ದಾವಣಗೆರೆ: ಜಿಲ್ಲಾ ನ್ಯಾಯಾಧೀಶರ (Judge) ಮನೆಗೆ ಕಳ್ಳರು ಕನ್ನ ಹಾಕಲು ಯತ್ನಿಸಿ, ಪೊಲೀಸರನ್ನು ಕಂಡು ಪರಾರಿಯಾದ ಘಟನೆ ದಾವಣಗೆರೆಯ (Davangere) ಕುಂದುವಾಡ ಬಳಿಯ ತುಂಗಭದ್ರಾ ಬಡಾವಣೆಯಲ್ಲಿ ನಡೆದಿದೆ.
ಮನೆಯ ಹಿಂದಿನ ಬಾಗಿಲಿನಿಂದ 5 ಜನರ ಕಳ್ಳರ ಗ್ಯಾಂಗ್ ಕಳ್ಳತನಕ್ಕೆ ಬಂದಿದೆ. ಈ ವೇಳೆ ಜಡ್ಜ್ ಮನೆಗೆ ಭದ್ರತೆ ನೀಡಿದ್ದ ಪೊಲೀಸರನ್ನು ಕಂಡು ಕಳ್ಳರು ಪರಾರಿಯಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಳ್ಳರು ಪೊಲೀಸರನ್ನ ಕಂಡು ಓಡಿ ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಒಂದು ವಾರದ ಮುಂಚೆ ಅದೇ ಏರಿಯಾದಲ್ಲಿ ಮೂರು ಮನೆಯಲ್ಲಿ ಕಳ್ಳತನ ನಡೆದಿತ್ತು. ಮೂರು ಮನೆಯಲ್ಲಿ ಚಿನ್ನಾಭರಣ, ಬೆಳ್ಳಿ ಕದ್ದು ಕಳ್ಳರು ಪರಾರಿಯಾಗಿದ್ದರು. ಮೂರು ಮನೆ ಕಳ್ಳತನದ ಬಳಿಕ ಜಡ್ಜ್ ಮನೆಗೆ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.
ಈ ಸಂಬಂಧ ವಿದ್ಯಾನಗರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.