ಕರಾವಳಿಯಲ್ಲಿ ಮತ್ತೆ ಪೊಲೀಸ್ ನೈತಿಕಗಿರಿ – ತಮಿಳು ನಟಿಗೆ ಪೊಲೀಸ್, ಹಿಂದು ಸಂಘಟನೆ ಕಾರ್ಯಕರ್ತರಿಂದ ಹಲ್ಲೆ

Public TV
1 Min Read
MNG POLICEGIRI COLLAGE

ಮಂಗಳೂರು: ತಮಿಳು ಚಿತ್ರನಟಿ ಅನುಷಾ ಜೊತೆಗೆ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಮುಸ್ಲಿಂ ಯುವಕ ಪರ್ವೇಜ್ ಎಂಬಾತನ ಮೇಲೆ ಹಿಂದು ಸಂಘಟನೆ ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿ ನೆಪದಲ್ಲಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

ಡಿ. 21 ರಂದು ಘಟನೆ ನಡೆದಿದ್ದು ಆಬಳಿಕ ಸುಬ್ರಹ್ಮಣ್ಯ ಠಾಣೆ ಪೊಲೀಸರು ಕೂಡ ಪರ್ವೇಜ್ ಮೇಲೆ ಹಲ್ಲೆ ನಡೆಸಿದ್ದಾಗಿ ಚಿತ್ರನಟಿ ಅನುಷಾ ಆರೋಪಿಸಿದ್ದಾರೆ. ಈ ಬಗ್ಗೆ ವಾಟ್ಸಪ್ ಮೆಸೇಜ್ ನಲ್ಲಿ ತನ್ನ ಹೇಳಿಕೆ ಪ್ರಕಟಿಸಿರುವ ಅನುಷಾ, `ತಾನು ಪೂಜೆಗೆಂದು ಸುಬ್ರಹ್ಮಣ್ಯಕ್ಕೆ ಬಂದಿದ್ದೆ. ಪರ್ವೇಜ್ ಕೇವಲ ಫ್ರೆಂಡ್ ಆಗಿದ್ದು, ಬೇರೆ ಯಾವುದೇ ಸಂಬಂಧ ಇಲ್ಲ. ಠಾಣೆಯಲ್ಲಿ ಈ ಬಗ್ಗೆ ಹೇಳಿದ್ದರೂ ಕೇಳದೆ ಪರ್ವೇಜ್ ಮತ್ತು ತನ್ನ ಮೇಲೆ ಹಲ್ಲೆ’ ನಡೆಸಿದ್ದಾಗಿ ಆರೋಪ ಮಾಡಿದ್ದಾರೆ.

ಇದೀಗ ನಟಿಯ ಹೇಳಿಕೆ ವೈರಲ್ ಆಗಿದ್ದು, ಪೊಲೀಸರು ಲವ್ ಜಿಹಾದ್ ನೆಪದಲ್ಲಿ ಹಲ್ಲೆ ನಡೆಸಿದ್ದಾಗಿ ಆರೋಪ ಕೇಳಿಬಂದಿದೆ.

MNG POLICEGIRI 2

MNG POLICEGIRI 3

MNG POLICEGIRI 1

Share This Article
Leave a Comment

Leave a Reply

Your email address will not be published. Required fields are marked *