮೀ ಉದ್ದದ ನಾಲ್ಕು ಪಥದ ಧರ್ಮಪಥ, ಸಹದತ್‌ಗಂಜ್‌ನಿಂದ ಲತಾ ಮಂಗೇಶ್ಕರ್ ಚೌಕ್ (ಹೊಸ ಘಾಟ್)ಗೆ ಸಂಪರ್ಕಿಸುವ 12.94 ಕಿಮೀ ಉದ್ದದ ನಾಲ್ಕು ಪಥದ ರಾಮಪಥ, ಶೃಂಗಾರ್ ಹಾತ್‌ನಿಂದ ಹನುಮಾನ್ ಘರ್‌ ವರೆಗಿನ ರಸ್ತೆಯು ರಾಮಪಥಕ್ಕೆ ಸಂಪರ್ಕ ಹೊಂದಿದೆ. ನಾಲ್ಕು ಪಥದ 742 ಮೀಟರ್ ಉದ್ದದ ಭಕ್ತಿಪಥ, ಅದೇ ರೀತಿ ಎರಡು ಪಥದ 580 ಮೀಟರ್ ಉದ್ದದ ಜನ್ಮಭೂಮಿಪಥ ರಾಮಪಥದಲ್ಲಿಯೇ ಸುಗ್ರೀವ ಕೋಟೆ ಬಿರ್ಲಾ ಧರ್ಮಶಾಲಾ ಮೂಲಕ ರಾಮಜನ್ಮಭೂಮಿ ದೇವಸ್ಥಾನಕ್ಕೆ ಹೋಗುತ್ತದೆ. ಇದನ್ನೂ ಓದಿ: ರಾಮಲಲ್ಲಾ ಪ್ರತಿಷ್ಠಾಪನೆ, ಇತರೆ ಪೂಜೆಗಳ ಬಗ್ಗೆ ಪ್ರಧಾನ ಅರ್ಚಕರು ವಿವರಿಸಿದ್ದು ಹೀಗೆ

ayodhya ram mandir

ರಾಮಪಥದಲ್ಲಿ ಈ ಹಿಂದೆ ನೂಕುನುಗ್ಗಲು ಉಂಟಾಗ್ತಿತ್ತು
ಈಗಿನ ರಾಮಪಥ ಜನಸಂದಣಿ, ನೂಕುನುಗ್ಗಲು ಮೊದಲಾದ ಕಿರಿಕಿರಿಯಿಂದಲೇ ಕೂಡಿರುತ್ತಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಜನರ ಮುಖಗಳು ಅರಳಿವೆ. ಕಿರಿಕಿರಿ ತಪ್ಪಿದೆ. ಮಾರ್ಗ ಅಭಿವೃದ್ಧಿಯಾಗಿದೆ. ಸುಂದರವಾಗಿ ರೂಪುಗೊಂಡಿದೆ. ಮಾರ್ಗದುದ್ದಕ್ಕೂ ರಾಮಭಕ್ತಿ ಚಿತ್ರಣ ಮನ ಸೆಳೆಯುವಂತಿದೆ. ಪ್ರಾಚೀನ ವೈಭವವನ್ನು ಆಧುನಿಕ ಜೀವನಶೈಲಿಗೆ ಒಗ್ಗಿಸಿಕೊಂಡು ಅಯೋಧ್ಯೆಯ ಪುನಶ್ಚೇತನದ ಹಾದಿಯನ್ನು ಪ್ರತಿಬಿಂಬಿಸಲಾಗಿದೆ.

ದೈವತ್ವದ ಪ್ರವೇಶದ ಸಂಕೇತ
ಹನುಮತ್ ನಿವಾಸದ ಮಹಂತ್ ಆಚಾರ್ಯ ಮಿಥಿಲೇಶ್ ನಂದಿನಿ ಶರಣ್, ಈ ನಾಲ್ಕು ಮಾರ್ಗಗಳನ್ನು 4 ವೇದಗಳು, ನಾಲ್ಕು ಯುಗಗಳಾಗಿ ಮಾತ್ರವಲ್ಲ ನಾಲ್ಕು ಪುರುಷಾರ್ಥಗಳು ಹಾಗೂ ನಾಲ್ಕು ಆಶ್ರಮಗಳಾಗಿ ನೋಡಬಹುದು ಎಂದು ಹೇಳುತ್ತಾರೆ. ಪುರುಷಾರ್ಥವಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷವನ್ನು ತೆಗೆದುಕೊಂಡರೆ, ಧರ್ಮಪಥವು ನಿಮ್ಮನ್ನು ಹೆದ್ದಾರಿಯಿಂದ ಅಯೋಧ್ಯೆಗೆ ಕರೆದೊಯ್ಯುತ್ತದೆ. ಇದು ದೈವತ್ವದ ಪ್ರವೇಶವನ್ನು ಸಂಕೇತಿಸುತ್ತದೆ. ರಾಮಪಥವು ನಿಮ್ಮನ್ನು ಅಯೋಧ್ಯೆಗೆ ಪ್ರವೇಶಿಸುವಂತೆ ಮಾಡುತ್ತದೆ. ರಾಮನ ಜೀವನದಂತೆಯೇ ಇದು ಅತ್ಯಂತ ದೀರ್ಘವಾದ ಮಾರ್ಗವಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ 11 ದಿನಗಳ ವ್ರತದ ಮಹತ್ವ ಏನು?

ಪ್ರತಿ ಹಾದಿಯಲ್ಲಿ ರಾಮನ ಜೀವನ ಚರಿತ್ರೆ
ರಾಮಪಥ ಬಗ್ಗೆ ಇಲ್ಲಿನ ಜನರು ತಮ್ಮದೇ ಆದ ಭಾವನೆಗಳನ್ನು ಹೊಂದಿದ್ದಾರೆ. ನೀವು ಧಾರ್ಮಿಕ ಮಾರ್ಗವನ್ನು ತಲುಪಿದ ತಕ್ಷಣ ಭಗವಾನ್ ಶ್ರೀರಾಮನ ಜೀವನದ ಚಿತ್ರಣವನ್ನು ಅನುಭೂತಿ ಪಡೆಯುತ್ತೀರಿ. ಸರಯು ಪವಿತ್ರ ನದಿ ದಡವನ್ನು ತಲುಪುವ ಮೂಲಕ ನಿಮ್ಮ ಮನಸ್ಸು ಆಧ್ಯಾತ್ಮಿಕ ಅನುಭವದಿಂದ ತೃಪ್ತವಾಗುತ್ತದೆ. ರಾಮನ ಹಾದಿಯಲ್ಲಿ ನೀವು ಆಧ್ಯಾತ್ಮಿಕ ಮತ್ತು ಆರ್ಥಿಕ ಸಮೃದ್ಧಿಯ ಕುರುಹುಗಳನ್ನು ನೋಡುತ್ತೀರಿ. ಭಗವಾನ್ ಶ್ರೀರಾಮನು ಯಾವಾಗಲೂ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ಆದ್ದರಿಂದ ಭಕ್ತಿಪಥ ಎಂಬ ಹೆಸರು ಅರ್ಥಪೂರ್ಣವಾಗಿದೆ. ಅವರ ಜನ್ಮಸ್ಥಳವು ವಿಮೋಚಕವಾಗಿದೆ. ಇತರ ಮೂಲಭೂತ ಪ್ರೇರಣೆಗಳೂ ಇವೆ. ಇದನ್ನೂ ಓದಿ: ಗುಜರಾತ್‌ನಿಂದ ಅಯೋಧ್ಯೆಗೆ ಆಗಮಿಸಿದೆ 500 ಕೆಜಿಯ ಬೃಹತ್ ನಗಾರಿ

TAGGED:AyodhyaFour PathsRam Mandirಅಯೋಧ್ಯೆನಾಲ್ಕು ಪಥರಾಮಮಂದಿರ
Share This Article
Facebook Whatsapp Whatsapp Telegram

Cinema News

vijay raghavendra 2
ವಿಷ್ಣುವರ್ಧನ್ ಸ್ಮಾರಕ ನೆಲಸಮ: ವಿಜಯ್ ರಾಘವೇಂದ್ರ ಬೇಸರ
Cinema Latest Top Stories
Dvitva Web Series Pawan Kumar
ಅಪ್ಪುಗೆ ಮಾಡಿದ ದ್ವಿತ್ವ ಕಥೆ ವೆಬ್ ಸಿರೀಸ್ ಆಗಲಿದೆ: ಪವನ್‌ಕುಮಾರ್
Cinema Latest Top Stories
Vishnuvardhan Memorial 1
ವಿಷ್ಣು ಸಮಾಧಿ ತೆರವು; ಹೈಕೋರ್ಟ್‌ಗೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಕೆ
Cinema Court Latest Sandalwood Top Stories
Gulshan Devaiah kantara chapter 1
ಹೊಂಬಾಳೆ ಫಿಲಮ್ಸ್‌ನ ‘ಕಾಂತಾರ ಚಾಪ್ಟರ್ 1’ ನಲ್ಲಿ ಕುಲಶೇಖರನ ಪಾತ್ರದಲ್ಲಿ ಗುಲ್ಶನ್ ದೇವಯ್ಯ
Cinema Latest Top Stories
Darshan 8
ಸೆಲ್‌ನಲ್ಲೇ ವಾಕಿಂಗ್, ತೆಳುವಾದ ಬೆಡ್ ಮೇಲೆ ಸ್ಲೀಪಿಂಗ್ – ರಾಜಾತಿಥ್ಯ ಇಲ್ದೇ `ಡಿ’ ಗ್ಯಾಂಗ್ ಫುಲ್ ಸೈಲೆಂಟ್
Bengaluru City Cinema Karnataka Latest Top Stories

You Might Also Like

Lakshmi Hebbalkar 3
Bengaluru City

ಪುನರ್ವಸತಿ ಕಾರ್ಯಕರ್ತರ ಗೌರವಧನ 1,000 ರೂ. ಹೆಚ್ಚಳ – ಲಕ್ಷ್ಮಿ ಹೆಬ್ಬಾಳ್ಕರ್‌

Public TV
By Public TV
2 minutes ago
Dharmasthala Msk Man Friend Raju Mandya
Bengaluru City

ನೂರಾರು, ಸಾವಿರಾರು ಹೆಣ ಹೂತಿದ್ದೇನೆ ಎನ್ನುವುದು ಸುಳ್ಳು: ಮಾಸ್ಕ್‌ಮ್ಯಾನ್‌ ಜೊತೆ ಕೆಲಸ ಮಾಡಿದ್ದ ಕೆಲಸಗಾರ

Public TV
By Public TV
6 minutes ago
Radhakrishnan
Latest

ಉಪರಾಷ್ಟ್ರಪತಿ ಚುನಾವಣೆ | ಮೋದಿ ಸಮ್ಮುಖದಲ್ಲಿ NDA ಅಭ್ಯರ್ಥಿ ಸಿಪಿ ರಾಧಾಕೃಷ್ಣನ್‌ ನಾಮಪತ್ರ ಸಲ್ಲಿಕೆ

Public TV
By Public TV
18 minutes ago
Ballary ASI Heartattack
Bellary

ಕರ್ತವ್ಯ ನಿರತ ASI ಹೃದಯಾಘಾತಕ್ಕೆ ಬಲಿ

Public TV
By Public TV
20 minutes ago
Bharath Shetty
Bengaluru City

ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ವಿದೇಶದಿಂದ ಫಂಡಿಂಗ್‌ – ಭರತ್ ಶೆಟ್ಟಿ ಬಾಂಬ್‌

Public TV
By Public TV
44 minutes ago
Rekha Gupta 2
Latest

ದೆಹಲಿ ಸಿಎಂಗೆ ಕಪಾಳಮೋಕ್ಷ – ತಿಹಾರ್‌ ಜೈಲಿನಲ್ಲಿದ್ದ ತನ್ನ ಸಂಬಂಧಿ ಬಿಡಿಸೋದಕ್ಕಾಗಿ ರೇಖಾ ಗುಪ್ತಾ ಭೇಟಿಗೆ ಬಂದಿದ್ದ ವ್ಯಕ್ತಿ

Public TV
By Public TV
47 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?