ಆಟೋ, ಕಾರು ಮುಖಾಮುಖಿ ಡಿಕ್ಕಿ- ಆಟೋ ಚಾಲಕ ಸ್ಥಳದಲ್ಲೇ ಸಾವು

Public TV
1 Min Read
HSN ACCIDENT

ಹಾಸನ: ಆಟೋ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬ್ಯಾಡರಹಳ್ಳಿ ಗೇಟ್ ಬಳಿ ನಡೆದಿದೆ.

ಕುಣಿಗಲ್ ಜನತಾ ಹೌಸ್ ನಿವಾಸಿ ಪ್ರದೀಪ್ (22) ಮೃತಪಟ್ಟಿರುವ ದುರ್ದೈವಿ. ಇವರು ಹಿರೀಸಾವೆ ಗ್ರಾಮದಿಂದ ಬ್ಯಾಡರಹಳ್ಳಿಗೆ ಹಿಂದಿರುಗುತ್ತಿದ್ದರು. ಕಾರು ಬೆಂಗಳೂರು ಕಡೆಗೆ ತೆರಳುತ್ತಿತ್ತು. ಈ ಸಂಧರ್ಭದಲ್ಲಿ ಸುಮಾರು ಮುಂಜಾನೆ 5.30 ಕ್ಕೆ ರಾಷ್ಟ್ರೀಯ ಹೆದ್ದಾರಿ 75 ರ ಹಿರೀಸಾವೆ ಸಮೀಪದಲ್ಲಿ ತುಂಬಾ ಮಂಜು ಇದ್ದ ಕಾರಣ ದಾರಿ ಕಾಣದೆ ಕಾರು ಮತ್ತು ಆಟೋ ಮುಖಾಮುಖಿ ಡಿಕ್ಕಿ ಹೊಡೆದಿವೆ. ಇದರ ಪರಿಣಾಮ ಪ್ರದೀಪ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

vlcsnap 2017 11 15 11h23m10s35

ಘಟನೆ ನಡೆದ ಸ್ಥಳಕ್ಕೆ ಹಿರಿಸಾವೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯಕ್ಕೆ ಕಾರ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

vlcsnap 2017 11 15 11h23m59s10

vlcsnap 2017 11 15 11h23m39s34

vlcsnap 2017 11 15 11h23m19s126
vlcsnap 2017 11 15 11h24m27s25

Share This Article
Leave a Comment

Leave a Reply

Your email address will not be published. Required fields are marked *