ಬಾಲಕಿಯ ಅಪಹರಣಕ್ಕೆ ಯತ್ನ!

Public TV
1 Min Read
BGK KIDNAP

ಬಾಗಲಕೋಟೆ: ಬಿಸ್ಕೇಟ್‍ನಲ್ಲಿ ಮದ್ದು ಬರಿಸಿ ಬಾಲಕಿ ಅಪಹರಣಕ್ಕೆ ಯತ್ನಿಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಗದಗದಲ್ಲಿ ಮೂವರಿಂದ ಬಾಲಕಿ ಅಪಹರಣ ಮಾಡಲಾಗಿದೆ. ಚಾಕುವಿನಿಂದ ಹಲ್ಲೆ ಮಾಡೋದಾಗಿ ಹೇಳಿ ಬಾಲಕಿ ಬೆದರಿಸಿ, ಬಾಯಿಗೆ ಬಟ್ಟೆ ಕಟ್ಟಿ ರೈಲ್ವೆಯಲ್ಲಿ ಕರೆದುಕೊಂಡು ಬಂದಿದ್ದಾರೆ. ಗದಗದಿಂದ ಸೋಲಾಪೂರ ಕಡೆಗೆ ಹೋಗುವ ಮಾರ್ಗ ಮಧ್ಯೆ ಅದೃಷ್ಟವಶಾತ್ ಆ ಬಾಲಕಿ ಬಾಗಲಕೋಟೆ ರೈಲ್ವೆ ಪೊಲೀಸರ ಬಳಿ ಬಂದು ನಡೆದ ಘಟನೆ ಎಲ್ಲವನ್ನು ತಿಳಿಸಿದ್ದಾಳೆ.

ಗದಗ ಮೂಲದ 11 ವಷ9ದ ಬಾಲಕಿ ಶಿವಪ್ಪ ಮತ್ತು ಶಾರದಾ ಎಂಬ ದಂಪತಿಗಳ ಪುತ್ರಿಯಾಗಿದ್ದು, ತನ್ನ ಅಜ್ಜಿಯೊಂದಿಗೆ ಗದಗನಲ್ಲಿ ವಾಸವಾಗಿದ್ದಳು. ರಾತ್ರಿ 11:30ರ ವೇಳೆಗೆ ಮನೆಯ ಬಾಗಿಲು ತೆಗೆದು ತನ್ನ ಬಾಯಿಗೆ ಬಟ್ಟೆ ಕಟ್ಟಿ ಅಪರಿಚಿತರು ಕರೆದುಕೊಂಡು ಬಂದಿದ್ದಾರೆ. ನಂತರ ಬಾಗಲಕೋಟೆ ಬರುತ್ತಿದ್ದಂತೆ ನನಗೆ ಮದ್ದು ಬೆರಸಿರುವ ಬಿಸ್ಕೇಟ್ ನೀಡಿದರು. ಕೊನೆಗೆ ನಿಲ್ದಾಣ ಬರುತ್ತಿದ್ದಂತೆ ನಾನು ಎಲ್ಲರಿಂದಲೂ ತಪ್ಪಿಸಿಕೊಂಡು ಬಂದಿದ್ದೇನೆ ಎಂದು ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಬಾಲಕಿ ಕ್ಷಣ ಕ್ಷಣಕ್ಕೂ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾಳೆ. ಬಾಲಕಿಯೇ ಮನೆಯಿಂದ ಹೊರ ಬಂದಳಾ? ಆಕೆಯನ್ನು ಅಪಹರಿಸಿದವರು ಯಾರು? ಎಂಬ ಹಲವು ಪ್ರಶ್ನೆಗಳು ಪೊಲೀಸರನ್ನು ಕಾಡುತ್ತಿವೆ. ಸದ್ಯ ಪೊಲೀಸರ ರಕ್ಷಣೆಯಲ್ಲಿದ್ದ ಬಾಲಕಿಯನ್ನು ಆಕೆಯ ಪೋಷಕರ ವಶಕ್ಕೆ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿಯ ಗೊಂದಲಮಯ ಹೇಳಿಕೆಗಳನ್ನಾಧರಿಸಿ ತನಿಖೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *