ಟೆಹ್ರಾನ್: ಆಯತೊಲ್ಲಾ ಖಮೇನಿ (Ayatollah Khamenei) ಭಾರತವನ್ನು (India) ಪ್ರೀತಿಸುತ್ತಿದ್ದರು ಎಂದು ಇರಾನಿನ (Iran) ಸರ್ವೋಚ್ಚ ನಾಯಕನ ರಾಯಭಾರಿ ಹೇಳಿದ್ದಾರೆ. ಭಾರತ-ಇರಾನ್ ಮಾತುಕತೆಗಳು ವೇಗವನ್ನು ಪಡೆಯುತ್ತಿದ್ದಂತೆ ಈ ಹೇಳಿಕೆ ಬಂದಿದೆ.
ಭಾರತಕ್ಕೆ ಇರಾನ್ನ ಸರ್ವೋಚ್ಚ ನಾಯಕನ ಪ್ರತಿನಿಧಿ ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ, ದಿವಂಗತ ಅಯತೊಲ್ಲಾ ಅಲಿ ಖಮೇನಿ ಅವರು ಭಾರತದೊಂದಿಗೆ ಬಲವಾದ ಸಹಕಾರ, ಉತ್ತಮ ಬಾಂಧವ್ಯ ಹೊಂದಿದ್ದರು. ಇತ್ತೀಚಿನ ರಾಜತಾಂತ್ರಿಕ ಸಂಬಂಧವು ವಿಶೇಷವಾಗಿ ಇಂಧನ ಕಾರಿಡಾರ್ ವಿಚಾರದಲ್ಲಿ ಪರಸ್ಪರ ಪ್ರಯೋಜನಕಾರಿಯಾಗಿವೆ ಎಂದರಲ್ಲದೇ, ನಡೆಯುತ್ತಿರುವ ಪ್ರಾದೇಶಿಕ ಸಂಘರ್ಷದಿಂದ ಇರಾನ್ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುಎಇಯಲ್ಲಿ ಇರಾನ್ ದಾಳಿ ವೀಡಿಯೋ ಮಾಡಿದ್ರೆ ಅರೆಸ್ಟ್ – ಇಲ್ಲಿವರೆಗೂ 45 ಮಂದಿ ಅಂದರ್
ದಿವಂಗತ ಅಯತೊಲ್ಲಾ ಭಾರತವನ್ನು ಪ್ರೀತಿಸುತ್ತಿದ್ದರು. ಇರಾನ್ ಮತ್ತು ಭಾರತದ ನಡುವೆ ಉತ್ತಮ ಸಹಕಾರಕ್ಕಾಗಿ ಹಲವಾರು ಬಾರಿ ಒತ್ತಾಯಿಸಿದ್ದರು. ಖಮೇನಿಯವರ ಪುತ್ರ ಮೊಜ್ತಾಬಾ ಖಮೇನಿ ಕೂಡ ಭಾರತದೊಂದಿಗೆ ಉತ್ತಮ ಸಹಯೋಗವನ್ನು ಒತ್ತಿ ಹೇಳಿದ್ದಾರೆ. ಭಾರತೀಯ ಜನರನ್ನು ಹೊಗಳುತ್ತಾರೆ ಎಂದು ಹೇಳಿದ್ದಾರೆ.
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಕುರಿತು ಮಾತನಾಡಿದ ಇಲಾಹಿ, ಇರಾನ್ ಯುದ್ಧವನ್ನು ಪ್ರಾರಂಭಿಸಲಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಈ ಸಂದರ್ಭಗಳಲ್ಲಿ ಇರಾನ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಬಯಸುತ್ತದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಬಿಡುಗಡೆಗೆ ಕೇಂದ್ರ ನಿರ್ಧಾರ
ಮಾತುಕತೆಯಲ್ಲಿನ ಪ್ರಗತಿಯಿಂದ ಎರಡೂ ನಿಯೋಗಗಳು ತುಂಬಾ ಸಂತೋಷಪಟ್ಟವು. ಆದರೆ ಇದ್ದಕ್ಕಿದ್ದಂತೆ ಅಮೆರಿಕವು ಜಿಯೋನಿಸ್ಟ್ ಆಡಳಿತದೊಂದಿಗೆ ಅನೇಕ ನಾಗರಿಕರನ್ನು ಗುರಿಯಾಗಿಸಿಕೊಂಡು ಇರಾನ್ ಮೇಲೆ ದಾಳಿ ಮಾಡಿತು. ಈ ಯುದ್ಧವನ್ನು ಗೆಲ್ಲುತ್ತೇವೆ ಎಂದು ನಾವು ಭರವಸೆ ಹೊಂದಿದ್ದೇವೆ. ನಮ್ಮ ಘನತೆ ಮತ್ತು ನಮ್ಮ ಭೂಮಿಗಾಗಿ ನಮ್ಮಲ್ಲಿರುವ ಎಲ್ಲವನ್ನೂ ತ್ಯಾಗ ಮಾಡುತ್ತೇವೆ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.

