ಭಾರತದಲ್ಲಿ ಮೀಟೂ (MeToo) ಚಳುವಳಿ ಆರಂಭಿಸುವ ಮೂಲಕ ಭಾರತೀಯ ಸಿನಿಮಾ ರಂಗವನ್ನೇ ಬೆಚ್ಚಿಬೀಳಿಸುವಂತೆ ಮಾಡಿದವರು ಬಾಲಿವುಡ್ ನಟಿ ತನುಶ್ರೀ ದತ್ತಾ (Tanushree Dutt). ಸಿನಿಮಾಗಳಿಗಿಂತಲೂ ಇವರು ವಿವಾದಗಳ ಕಾರಣದಿಂದಾಗಿಯೇ ಸಖತ್ ಸುದ್ದಿ ಆದವರು. ಅದರಲ್ಲೂ ಬಾಲಿವುಡ್ ನ ಖ್ಯಾತ ನಾಮರ ನೀಚತನವನ್ನು ಬಯಲಿಗೆ ಎಳೆದ ಹೆಗ್ಗಳಿಕೆ ಕೂಡ ಇವರದ್ದು. ಈ ಎಲ್ಲ ಕಾರಣಗಳಿಂದಾಗಿ ತನುಶ್ರೀ ಜೀವ ಅಪಾಯದಲ್ಲಿತ್ತಂತೆ.
ತಮ್ಮ ಮತ್ತು ತಮಗೆ ಗೊತ್ತಿರುವವರ ಮೇಲಾದ ಶೋಷಣೆಯ ಕುರಿತಾಗಿ ತನುಶ್ರೀ ಮಾತನಾಡಿದ ನಂತರ ಇಡೀ ಬಾಲಿವುಡ್ (Bollywood) ಇವರ ವಿರುದ್ಧ ತಿರುಗಿ ಬಿದ್ದಿದೆಯಂತೆ. ಅಷ್ಟೇ ಅಲ್ಲದೇ, ಇವರನ್ನು ವಿವಿಧ ಬಗೆಯಲ್ಲಿ ಕೊಲ್ಲುವ (Murder) ಪ್ರಯತ್ನವನ್ನೂ ಮಾಡಲಾಗಿದೆಯಂತೆ. ಇಂತಹ ಅಚ್ಚರಿಯ ವಿಷಯವನ್ನು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಧ್ರುವ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡ್ತಾರಾ ರವಿಮಾಮನ ಬೆಡಗಿ ಶಿಲ್ಪಾ ಶೆಟ್ಟಿ
ಮೊದ ಮೊದಲು ನನ್ನನ್ನು ಕಾರು ಆಕ್ಸಿಡೆಂಟ್ (Accident) ಮೂಲಕ ಕೊಲ್ಲುವ ಪ್ರಯತ್ನ ಮಾಡಲಾಯಿತು. ಅಲ್ಲದೇ, ವಿಷ (Poison) ಕುಡಿಸಿ ಸಾಯಿಸಲು ಯತ್ನಿಸಲಾಯಿತು. ಕಾರಿನ ಬ್ರೇಕ್ ಫೇಲ್ ಕೂಡ ಮಾಡಿದ್ದರು. ಹಾಗಾಗಿ ನನಗೆ ಅಪಘಾತವಾಗಿ ಮೂಳೆ ಕೂಡ ಮುರಿದಿತ್ತು. ಅದರಿಂದ ಆಚೆ ಬರಲು ಹಲವು ತಿಂಗಳುಗಳೇ ಬೇಕಾದವು ಎಂದಿದ್ದಾರೆ ತನುಶ್ರೀ.